Latest

ಮನೆಯೊಳಗೆ ನುಗ್ಗಿ ಬಂಗಾರ ಆಭರಣ ಕಳ್ಳತನ ಮಾಡಿದ್ದ ನಾಲ್ವರು ಪೊಲೀಸರ ಬಲೆಗೆ.

ಶಿರಸಿ;  ಮನೆಯೊಳಗಿದ್ದ ಲಕ್ಷಾಂತರ ರೂಪಾಯಿ ನಗದು ಹಾಗೂ ಬಂಗಾರದ ಆಭರಣ ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬನವಾಸಿ ಪೋಲಿಸರು ಬಂಧಿಸಿದ್ದಾರೆ.

ಶಿರಗೋಡದ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ (೧೯ ), ಬನವಾಸಿ ಯ ವಿಶ್ವ ಮಹೇಶ ಪಾವಸ್ಕರ, (೨೧), ಬನವಾಸಿ ಕಡಗೋಡದ,  ಯಾಸೀನ್ ಬಾಷಾಸಾಬ್ (೧೮) ಹಾಗೂ ಹೊಸಪೇಟೆ ರಸ್ತೆ ಬನವಾಸಿಯ, ರಿಯಾಜ್ ತಂದೆ ಇಕ್ಬಾಲ್ ಚೌಧರಿತ (೧೯) ಆರೋಪಿಗಳಾಗಿದ್ದಾರೆ. ಆರೋಪಿಗಳು ಸ.೭ರಂದು ಬನವಾಸಿ ಯ ಖಲೀಲ ಅಬ್ದುಲ್ ಅಜೀಂ ಶೇಖ್ ಎಂಬಾತರ ಮನೆಯ ಒಳಗಡೆ ನುಗ್ಗಿ ಸುಮಾರು ೨,೫೫,೦೦೦ ರೂ, ನಗದು ಹಣ ಹಾಗೂ ಸುಮಾರು ೪ ಗ್ರಾಂ ತೂಕದ ಬಂಗಾರದ ನಮೂನೆಯ ಸಣ್ಣ ಉಂಗುರುಗಳು ೪.೦೦೦=೦೦ ರೂ, ಬೆಲೆಯವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಗಿಳಿದ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಮೊದಲನೇ ಆರೋಪಿಯಾದ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ ಈತನು ಪೆ.೧೬ರಂದು ಬನವಾಸಿ ಯ ಸುಮರ್ಣಾ ಮಾಲತೇಶ ಎಂಬಾತರ ಮನೆಯನ್ನು ಕಳ್ಳತನ ಮಾಡಿದ್ದನ್ನೂ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಪೋಲಿಸ್ ತನಿಖೆ ಯಿಂದ ಎರಡು ಪ್ರಕರಣಕ್ಕೆ ಸಂಬಂಧಿಸಿ ಒಟ್ಟು-೨,೭೫,೦೦೦ ನಗದು ಹಾಗೂ ೧೦ ಗ್ರಾಂ ಬಂಗಾರದ  ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಯಲ್ಲಿ ಡಿವೈಎಸ್ಪಿ ರವಿನಾಯ್ಕ ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನ ದಲ್ಲಿ ಬನವಾಸಿ ಠಾಣೆ ಪಿಎಸ್ಐ ಗಳಾದ ಹನುಮಂತ ಬೀರಾದಾರ, ಚಂದ್ರಕಲಾ ಪತ್ತಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು

ಭ್ರಷ್ಟರ ಬೇಟೆ

Recent Posts

ಚಲಿಸುವ ರೈಲು ಕೆಳಗೆ ಸಿಲುಕಿದ ತಂದೆ-ಮಗು: ಅದಮ್ಯ ಧೈರ್ಯದಿಂದ ಪಾರಾದ ಜೀವಗಳು!

ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಭೈರಬ್ ರೈಲು ನಿಲ್ದಾಣದಲ್ಲಿ ನಡೆದ ಹೃದಯ ಕಲುಕುವ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ…

11 hours ago

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ: ಅಥಣಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ 15 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು ಗಂಡನ ವರದಕ್ಷಿಣೆ ಕಿರುಕುಳಕ್ಕೆ…

11 hours ago

ಬಿಜೆಪಿ ಯುವ ಮೋರ್ಚಾ ನಾಯಕ ವೆಂಕಟೇಶ್ ಕೊಲೆ ಪ್ರಕರಣ: ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು…

11 hours ago

66ರ ವೃದ್ಧನಿಗೆ 35ರ ಯುವತಿಯೊಂದಿಗೆ ಮದುವೆ! ವಯಸ್ಸು ಕೇವಲ ಸಂಖ್ಯೆ ಮಾತ್ರವೇ?

66 ವರ್ಷದ ಸೋಮ್ ದೇವ್ ಮತ್ತು 35 ವರ್ಷದ ಯುವತಿಯ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.…

11 hours ago

ವಿಮೆ-ಆಸ್ತಿ ಲಾಭಕ್ಕಾಗಿ ಗಂಡನ ಕೊಲೆ: ಹರಿಯಾಣದಲ್ಲಿ ಪ್ರಿಯಕರ ನೊಂದಿಗೆ ಪತ್ನಿ ರಚಿಸಿದ್ದ ಸಂಚು ಬಯಲು.!

ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಮಾನವ ಸಂಬಂಧಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ,…

11 hours ago

ಬೆಂಗಳೂರು ಡ್ರಗ್ಸ್ ಜಾಲದ ಮೇಲೆ ಭಾರೀ ದಾಳಿ: ₹36 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, 16 ಮಂದಿ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…

16 hours ago