Latest

ಮನೆಯೊಳಗೆ ನುಗ್ಗಿ ಬಂಗಾರ ಆಭರಣ ಕಳ್ಳತನ ಮಾಡಿದ್ದ ನಾಲ್ವರು ಪೊಲೀಸರ ಬಲೆಗೆ.

ಶಿರಸಿ;  ಮನೆಯೊಳಗಿದ್ದ ಲಕ್ಷಾಂತರ ರೂಪಾಯಿ ನಗದು ಹಾಗೂ ಬಂಗಾರದ ಆಭರಣ ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬನವಾಸಿ ಪೋಲಿಸರು ಬಂಧಿಸಿದ್ದಾರೆ.

ಶಿರಗೋಡದ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ (೧೯ ), ಬನವಾಸಿ ಯ ವಿಶ್ವ ಮಹೇಶ ಪಾವಸ್ಕರ, (೨೧), ಬನವಾಸಿ ಕಡಗೋಡದ,  ಯಾಸೀನ್ ಬಾಷಾಸಾಬ್ (೧೮) ಹಾಗೂ ಹೊಸಪೇಟೆ ರಸ್ತೆ ಬನವಾಸಿಯ, ರಿಯಾಜ್ ತಂದೆ ಇಕ್ಬಾಲ್ ಚೌಧರಿತ (೧೯) ಆರೋಪಿಗಳಾಗಿದ್ದಾರೆ. ಆರೋಪಿಗಳು ಸ.೭ರಂದು ಬನವಾಸಿ ಯ ಖಲೀಲ ಅಬ್ದುಲ್ ಅಜೀಂ ಶೇಖ್ ಎಂಬಾತರ ಮನೆಯ ಒಳಗಡೆ ನುಗ್ಗಿ ಸುಮಾರು ೨,೫೫,೦೦೦ ರೂ, ನಗದು ಹಣ ಹಾಗೂ ಸುಮಾರು ೪ ಗ್ರಾಂ ತೂಕದ ಬಂಗಾರದ ನಮೂನೆಯ ಸಣ್ಣ ಉಂಗುರುಗಳು ೪.೦೦೦=೦೦ ರೂ, ಬೆಲೆಯವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಗಿಳಿದ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಮೊದಲನೇ ಆರೋಪಿಯಾದ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ ಈತನು ಪೆ.೧೬ರಂದು ಬನವಾಸಿ ಯ ಸುಮರ್ಣಾ ಮಾಲತೇಶ ಎಂಬಾತರ ಮನೆಯನ್ನು ಕಳ್ಳತನ ಮಾಡಿದ್ದನ್ನೂ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಪೋಲಿಸ್ ತನಿಖೆ ಯಿಂದ ಎರಡು ಪ್ರಕರಣಕ್ಕೆ ಸಂಬಂಧಿಸಿ ಒಟ್ಟು-೨,೭೫,೦೦೦ ನಗದು ಹಾಗೂ ೧೦ ಗ್ರಾಂ ಬಂಗಾರದ  ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಯಲ್ಲಿ ಡಿವೈಎಸ್ಪಿ ರವಿನಾಯ್ಕ ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನ ದಲ್ಲಿ ಬನವಾಸಿ ಠಾಣೆ ಪಿಎಸ್ಐ ಗಳಾದ ಹನುಮಂತ ಬೀರಾದಾರ, ಚಂದ್ರಕಲಾ ಪತ್ತಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು

ಭ್ರಷ್ಟರ ಬೇಟೆ

Recent Posts

ಕುಡಿತದ ದುರಂತ ಅಂತ್ಯ: ಆಸ್ತಿ ಹಣದ ಜಗಳಕ್ಕೆ ತಾಯಿಯನ್ನೇ ಕೊಂದ ಮಗಳು-ಮೊಮ್ಮಗ!

ಬೆಂಗಳೂರು ನಗರದ ಕೆಂಗೇರಿ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದ ಭೀಕರ ಘಟನೆ ಒಂದು ಕುಟುಂಬದ ದುಸ್ಥಿತಿಯನ್ನು ಬಯಲಿಗೆಳೆದಿದೆ. ಮದ್ಯಪಾನದ…

4 hours ago

ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ: ಪ್ರೌಢಶಾಲಾ ಶಿಕ್ಷಕಿ ಬಂಧನ

ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ…

4 hours ago

ಬಿಡದಿ ಟೌನ್‌ಶಿಪ್‌ ವಿರೋಧ ನಾಟಕ: ಅಲ್ಲಿ ಅನಿತಾ ಕುಮಾರಸ್ವಾಮಿ 100 ಎಕರೆ ಜಮೀನಿದೆ, ಕುಮಾರಸ್ವಾಮಿ ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

7 hours ago

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಆರ್‌ಡಿಪಿಆರ್ ಎಇಇ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ

ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಸಹಾಯಕ…

7 hours ago

ಸಚಿವ ಸತೀಶ್ ಜಾರಕಿಹೊಳಿ ಅಳಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ಇಡಿ ದಾಳಿ

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…

7 hours ago

ಮದುವೆಗೆ ಕೆಲವೇ ದಿನ ಬಾಕಿ… ಭಾವಿ ಪತ್ನಿಯಿಂದಲೇ 400 ಅಡಿ ಕಣಿವೆಗೆ ತಳ್ಳಿ ಹತ್ಯೆ!

ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…

7 hours ago