ಬೆಂಗಳೂರು: ಮನೆಯ ಪಾಯ ಹಾಕುವಾಗ ನಿಧಿ ಸಿಕ್ಕಿದೆ ಎಂಬ ನಾಟಕವಾಡಿ, ಚಿನ್ನದ ಪಾಲಿಶ್ ಮಾಡಿದ ಮರದ ತುಂಡು ಮತ್ತು ಇಟ್ಟಿಗೆ ಮಾರಾಟ ಮಾಡುತ್ತಿದ್ದ ಮೂವರು ವಂಚಕರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರು ಯಾರು?
ಪೊಲೀಸರು ಬಂಧಿಸಿರುವ ಆರೋಪಿಗಳನ್ನು ರಬಿಕುಲ್ ಇಸ್ಲಾಂ, ಇದ್ದಿಶ್ ಅಲಿ, ಅನ್ವರ್ ಹುಸೇನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮೂಲತಃ ಬಿಹಾರದವರು.
ಮೋಸದ ಮಾದರಿ
ಆರೋಪಿಗಳು ಜನರನ್ನು ಮೋಸಗೊಳಿಸುವುದಕ್ಕಾಗಿ ಶ್ರದ್ಧೆಯುಳ್ಳ ಮನೆಮಾಲಕರನ್ನು ಗುರಿಯಾಗಿಸಿಕೊಂಡಿದ್ದರು. ಮನೆ ಪಾಯ ಹಾಕುವಾಗ ಅಥವಾ ಪುನಾರ್ಮಾನ ನಡೆಸುವ ಸಂದರ್ಭದಲ್ಲಿ ನಿಧಿ ಸಿಕ್ಕಿದೆ ಎಂಬಂತೆ ಕಥೆ ಕಟ್ಟುತ್ತಿದ್ದರು. ಚಿನ್ನದ ಬಣ್ಣದ ಪಾಲಿಶ್ ಮಾಡಿದ ಮರದ ಹಲಗೆಗಳು, ಇಟ್ಟಿಗೆಗಳು ಚಿನ್ನದ ಟೋಕನ್ಸ್ ಆಗಿ ಮಾರಾಟ ಮಾಡುತ್ತಿದ್ದರು.
ನಂಬಿಕೆ ಗಳಿಸಲು ವಿಶೇಷ ತಂತ್ರ
ಜನರನ್ನು ಸಂಪೂರ್ಣ ನಂಬಿಸುವ ಉದ್ದೇಶದಿಂದ, ಆರಂಭದಲ್ಲಿ ಒಂದೆರಡು ಗ್ರಾಂ ನಿಜವಾದ ಚಿನ್ನ ನೀಡುತ್ತಿದ್ದರು. ಇದರಿಂದ ಖರೀದಿಸುವವರು ಮೋಸವಾದಿ ಎಂದು ಅನುಮಾನ ಪಡದೆ, ಹೆಚ್ಚಿನ ಚಿನ್ನ ಖರೀದಿಸಲು ಮುಂದಾಗುತ್ತಿದ್ದರು. ಇದನ್ನು ಅರಿತುಕೊಂಡ ಆರೋಪಿಗಳು ನಂತರ ನಕಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದರು.
ಸ್ಥಳ ಬದಲಿಸುವ ಚಾಲಾಕಿತನ
ಒಮ್ಮೆ ವಂಚನೆ ಮಾಡಿ ಹಣ ಪಡೆದುಕೊಂಡರೆ, ಆರೋಪಿಗಳು ತಕ್ಷಣವೇ ತಮ್ಮ ಸ್ಥಳ ಬದಲಾಯಿಸಿ ಬೇರೆಡೆ ತೆರಳುತ್ತಿದ್ದರು. ಅಲ್ಲದೇ, ತಮ್ಮ ಮೊಬೈಲ್ ಸಂಖ್ಯೆ ಯಾರಿಗೂ ನೀಡುತ್ತಿರಲಿಲ್ಲ ಅವರ ಮೇಲೆ ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದರು.
ಸಿಸಿಬಿ ದಾಳಿ – ಮೂವರು ಬಂಧನ
ಈ ಕುರಿತು ಕೊರಮಂಗಲದ ಸಿಸಿಬಿ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿಗಳ ಕಾರ್ಯವೈಖರಿಯನ್ನು ನಿಗಾ ಇಟ್ಟು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 970 ಗ್ರಾಂ ನಕಲಿ ಚಿನ್ನ, ಒಂದು ವಾಹನ, ಮೂರು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಇನ್ನಷ್ಟು ವಂಚನೆ ಪ್ರಕರಣಗಳ ಮಾಹಿತಿ ಲಭ್ಯ
ಪೊಲೀಸರು ಈ ಮೂವರು ಇನ್ನಷ್ಟು ಜನರನ್ನು ವಂಚಿಸಿರುವ ಸಾಧ್ಯತೆ ಇದೆ ಎಂದು ಶಂಕಿಸುತ್ತಿದ್ದು, ಮುಂದಿನ ತನಿಖೆ ಮುಂದುವರೆದಿದೆ. ಜನರು ಅಂಥ ವಂಚನೆಗಳಿಗೆ ತುತ್ತಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…