2022ರಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಸವರಾಜ್ ದಡೇಸುಗೂರು ಅವರ ಆಡಿಯೋ ಮತ್ತೆ ಸಂಚಲನ ಮೂಡಿಸಿರುವ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆ ವೇಳೆಗೆ ಭಾರೀ ವಿವಾದ ಸೃಷ್ಟಿಸಿದ್ದ ಆ ಮಾಧ್ಯಮದ ಸಂಭಾಷಣೆಯು ಈಗ ಮತ್ತೊಮ್ಮೆ ಪ್ರಸ್ತಾಪಕ್ಕೆ ಬಂದಿದೆ.
ಶಾಸಕರ ನಿರಾಕರಣೆ, ಆದರೆ ಈಗ ಅಧಿಕೃತ ಒಪ್ಪಿಗೆ?
2022ರಲ್ಲಿ ದಡೇಸುಗೂರು ಅವರ ಹೆಸರಿನಲ್ಲಿ ವೈರಲ್ ಆದ ಆಡಿಯೋಗೆ ಅವರು ತಕ್ಷಣವೇ ಸ್ಪಷ್ಟನೆ ನೀಡಿದ್ದು, ಅದು ತಮ್ಮದು ಅಲ್ಲ ಎಂದು ಹೇಳಿದ್ದರು. ಆದರೆ, ಈಗ ವಿಜಯನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ವೇತಾ ಉಪಲೋಕಾಯುಕ್ತರ ಮುಂದೆ ಬಸವರಾಜ್ ದಡೇಸುಗೂರು ಅವರೇ ತಮ್ಮ ಪತಿ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ, ಈ ಪ್ರಕರಣಕ್ಕೆ ಹೊಸ ಮೈಲಿಗಲ್ಲು ಸೇರಿದಂತಾಗಿದೆ.
ಆಡಿಯೋ ಹಿನ್ನಲೆ: ಲವ್ ಕಂಆರೆಂಜ್ ಮ್ಯಾರೇಜ್?
ಅಂದು ಕೇವಲ ಆಡಿಯೋ ಮಾತ್ರವಿತ್ತು, ಆದರೆ ಈಗ ಡಿಡಿ ಶ್ವೇತಾ ಅವರ ಹೇಳಿಕೆಯಿಂದ ಅವರ ಸಂಬಂಧ ಅಧಿಕೃತವಾಗಿದೆ ಎಂಬ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿವೆ. 2022ರಲ್ಲಿ ಪ್ರಚಲಿತವಾಗಿದ್ದ ಈ ಪ್ರೇಮಕಥೆ ಇದೀಗ ಮದುವೆಯಾಗಿ ಪರಿವರ್ತನೆಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಪಲೋಕಾಯುಕ್ತರ ಮುಂದೆ ಬಯಲಾಯ್ತು ನಿಜ?
ಬಸವರಾಜ್ ದಡೇಸುಗೂರು, ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಕಾರಣ, ಈ ವಿಷಯವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಉಪಲೋಕಾಯುಕ್ತ ವೀರಪ್ಪ ಅವರ ವಿಚಾರಣೆಯ ವೇಳೆ, ಶ್ವೇತಾ ಅವರೇ “ಬಸವರಾಜ್ ದಡೇಸುಗೂರು ನನ್ನ ಪತಿ” ಎಂದು ಸ್ಪಷ್ಟವಾಗಿ ಉತ್ತರಿಸಿದಂತೆ ವರದಿಯಾಗಿದೆ. ಇದಲ್ಲದೆ, ಈ ಕುರಿತು ಈಗ ವಿಡಿಯೋ ಕೂಡ ವೈರಲ್ ಆಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.
ಶಾಸಕರ ಮೌನ: ಮದುವೆ ಸತ್ಯವೋ?
2022ರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ವಿಚಾರಕ್ಕೆ ಇದೀಗ ಮತ್ತೊಮ್ಮೆ ಪ್ರಾಮುಖ್ಯತೆ ದೊರೆತಿದೆ. ಆದರೆ, ಈ ಕುರಿತಾಗಿ ಬಸವರಾಜ್ ದಡೇಸುಗೂರು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಮೌನದಿಂದ ಜನರಲ್ಲಿ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ—ಅವರು ಗುಪ್ತವಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾರೆಯಾ? ಮದುವೆಯಾಗಿದ್ದರೂ ಇದನ್ನು ಬಹಿರಂಗಪಡಿಸದೇ ಇರಲು ಕಾರಣವೇನು?
ಈ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…