ನೋಯ್ಡಾದ ಪ್ರತಿಷ್ಠಿತ ಅಪಾರ್ಟ್ಮೆಂಟ್ ಸೊಸೈಟಿಯೊಂದರಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೇವಲ ₹300 ಮೌಲ್ಯದ ದಿನಸಿ ಸಾಮಗ್ರಿಯ ವಿಚಾರದಲ್ಲಿ ಕೆಲವರ ನೈತಿಕತೆ ಪ್ರಶ್ನೆಗೆ ಒಳಗಾಗುವಂತಾಗಿದೆ. ಈ ಘಟನೆ ಡೆಲಿವರಿ ಬಾಯ್ ಮಾಡಿದ ಸಣ್ಣ ತಪ್ಪಿನಿಂದ ಬೆಳಕಿಗೆ ಬಂದಿದೆ.
ರಿತಿಕಾ ಶರ್ಮಾ ಎಂಬ ಮಹಿಳೆ ಆನ್ಲೈನ್ ಮೂಲಕ ಹಾಲು, ಮೊಸರು ಸೇರಿದಂತೆ ಸುಮಾರು ₹300 ಮೌಲ್ಯದ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಬಾಯ್ ಟವರ್ ಹೆಸರಿನಲ್ಲಿ ಗೊಂದಲಕ್ಕೊಳಗಾಗಿ, “ಬಿ ಟವರ್” ಬದಲಿಗೆ “ಎ ಟವರ್”ನಲ್ಲಿದ್ದ ಅದೇ ಫ್ಲ್ಯಾಟ್ ಸಂಖ್ಯೆಯ ಮನೆಗೆ ಸಾಮಗ್ರಿಗಳನ್ನು ತಲುಪಿಸಿ ಬಂದಿದ್ದಾನೆ. ಎರಡೂ ಟವರ್ಗಳಲ್ಲಿ ಫ್ಲ್ಯಾಟ್ ಸಂಖ್ಯೆ ಒಂದೇ ಆಗಿದ್ದರಿಂದ ಈ ಎಡವಟ್ಟು ಸಂಭವಿಸಿದೆ.
ಬಹಳ ಸಮಯ ಕಳೆದರೂ ಆರ್ಡರ್ ತಲುಪದ ಕಾರಣ ರಿತಿಕಾ ಡೆಲಿವರಿ ಬಾಯ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಆತ ತಾನು ಈಗಾಗಲೇ ಸಾಮಗ್ರಿ ತಲುಪಿಸಿರುವುದಾಗಿ ಹೇಳಿದ್ದಾನೆ. ಬಳಿಕ ವಿಳಾಸ ಪರಿಶೀಲಿಸಿದಾಗ ಟವರ್ ತಪ್ಪಿಸಿರುವುದು ಗೊತ್ತಾಗಿ, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ.
ತಕ್ಷಣ ರಿತಿಕಾ “ಎ ಟವರ್”ನ ಆ ಫ್ಲ್ಯಾಟ್ಗೆ ತೆರಳಿದ್ದಾರೆ. ಅಲ್ಲಿ ಕಂಡ ದೃಶ್ಯ ಅವರನ್ನು ಅಚ್ಚರಿಗೆ ದೂಡಿದೆ. ತಾವು ಆರ್ಡರ್ ಮಾಡದಿದ್ದರೂ ಆ ಮನೆಯವರು ಹಾಲಿನ ಪ್ಯಾಕೆಟ್ ತೆರೆದು ಕಾಯಿಸಲು ಇಟ್ಟಿದ್ದು, ಮೊಸರನ್ನು ಫ್ರಿಡ್ಜ್ನಲ್ಲಿ ಇಟ್ಟಿದ್ದರು. ಉಳಿದ ದಿನಸಿ ಸಾಮಗ್ರಿಗಳನ್ನೂ ಬಳಸಲು ಸಿದ್ಧಪಡಿಸಿದ್ದರು ಎನ್ನಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆ ಕುರಿತು ಚರ್ಚೆಗೆ ಕಾರಣವಾಗಿದೆ. ತಪ್ಪಾಗಿ ಬಂದ ವಸ್ತುಗಳು ತಮ್ಮದಲ್ಲ ಎಂಬುದನ್ನು ತಿಳಿಸುವ ಕನಿಷ್ಠ ಜವಾಬ್ದಾರಿಯನ್ನಾದರೂ ತೋರಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದೇ ವೇಳೆ, ರಿತಿಕಾ ಶರ್ಮಾ ಡೆಲಿವರಿ ಬಾಯ್ ವಿರುದ್ಧ ಕಂಪನಿಗೆ ದೂರು ನೀಡದೆ, ಸ್ವತಃ ಸ್ಥಳಕ್ಕೆ ತೆರಳಿ ವಿಷಯವನ್ನು ಬಗೆಹರಿಸಿಕೊಂಡಿದ್ದಾರೆ. ಇದರಿಂದ ಡೆಲಿವರಿ ಬಾಯ್ ಉದ್ಯೋಗಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಂಡಿದ್ದಾರೆ. ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಒಂದು ಘಟನೆ ಆಧರಿಸಿ ಯಾವುದೇ ವರ್ಗದ ಜನರ ಬಗ್ಗೆ ಸಾಮಾನ್ಯೀಕರಣ ಮಾಡುವುದು ಸರಿಯಲ್ಲ. ಆದರೆ ಪ್ರಾಮಾಣಿಕತೆ ಮತ್ತು ನೈತಿಕತೆ ಎನ್ನುವುದು ಹಣ, ಸ್ಥಾನಮಾನ ಅಥವಾ ಆಸ್ತಿ-ಪಾಸ್ತಿಗಿಂತಲೂ ದೊಡ್ಡ ಮೌಲ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು…
ಭುವನೇಶ್ವರ: ಪತ್ನಿಯ ಹುಟ್ಟುಹಬ್ಬದಂದು ಆಕೆಗೆ ಸರ್ಪ್ರೈಸ್ ನೀಡಲು ಸಂತಸದಿಂದ ಮನೆಗೆ ಬಂದಿದ್ದ ಇಂಜಿನಿಯರ್ ಒಬ್ಬರು ಕೆಲವೇ ಗಂಟೆಗಳಲ್ಲಿ ರಕ್ತದ ಮಡುವಿನಲ್ಲಿ…
ಬಾಗಲಕೋಟೆ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಗಣಿ ಮತ್ತು ಭೂವಿಜ್ಞಾನ…
ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಮ್ಮ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ, ತಮ್ಮ ಮಾತಿನಿಂದ ಯಾರಿಗಾದರೂ…
ಮುಂಡಗೋಡ: ಅರಣ್ಯ ವಲಯದ ಇಂದೂರು ಶಾಖೆಯ ನಂದಿಕಟ್ಟ ಗಸ್ತು ವ್ಯಾಪ್ತಿಯಲ್ಲಿ ಜುಲೈ 17ರಂದು ಪತ್ತೆಯಾದ ಅಕ್ರಮ ಜಿಂಕೆ ಮಾಂಸ ಪ್ರಕರಣದ…
ನಂಜನಗೂಡು: ಮೈಸೂರಿನ ನಂಜನಗೂಡು ತಾಲೂಕಿನ ಕಡಬೂರು ಗ್ರಾಮದಲ್ಲಿ ಒಂಟಿಯಾಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ…