Categories: Latest

ಮೇಕಪ್ ಇಲ್ಲದ ಮುಖ ನೋಡಿ ಬೆಚ್ಚಿಬಿದ್ದ ವರ: ಮೊದಲ ರಾತ್ರಿಯೇ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ ಯುವಕ!

ಟರ್ಕಿಯಲ್ಲಿ ನಡೆದ ವಿಚಿತ್ರ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯುವಕ-ಯುವತಿಯ ವಿವಾಹವನ್ನು ಕುಟುಂಬಸ್ಥರು ಅದ್ಧೂರಿಯಾಗಿ ನೆರವೇರಿಸಿದ್ದರು. ನಿಶ್ಚಿತಾರ್ಥದಿಂದ ಮದುವೆ ಸಮಾರಂಭದವರೆಗೂ ವಧು ಭಾರೀ ಮೇಕಪ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಳು. ಆಕೆಯ ಸೌಂದರ್ಯವನ್ನು ನೋಡಿ ವರ ಸೇರಿದಂತೆ ಬಂಧುಮಿತ್ರರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದ ಬಳಿಕ ನಡೆದ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮೊದಲ ರಾತ್ರಿ ಕೋಣೆಗೆ ತೆರಳಿದ ವಧು ತನ್ನ ಮುಖದಲ್ಲಿದ್ದ ಸಂಪೂರ್ಣ ಮೇಕಪ್ ತೆಗೆದುಹಾಕಿದ್ದಾಳೆ. ನಂತರ ಕೋಣೆಗೆ ಬಂದ ವರ, ಮೇಕಪ್ ಇಲ್ಲದ ಪತ್ನಿಯ ನೈಜ ರೂಪವನ್ನು ನೋಡಿ ದಿಗ್ಭ್ರಮೆಗೊಂಡಿದ್ದಾನೆ ಎನ್ನಲಾಗಿದೆ.

ಮದುವೆಗೆ ಮುನ್ನ ತನ್ನ ನಿಜವಾದ ಮುಖವನ್ನು ಮರೆಮಾಚಿ, ಕೇವಲ ಮೇಕಪ್ ಮತ್ತು ಕಾಸ್ಮೆಟಿಕ್ ಉಪಾಯಗಳಿಂದ ತನ್ನನ್ನು ನಂಬಿಸಲಾಗಿದೆ ಎಂದು ಆರೋಪಿಸಿರುವ ವರ, ತಾನು ಮೋಸ ಹೋಗಿದ್ದೇನೆ ಎಂದು ಹೇಳಿದ್ದಾನೆ. “ಆಕೆಯ ನೈಜ ರೂಪ ಮೊದಲೇ ಗೊತ್ತಿದ್ದರೆ ಈ ಮದುವೆಗೆ ಒಪ್ಪುತ್ತಿರಲಿಲ್ಲ” ಎಂದು ಹೇಳಿ, ಮದುವೆಯಾದ ಮೊದಲ ದಿನವೇ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ವಿಚಿತ್ರ ಪ್ರಕರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಕೇವಲ ಬಾಹ್ಯ ಸೌಂದರ್ಯ ನೋಡಿ ಮದುವೆಯಾಗುವ ಮನೋಭಾವವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಮೇಕಪ್ ಆಧರಿಸಿ ಜೀವನ ಸಂಗಾತಿಯನ್ನು ತೀರ್ಮಾನಿಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಒಟ್ಟಾರೆ, “ಮೇಕಪ್ ವಿಚ್ಛೇದನ” ಕಥೆ ಇದೀಗ ನೆಟ್ಟಿಗರ ಹಾಟ್ ಟಾಪಿಕ್ ಆಗಿದೆ.

ಭ್ರಷ್ಟರ ಬೇಟೆ

Recent Posts

ಪ್ರೀತಿಗಾಗಿ ಕೋಟಿ ಸಂಬಳ ತ್ಯಾಗ! UPSC ಪಾಸ್ ಮಾಡಿ IAS ಆದ ಬಿಹಾರದ ಯುವಕನ ರಿಯಲ್ ಲವ್ ಸ್ಟೋರಿ ವೈರಲ್

ಸಿನಿಮಾಗಳಲ್ಲಿ ಪ್ರೀತಿಗಾಗಿ ನಾಯಕರು ದೊಡ್ಡ ದೊಡ್ಡ ಸಾಹಸ ಮಾಡುವ ದೃಶ್ಯಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಆದರೆ ನಿಜ ಜೀವನದಲ್ಲೂ ಪ್ರೀತಿಗಾಗಿ…

15 hours ago

ರೈತರ ಬೆಳೆ ನಾಶಕ್ಕೆ ಆಕ್ರೋಶ: ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ಪ್ರತಿಭಟನೆ

ಸಾಗರ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ ರೈತರ ಬೆಳೆ ನಾಶಪಡಿಸಿದ ಅರಣ್ಯ ಇಲಾಖೆಯ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ಅರಣ್ಯ ಇಲಾಖೆ…

3 days ago

ಗ್ರಾಮಠಾಣ ಜಾಗವನ್ನು ಮುಕ್ತಗೊಳಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು

ಮುಂಡಗೋಡ:ತಾಲೂಕಿನ ಬಾಚಣಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಡಗಟ್ಟಾ ಗ್ರಾಮದಲ್ಲಿ ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಗ್ರಾಮಠಾಣ ಜಾಗವನ್ನು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ…

3 days ago

33 ಕೋಟಿ ಅನುದಾನದಲ್ಲಿ 23 ಕೋಟಿ ರೂ. ದೋಚಿದ ಆರೋಪ: ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗಳ ಮೇಲೆ ಲೋಕಾಯುಕ್ತ ದಾಳಿ

600 ಮನೆಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಲಾಗಿದ್ದ 33 ಕೋಟಿ ರೂಪಾಯಿ ಅನುದಾನದಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆ, ಬೆಳಗಾವಿ…

3 days ago

ರಸ್ತೆಯಲ್ಲಿ ನಮಾಜ್‌ಗೆ ಖಡಕ್‌ ಎಚ್ಚರಿಕೆ: “ನಿಯಮ ಪಾಲಿಸಿ, ಇಲ್ಲವೇ ಪರಿಣಾಮ ಎದುರಿಸಿ” ಎಂದ ಯೋಗಿ

ಉತ್ತರ ಪ್ರದೇಶ ಮುಖ್ಯಮಂತ್ರಿ Yogi Adityanath ಅವರು ರಸ್ತೆಗಳಲ್ಲಿ ನಮಾಜ್‌ ಸಲ್ಲಿಸುವ ಪದ್ಧತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕ…

3 days ago

ವೈರ್ ಕಳ್ಳತನ ಮಾಡ್ತಿದ್ದ ನಾಲ್ವರ ಬಂಧನ

ಅಲ್ಯೂಮಿನಿಯಂ ವೈರ್ ನ್ನು ಇತ್ತೀಚಿಗೆ ಕಿಡಿಗೇಡಿಗಳು ಕಳ್ಳತನ ಮಾಡಿ ಬೇರೆ ಕಡೆ ಸಾಗಿಸುತ್ತಿರುವ ಕಳ್ಳರನ್ನು ಗುಪ್ತ ಮಾಹಿತಿ ಆಧಾರದ ಮೇರೆಗೆ…

5 days ago