Latest

ಪ್ರಪಥಮ ಬಾರಿಗೆ ಮೀಸಲು ಕ್ಷೇತ್ರದ ಹ.ಬೋ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಆಕಾಂಕ್ಷಿಯಾಗಿ ದೀನಾ ಮಂಜುನಾಥ್ ಎಂಟ್ರಿ.

ಕೊಟ್ಟೂರು:- ಭಾರತೀಯ ಜನತಾ ಪಕ್ಷದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀನಾ ಮಂಜುನಾಥ ರವರು ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆಂದು ಹೇಳಿದರು.ಭಾರತೀಯ ಜನತಾ ಪಕ್ಷದ ಪ್ರಧಾನಿ ನೇತೃತ್ವದಲ್ಲಿ ದೇಶದಲ್ಲಿ ಹಲವಾರು ಜನಪರ ಯೋಜನೆಗಳು ಜಾರಿಗೆ ತಂದಿದ್ದು ಅವುಗಳ ಅನುಷ್ಠಾನ ಪ್ರಗತಿಪರ ಸಾಧನೆಗಳಿಂದ ದೇಶದ ಅಭಿವೃದ್ಧಿಯಾಗಿದ್ದು, ಈ ಬಾರಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಕ್ಕರೆ ಈ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ ಜೊತೆಗೂಡಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಹಿಂದೆ ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಯ ಹಲವಾರು ಅಭಿವೃದ್ಧಿ ಕೆಲಸವನ್ನು ಮಾಡಿ ಜನರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇನೆ.ವಿಶೇಷವಾಗಿ ಉದ್ಯೋಗಗಳಾಗಳಿ,ಕುಡಿಯುವ ನೀರಿನ ವ್ಯವಸ್ಥೆ,ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಲಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿ ಯಶಸ್ವಿಯಾಗಿದ್ದೇನೆ ಹಾಗೂ ರಾಜಕೀಯವಾಗಿ ನಿರಂತರ ಕ್ಷೇತ್ರದ ಜನತೆ ಸಂಪರ್ಕದಲ್ಲಿದ್ದು ಎಲ್ಲಾ ಸಮುದಾಯದ ಜನರ ಪ್ರೀತಿ ವಿಶ್ವಾಸವನ್ನು ತೆಗೆದುಕೊಂಡಿದ್ದೇನೆ ಆದ್ದರಿಂದಾಗಿ ಎಸ್ಸಿ ಮೀಸಲು ಕ್ಷೇತ್ರವಿರುವ ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಡ ಹಾಗೂ ಮೀಸಲು ಕ್ಷೇತ್ರ ಆಗಿ 15 ವರ್ಷ ಕಳೆದರೂ ನಿಜವಾದ ಅಸ್ಪೃಶ್ಯ ಸಮುದಾಯವು ಇಲ್ಲಿ ರಾಜಕೀಯವಾಗಿ ಬೆಳೆಯದೆ ಇರುವುದು ನನಗೆ ನೋವಿದೆ.ಈ ಕಾರಣದಿಂದ ಭಾರತೀಯ ಜನತಾ ಪಕ್ಷದ ರಾಜ್ಯ ಹಿರಿಯ ಮುಖಂಡರ ಗಮನವನ್ನು ಸೆಳೆದಿದ್ದೇನೆ.ಹೈಕಮಾಂಡ್ ಟಿಕೆಟ್ ನೀಡಿದ್ದೆ ಆದರೆ ಕ್ಷೇತ್ರ ಓಡಾಟ ನಡೆಸಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತಂದು ಕೊಡಲು ಶ್ರಮ ವಹಿಸಿ ಕೆಲಸ ಮಾಡುತ್ತೇನೆ ಹಾಗೂ ಮಹಿಳೆಯರು ಕೂಡ ವ್ಯವಸ್ಥೆಯನ್ನು ಬದಲಾಯಿಸ ಬಲ್ಲರು ಅಂದುಕೊಳ್ಳುವಂತೆ ಖಂಡಿತ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಲು ಸತತವಾಗಿ ಪರಯತ್ನಿಸುತ್ತೇನೆಂದು ಹೇಳಿದರು.

ಭ್ರಷ್ಟರ ಬೇಟೆ

Recent Posts

ಲೆನ್ಸ್ಕಾರ್ಟ್ ಡ್ರೆಸ್ ಕೋಡ್ ವಿವಾದ: ತಿಲಕ-ಕುಂಕುಮ ನಿಷೇಧ ಆರೋಪ, ನಾಯಕಿ ನಾಜಿಯಾ ಖಾನ್ ಪ್ರತಿಭಟನೆ

ನಾಸಿಕ್‌ನ Tata Consultancy Services ನಲ್ಲಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, Lenskart…

4 hours ago

ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಭರ್ಜರಿ ಸ್ವಾಗತ: ಹಾಸನದಲ್ಲಿ ವಿಡಿಯೋ ವೈರಲ್

ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿಯಲ್ಲಿ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ ಆಗಮಿಸುತ್ತಿದ್ದಂತೆಯೇ ಯುವಕರ ಗುಂಪೊಂದು ಅದ್ದೂರಿ ಸ್ವಾಗತ ಕೋರಿರುವ…

4 hours ago

ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಲೋಕಾಯುಕ್ತ ಬಲೆಗೆ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಕಾನ್ಸ್ಟೇಬಲ್ ಸಂತೋಷ್…

5 hours ago

ಡಿಎನ್‌ಎ ಸತ್ಯ ಹೇಳಿತು: ಬಿಜೆಪಿ ಮುಖಂಡನ ಪುತ್ರನೇ ಮಗುವಿನ ತಂದೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪುತ್ತೂರು…

10 hours ago

ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ: ಯುದ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮುನ್ನೆಚ್ಚರಿಕಾ ಕ್ರಮ

ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಯುದ್ಧದ ಪರಿಣಾಮವಾಗಿ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಆಮದು ವ್ಯತ್ಯಯಗೊಳ್ಳುವ ಭೀತಿ…

10 hours ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆಗೆ ಸಂಚು: ಪತ್ನಿ ಸೇರಿ ಐವರ ಬಂಧನ

ಆಂಧ್ರ ಪ್ರದೇಶದ ಪ್ರೊದ್ದಟೂರು ತಾಲ್ಲೂಕಿನ ಲಿಂಗಾಪುರಂ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಭಾವಿಸಿದ…

10 hours ago