Categories: CinemaLatest

ಸೌಮ್ಯ ಮದುವೆ ವೇದಿಕೆಯಲ್ಲೇ ಗಾಸಿಪ್‌ಗೆ ಬ್ರೇಕ್; ‘ನಾವು ಕೇವಲ ಆತ್ಮೀಯ ಸ್ನೇಹಿತರು’ ಎಂದ ಅಶ್ವತಿ ನಾಯರ್

ಕನ್ನಡ ಕಿರುತೆರೆಯ ಜನಪ್ರಿಯ ನಟಿ ವಿ.ಎಸ್. ಸೌಮ್ಯ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಹಾಗೂ ಫಿಟ್ನೆಸ್ ಟ್ರೈನರ್ ಗೌತಮ್ ಅವರೊಂದಿಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ವಿವಾಹ ಸಮಾರಂಭವು ಸಂತಸಕ್ಕೆ ಕಾರಣವಾಗಿದ್ದರೆ, ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಕೂಡ ತೆರೆ ಎಳೆದಿದೆ.

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಅಶ್ವತಿ ನಾಯರ್ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮತ್ತು ಸೌಮ್ಯ ನಡುವಿನ ಸಂಬಂಧದ ಬಗ್ಗೆ ಹರಡುತ್ತಿದ್ದ ‘ಲೆಸ್ಬಿಯನ್’ ಎಂಬ ಗಾಸಿಪ್‌ಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. “ಬಹಳ ದಿನಗಳಿಂದ ನಮ್ಮ ಬಗ್ಗೆ ಆ ರೀತಿಯ ಕಾಮೆಂಟ್‌ಗಳು ಬರುತ್ತಿದ್ದವು. ಆರಂಭದಲ್ಲಿ ಅದನ್ನು ನಾವು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗಲಾದರೂ ಆ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ಸೌಮ್ಯ ನನಗೆ ಅಕ್ಕನಂತವರು. ನಾವು ಕೇವಲ ಆತ್ಮೀಯ ಸ್ನೇಹಿತರು. ನಮಗೆ ನಮ್ಮದೇ ಆದ ವೈಯಕ್ತಿಕ ಜೀವನವಿದೆ,” ಎಂದು ಅಶ್ವತಿ ಹೇಳಿದ್ದಾರೆ.

ತಮ್ಮ ಸ್ನೇಹದ ಬಗ್ಗೆ ಭಾವುಕರಾಗಿ ಮಾತನಾಡಿದ ಅವರು, “ಸೌಮ್ಯ ಯಾವಾಗಲೂ ನನ್ನ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿರುತ್ತಾರೆ. ಈಗ ಅವರ ಪತಿ ಗೌತಮ್ ಕೂಡ ನನ್ನ ಆತ್ಮೀಯ ಸ್ನೇಹಿತರಾಗಿದ್ದಾರೆ. ಅವರಿಬ್ಬರೂ ಸದಾ ಸಂತೋಷವಾಗಿರಲಿ ಎಂಬುದೇ ನನ್ನ ಹಾರೈಕೆ,” ಎಂದು ಶುಭ ಹಾರೈಸಿದರು.

ನಟಿ ಸೌಮ್ಯ ಅವರು ಕಿರುತೆರೆಯಲ್ಲಿ ‘ಲೇಡೀಸ್ ರೂಮ್’ ಹಾಗೂ ‘ಟೀಚರಮ್ಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ನಟನಾ ಕ್ಷೇತ್ರಕ್ಕೆ ಬರುವ ಮೊದಲು ಅವರು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಗೆದ್ದ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅವರ ಪ್ರತಿಭೆಯನ್ನು ಗಮನಿಸಿದ ನಿರ್ದೇಶಕರು ನಟನೆಯ ಅವಕಾಶ ನೀಡಿದ್ದರು.

ಇದೀಗ ಗೌತಮ್ ಅವರೊಂದಿಗೆ ಹೊಸ ಜೀವನ ಆರಂಭಿಸಿರುವ ಸೌಮ್ಯ ಅವರಿಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಇದೇ ವೇಳೆ ಅಶ್ವತಿ ನಾಯರ್ ಅವರ ಸ್ಪಷ್ಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಭ್ರಷ್ಟರ ಬೇಟೆ

Recent Posts

ನಂಜನಗೂಡಿನಲ್ಲಿ ‘ನಕಲಿ ಮಂಗಳಮುಖಿ’: ಒಂದೆಡೆ ಎರಡು ಮಕ್ಕಳ ತಂದೆ…ಮತ್ತೊಂದೆಡೆ ಮಂಗಳಮುಖಿ…!

ನಂಜನಗೂಡು: ಮಂಗಳಮುಖಿಯ ವೇಷ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…

10 hours ago

ವಾಟ್ಸಾಪ್ ಸ್ಟೇಟಸ್‌ನಿಂದ ಬಯಲಾಯ್ತು ಪತ್ನಿಯ ಎರಡನೇ ಮದುವೆ; ಗಂಡನಿಗೆ ಶಾಕ್, ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ!

ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸುಮಾರು 20 ವರ್ಷಗಳ ವೈವಾಹಿಕ…

10 hours ago

ಮುಂಡಗೋಡಿನಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ, ಅಪ್ರಾಪ್ತೆಯ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿ ನಡೆಯಲಿದ್ದ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಮಯೋಚಿತವಾಗಿ ತಡೆಗಟ್ಟುವಲ್ಲಿ…

1 day ago

ಚಿಪ್ಪಿಕಲ್ಲು ದುರಂತದ ನೋವು ತಾಳಲಾರದೆ ಯುವಕ ಸಾವು; ತಾಯಿಯನ್ನು ಕಳೆದುಕೊಂಡ ಕುಟುಂಬಕ್ಕೆ ಮತ್ತೊಂದು ಆಘಾತ

ಭಟ್ಕಳ: ವೆಂಕಟಾಪುರ ನದಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಚಿಪ್ಪಿಕಲ್ಲು ದುರಂತದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕುಟುಂಬದವರನ್ನು ಹಾಗೂ…

1 day ago

ಕೆಬಿಜೆಎನ್ಎಲ್ ಶಾಖಾ ಕಾಲುವೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಆರೋಪ; ರೈತರ ಆಕ್ರೋಶ, ಹೋರಾಟದ ಎಚ್ಚರಿಕೆ

ವಿಜಯಪುರ: ರೈತರಿಗೆ ನೀರಾವರಿ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅದರ ಭಾಗವಾಗಿ ಬಸವನ ಬಾಗೇವಾಡಿ…

1 day ago

₹79.36 ಲಕ್ಷ ವೆಚ್ಚದ ಲಿಂಗಣ್ಣ ಕಾಲೋನಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಮೊದಲ ಹಂತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಬಳ್ಳಾರಿ ನಗರದ ಗಾಂಧಿನಗರ 22ನೇ ವಾರ್ಡ್‌ನ ಸೊಂತ ಲಿಂಗಣ್ಣ ಕಾಲೋನಿಯ…

1 day ago