ಕಿರುತೆರೆ ನಟಿ ಮತ್ತು ನಿರ್ಮಾಪಕಿ ಶಶಿಕಲಾ ಅಲಿಯಾಸ್ ಸುಶೀಲಮ್ಮ ವಿರುದ್ಧ ನಿರ್ದೇಶಕ ಹರ್ಷವರ್ಧನ್ ಅವರು ವಿಧ್ಯಾರಣ್ಯಪುರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಶಶಿಕಲಾ ಬ್ಲಾಕ್ಮೇಲ್ ಮಾಡಿ ಮದುವೆಗೂ ಒತ್ತಾಯಿಸಿ, ನಂತರ ಮನಸಿಕ ಕಿರುಕುಳ ನೀಡುತ್ತಿರುವುದಾಗಿ ಹರ್ಷವರ್ಧನ್ ಆರೋಪಿಸಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿ ತನಿಖೆ ಮುಂದುವರಿದಿದೆ.
ಹರ್ಷವರ್ಧನ್, ಪ್ರಜಾರಾಜ್ಯ ಸಿನಿಮಾದ ನಿರ್ದೇಶಕರಾಗಿ ಖ್ಯಾತರಾಗಿದ್ದು, 2020ರಲ್ಲಿ ಹೊಸ ಚಿತ್ರದ ಶೂಟಿಂಗ್ ಆರಂಭಿಸಿದ್ದರು. 2021ರ ಮಾರ್ಚ್ನಲ್ಲಿ, ಹರ್ಷವರ್ಧನ್ ಅವರ ಸಿನಿಮಾಗೆ ಹಾಸ್ಯ ಕಲಾವಿದೆಯಾಗಿ ಶಶಿಕಲಾ ಸೇರಿಕೊಂಡರು. ಈ ಸಮಯದಲ್ಲಿ ಶಶಿಕಲಾ ಹರ್ಷವರ್ಧನ್ ಅವರ ಸಂಪರ್ಕವನ್ನು ಪಡೆದು, ಸಿನಿಮಾಗೆ ಹಣ ಹೂಡಿಕೆ ಮಾಡುತ್ತೇನೆಂದು ಭರವಸೆ ನೀಡಿದರಂತೆ.
ರಿಲೇಷನ್ಶಿಪ್ಗೆ ಒತ್ತಾಯ ಶಶಿಕಲಾ ಅವರು ಹಣ ಹೂಡಿಕೆ ಮಾಡುತ್ತೇನೆಂದು ನಂಬಿಸಿ, ಹರ್ಷವರ್ಧನ್ ಅವರೊಂದಿಗೆ ಸಂಬಂಧದಲ್ಲಿ ಇರಲು ಒತ್ತಾಯಿಸಿದರೆಂದು ದೂರು ನೀಡಲಾಗಿದೆ. ಹರ್ಷವರ್ಧನ್ ಮದುವೆಗೆ ನಕಾರ ನೀಡಿದಾಗ, ಶಶಿಕಲಾ ಅವರಿಗೆ ಕೊಲೆದಂಡನೆ ನೀಡುವುದಾಗಿ ಬೆದರಿಸಿದರೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಹರ್ಷವರ್ಧನ್ ಒತ್ತಾಯಕ್ಕೆ ಮಣಿದು 2022ರ ಮಾರ್ಚ್ 5 ರಂದು ಶಶಿಕಲಾ ಅವರೊಂದಿಗೆ ಮದುವೆಯಾಗಿದ್ದಾರೆ.
ಮದುವೆಯ ನಂತರದ ತೊಡಕುಗಳು
ಮದುವೆಯ ನಂತರ ಹರ್ಷವರ್ಧನ್ ಮನೆಗೆ ಶಶಿಕಲಾ ಅವರ ಸ್ನೇಹಿತರು ಮತ್ತು ನಿರ್ಮಾಪಕರು ಬರುತ್ತಿದ್ದರು. ಹರ್ಷವರ್ಧನ್ ಇದನ್ನು ಪ್ರಶ್ನಿಸಿದಾಗ, ಅವರು ಮತ್ತೊಮ್ಮೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆಯೊಡ್ಡಿದರಂತೆ. ಹರ್ಷವರ್ಧನ್ ಅವರ ಪ್ರಕಾರ, 2024ರ ಆಗಸ್ಟ್ನಲ್ಲಿ ಶಶಿಕಲಾ ಅವರು ಜಗಳ ಮಾಡಿ ತಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ.
ಕಿರುಕುಳ ಮತ್ತು ಬೆದರಿಕೆ ಆರೋಪ
ಮನೆಯಿಂದ ದೂರವಾದ ನಂತರವೂ, ಶಶಿಕಲಾ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ಮನಸಿಕ ಕಿರುಕುಳ ನೀಡುತ್ತಿದ್ದಾರೆಂದು ಹರ್ಷವರ್ಧನ್ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಶಶಿಕಲಾ ಅವರ ಈ ವರ್ತನೆಗೆ ಹರ್ಷವರ್ಧನ್ ಅವರ ವೃತ್ತಿಜೀವನದ ಮೇಲೆ ದೊಡ್ಡ ಪ್ರಭಾವ ಬಿದ್ದಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣ ಇದೀಗ ಪೊಲೀಸರ ಗಮನಕ್ಕೆ ಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯ ಸಹಾಯಕ…
ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…
ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…
ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತ ದಾರುಣ ಘಟನೆ ಪೂರ್ವ ಭಾಗದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಲಿವ್-ಇನ್…
ಆನೇಕಲ್ನಲ್ಲಿ ಸಿನಿಮಾವನ್ನು ನೆನಪಿಸುವ ರೀತಿಯಲ್ಲಿ ನಡೆದ ಲಾರಿ ದರೋಡೆ ಪ್ರಕರಣವನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ ಮೂವರು…