ಗುಜರಾತ್ನ ವಡೋದರಾದ ಸುರ್ಸಾಗರ್ ಸರೋವರದಲ್ಲಿ 111 ಅಡಿ ಎತ್ತರದ ಶಿವನ ಪ್ರತಿಮೆಯನ್ನು 12 ಕೋಟಿ ರೂಪಾಯಿ ಮೌಲ್ಯದ ಚಿನ್ನದಿಂದ ಮಾಡಲಾಗಿದೆ. ಈ ಮೂರ್ತಿ ನಿರ್ಮಾಣಕ್ಕಾಗಿ 17.5 ಕೆಜಿ ಚಿನ್ನ ಬಳಸಲಾಗಿದೆ.
ಮಂಜಲ್ಪುರ ಶಾಸಕ ಯೋಗೀಶ್ ಪಟೇಲ್ ನೇತೃತ್ವದಲ್ಲಿ ಸತ್ಯಂ, ಶಿವಂ, ಸುಂದರಂ ಸಮಿತಿ ಎಂಬ ಟ್ರಸ್ಟ್ ಈ ಬೃಹತ್ ಶಿವನ ಪ್ರತಿಮೆಯನ್ನು ಸ್ಥಾಪಿಸಿದೆ. ಈ ಪ್ರತಿಮೆಯ ನಿರ್ಮಾಣ ಕಾರ್ಯ 1996 ರಲ್ಲಿ ಪ್ರಾರಂಭವಾಗಿ 2002 ರಲ್ಲಿ ಪೂರ್ಣಗೊಂಡಿತು. ಈ ವಿಗ್ರಹ ಆಗ ತಾಮ್ರದಿಂದ ಮಾಡಲ್ಪಟ್ಟಿತ್ತು. ನಂತರ, ಸ್ವರ್ಣ ಸಂಕಲ್ಪ ಪ್ರತಿಷ್ಠಾನವು ಪ್ರತಿಮೆಗೆ ಚಿನ್ನದ ಲೇಪನ ಮಾಡಲು ನಿರ್ಧರಿಸಿತು. ಅಂತಿಮವಾಗಿ ದೇವಾದಿದೇವನ ವಿಗ್ರಹ ಇದೀಗ ಸ್ವರ್ಣಲೇಪನದಲ್ಲಿದೆ. ಸ್ವರ್ಣ ಲೇಪನಕ್ಕೆ ಅಗತ್ಯ ಹಣ ನೀಡಲು ಜನರು ಮುಂದೆ ಬಂದು ಸತ್ಯಂ, ಶಿವಂ, ಸುಂದರಂ ಸಮಿತಿ ಟ್ರಸ್ಟ್ ಗೆ ದೇಣಿಗೆ ರೂಪದಲ್ಲಿ ನೆರವು ನೀಡಿದರು. ಹೀಗಾಗಿ 17.5 ಕೆಜಿ ಚಿನ್ನವನ್ನು ಚಿನ್ನದ ಲೇಪನಕ್ಕೆ ಬಳಸಲಾಗಿದ್ದು, 12 ಕೋಟಿ ರೂಪಾಯಿ ವೆಚ್ಚವಾಗಿದೆ.
ವಡೋದರದಲ್ಲಿ ಶಿವನ ವಾರ್ಷಿಕ ಮೆರವಣಿಗೆಯು ಸುರ್ಸಾಗರ್ ಬಳಿ ಕೊನೆಗೊಳ್ಳುತ್ತದೆ. ನಂತರ ವಿಗ್ರಹದ ಬಳಿ ಆರತಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರವರು 111 ಅಡಿ ಚಿನ್ನದ ಲೇಪಿತ ಶಿವನ ಪ್ರತಿಮೆಯನ್ನು ವಡೋದರಾಕ್ಕೆ ಮಹಾಶಿವರಾತ್ರಿಯ ಸಂದರ್ಭದಲ್ಲಿ ಅಧಿಕೃತವಾಗಿ ಸಮರ್ಪಿಸಲಿದ್ದಾರೆ. ವಡೋದರಾ ನಗರದ ಜನರು ಈ ಹಬ್ಬಗಳಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ಶಿವನ ಮೂರ್ತಿ ಅನಾವರಣಕ್ಕೆ ಜನಸಾಗರವೇ ಹರಿದು ಬರಲಿದೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…