Categories: Latest

ಮೇಕಪ್ ಇಲ್ಲದ ಮುಖ ನೋಡಿ ಬೆಚ್ಚಿಬಿದ್ದ ವರ: ಮೊದಲ ರಾತ್ರಿಯೇ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ ಯುವಕ!

ಟರ್ಕಿಯಲ್ಲಿ ನಡೆದ ವಿಚಿತ್ರ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯುವಕ-ಯುವತಿಯ ವಿವಾಹವನ್ನು ಕುಟುಂಬಸ್ಥರು ಅದ್ಧೂರಿಯಾಗಿ ನೆರವೇರಿಸಿದ್ದರು. ನಿಶ್ಚಿತಾರ್ಥದಿಂದ ಮದುವೆ ಸಮಾರಂಭದವರೆಗೂ ವಧು ಭಾರೀ ಮೇಕಪ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಳು. ಆಕೆಯ ಸೌಂದರ್ಯವನ್ನು ನೋಡಿ ವರ ಸೇರಿದಂತೆ ಬಂಧುಮಿತ್ರರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದ ಬಳಿಕ ನಡೆದ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮೊದಲ ರಾತ್ರಿ ಕೋಣೆಗೆ ತೆರಳಿದ ವಧು ತನ್ನ ಮುಖದಲ್ಲಿದ್ದ ಸಂಪೂರ್ಣ ಮೇಕಪ್ ತೆಗೆದುಹಾಕಿದ್ದಾಳೆ. ನಂತರ ಕೋಣೆಗೆ ಬಂದ ವರ, ಮೇಕಪ್ ಇಲ್ಲದ ಪತ್ನಿಯ ನೈಜ ರೂಪವನ್ನು ನೋಡಿ ದಿಗ್ಭ್ರಮೆಗೊಂಡಿದ್ದಾನೆ ಎನ್ನಲಾಗಿದೆ.

ಮದುವೆಗೆ ಮುನ್ನ ತನ್ನ ನಿಜವಾದ ಮುಖವನ್ನು ಮರೆಮಾಚಿ, ಕೇವಲ ಮೇಕಪ್ ಮತ್ತು ಕಾಸ್ಮೆಟಿಕ್ ಉಪಾಯಗಳಿಂದ ತನ್ನನ್ನು ನಂಬಿಸಲಾಗಿದೆ ಎಂದು ಆರೋಪಿಸಿರುವ ವರ, ತಾನು ಮೋಸ ಹೋಗಿದ್ದೇನೆ ಎಂದು ಹೇಳಿದ್ದಾನೆ. “ಆಕೆಯ ನೈಜ ರೂಪ ಮೊದಲೇ ಗೊತ್ತಿದ್ದರೆ ಈ ಮದುವೆಗೆ ಒಪ್ಪುತ್ತಿರಲಿಲ್ಲ” ಎಂದು ಹೇಳಿ, ಮದುವೆಯಾದ ಮೊದಲ ದಿನವೇ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ವಿಚಿತ್ರ ಪ್ರಕರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಕೇವಲ ಬಾಹ್ಯ ಸೌಂದರ್ಯ ನೋಡಿ ಮದುವೆಯಾಗುವ ಮನೋಭಾವವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಮೇಕಪ್ ಆಧರಿಸಿ ಜೀವನ ಸಂಗಾತಿಯನ್ನು ತೀರ್ಮಾನಿಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಒಟ್ಟಾರೆ, “ಮೇಕಪ್ ವಿಚ್ಛೇದನ” ಕಥೆ ಇದೀಗ ನೆಟ್ಟಿಗರ ಹಾಟ್ ಟಾಪಿಕ್ ಆಗಿದೆ.

ಭ್ರಷ್ಟರ ಬೇಟೆ

Recent Posts

‘ಲೀಲಮ್ಮ… ನಿನ್ನ ಗಂಡ ಯಾರಮ್ಮ?’ ಪುಸ್ತಕ ಲೋಕಾರ್ಪಣೆ: ಲೀಲಾವತಿ–ರಾಜ್‌ಕುಮಾರ್‌ ಕುರಿತ ವಿವಾದಗಳಿಗೆ ದಾಖಲೆಗಳ ಸಮೇತ ಉತ್ತರ ಎಂದ ಎನ್‌.ಆರ್‌. ರಮೇಶ್

ಕನ್ನಡದ ಹಿರಿಯ ನಟಿ ದಿವಂಗತ ಲೀಲಾವತಿ ಅವರ ಜೀವನ, ಅವರ ಪತಿ ಮಹಾಲಿಂಗ ಭಾಗವತರ್‌ ಅವರ ಹಿನ್ನೆಲೆ ಹಾಗೂ ಈ…

8 hours ago

‘ನಾನು ಪೋಸ್ಟ್ ಡಿಲೀಟ್ ಮಾಡುವುದಿಲ್ಲ’: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸಂಸದೆ ಪುತ್ರಿಯ ಬಹಿರಂಗ ಸವಾಲ್

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ…

8 hours ago

ತುಮಕೂರಿನಲ್ಲಿ ಭೀಕರ ಹತ್ಯೆ: ರೌಡಿಶೀಟರ್ ಮಲ್ಲನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ತುಮಕೂರು ತಾಲೂಕಿನ ಬೆಳಗುಂಬ ರಸ್ತೆಯಲ್ಲಿರುವ ಗರುಡ ಕೆಫೆ ಸಮೀಪ ರೌಡಿಶೀಟರ್‌ವೊಬ್ಬನನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಹತ್ಯೆಗೈದ ಘಟನೆ ಸೋಮವಾರ ಆತಂಕ…

8 hours ago

ತೊಡೆಯ ಮೇಲೆ ಮಹಿಳೆಯನ್ನು ಕೂರಿಸಿಕೊಂಡು ಆಟೋ ಓಡಿಸಿದ ಅಪ್ರಾಪ್ತ! ವೈರಲ್ ಆದ ವಿಡಿಯೊದ ಅಸಲಿ ಸತ್ಯ ಬಹಿರಂಗ

ಹೈದರಾಬಾದ್‌ನ ಚಾದರ್‌ಘಾಟ್ ಸೇತುವೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಮಹಿಳೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡೇ ಆಟೋರಿಕ್ಷಾ ಚಲಾಯಿಸುತ್ತಿರುವ ವಿಡಿಯೊ ಮತ್ತೊಮ್ಮೆ ಸಾಮಾಜಿಕ…

1 day ago

ಪೊಲೀಸ್-ಪತ್ರಕರ್ತರ ಸೋಗಿನಲ್ಲಿ ₹60 ಸಾವಿರ ಸುಲಿಗೆ! ನಾಲ್ವರು ಯೂಟ್ಯೂಬರ್‌ಗಳು ಅಂದರ್

ಹುಕ್ಕೇರಿ ತಾಲ್ಲೂಕಿನಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ…

1 day ago

ವೇದಿಕೆಯಲ್ಲಿ ಪೊಲೀಸ್ ರಾಜೀನಾಮೆ ಘೋಷಣೆ ವೈರಲ್.. ಆದರೆ ಅಸಲಿ ಕಥೆ ಬೇರೆಯೇ!

ದೆಹಲಿ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು…

1 day ago