Latest

ಬಾಲಕಿಯರ ಮೇಲೆ ಗ್ಯಾಂಗ್​​ ರೇಪ್: ಗೋವಾಕ್ಕೆ ಬರಬೇಕು ಇಲ್ಲವಾದರೆ ವಿಡಿಯೋ ಹೊರಬಿಡುತ್ತೇವೆ ಎಂದಿದ್ದ ಆರೋಪಿಗಳು.!

ಬೆಳಗಾವಿ, ಜನವರಿ 15: ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮದ ಸಮೀಪದಲ್ಲಿ ಗ್ಯಾಂಗ್ ರೇಪ್‌ ಪ್ರಕರಣವು ನಡೆಯಿದ್ದು, ಮೂವರು ಆರೋಪಿಗಳು ಬಂಧಿತನಾಗಿದ್ದಾರೆ. ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಎಂದು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು, "ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂನಲ್ಲಿ ಓರ್ವ ಬಾಲಕಿಯನ್ನು ಪರಿಚಯಿಸಿಕೊಂಡಿದ್ದನು. ಅವನು 'ನಾನು ಸವದತ್ತಿಗೆ ಹೋಗುತ್ತಿದ್ದೇನೆ, ನೀನು ಕೂಡ ಬಾ' ಎಂದು ಅವಳನ್ನು ಪ್ರಚೋದಿಸಿದ್ದನು. ನಂಬಿದ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹಾರೂಗೇರಿ ಬಸ್ ನಿಲ್ದಾಣಕ್ಕೆ ಹೋಗಿದ್ದಾಳೆ" ಎಂದು ತಿಳಿಸಿದ್ದಾರೆ.
"ಅಲ್ಲಿ, ಆರೋಪಿ ಅಭಿಷೇಕ್, ಕಾರಿನಲ್ಲಿ ಇತರ ಇಬ್ಬರು ಆರೋಪಿಗಳೊಂದಿಗೆ ಸಂತ್ರಸ್ತರನ್ನು ಕರೆದೊಯ್ಯುತ್ತಾನೆ. ಅವರನ್ನು ಎರ್ಟಿಗಾ ಕಾರಿನಲ್ಲಿ ಸವಸುದ್ದಿ ಗ್ರಾಮದ ಗುಡ್ಡಗಾಡು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರು ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ" ಎಂದು ಡಾ. ಗುಳೇದ್ ವಿವರಿಸಿದರು.
"ಈ ವೇಳೆ, ಕಾರಿನಲ್ಲಿ ಕುಳಿತಿದ್ದ ಆರೋಪಿ ಆದಿಲ್ ಜಮಾದಾರ್ ಮತ್ತೊಂದು ಬಾಲಕಿಯನ್ನು ಗ್ಯಾಂಗ್ ರೇಪ್‌ ಮಾಡಿ, ನಂತರ ಅವರು ಸಂತ್ರಸ್ತರಿಗೆ ಬ್ಲ್ಯಾಕ್‌ಮೇಲ್ ಮಾಡಿದರು. 'ಗೋವಾಕ್ಕೆ ಬರಬೇಕು, ಇಲ್ಲವಾದರೆ ವಿಡಿಯೋವನ್ನು ವೈರಲ್ ಮಾಡುತ್ತೇವೆ' ಎಂದು ಬೆದರಿಕೆ ಹಾಕಿದ್ರು" ಎಂದು ಅವರು ತಿಳಿಸಿದರು.
"ಬಾಲಕಿಯರು ಈ ಕುರಿತು ಮನೆಯಲ್ಲಿ ಮಾಹಿತಿ ನೀಡಿದ್ದು, ಜನವರಿ 13 ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದರು. 24 ಗಂಟೆಗಳೊಳಗೆ ಇಬ್ಬರು ಆರೋಪಿಗಳು ಬಂಧಿತರಾಗಿದ್ದಾರೆ. ನಂತರ ಮತ್ತೊಬ್ಬ ಆರೋಪಿ ಬಂಧಿಸಲ್ಪಟ್ಟನು" ಎಂದು ಅವರು ಹೇಳಿದರು.
"ಆರೋಪಿಗಳ ಹಿನ್ನಲೆಯನ್ನು ಪರಿಶೀಲಿಸಲಾಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಆರೋಪಿಗಳ ಮೊಬೈಲ್‌ಗಳನ್ನು ಜಪ್ತಿ ಮಾಡಿದಾಗ, ಗ್ಯಾಂಗ್ ರೇಪ್‌ ಸಂಬಂಧಿ ವೀಡಿಯೋಗಳು ಪತ್ತೆಯಾಗಿದೆ" ಎಂದು ಅವರು ಕೊನೆಗೆ ತಿಳಿಸಿದ್ದಾರೆ.
nazeer ahamad

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

11 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

16 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

16 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

16 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

16 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

21 hours ago