Latest

35 ಲಕ್ಷ ರೂಪಾಯಿಗೆ ಬಡವರ ಮಗುವನ್ನು ಮಾರಿದ ಫರ್ಟಿಲಿಟಿ ಡಾಕ್ಟರ್, 10 ಮಂದಿ ಅರೆಸ್ಟ್

ಹೈದರಾಬಾದ್‌: ಐವಿಎಫ್‌ (IVF) ಚಿಕಿತ್ಸೆಗಾಗಿ ಫರ್ಟಿಲಿಟಿ ಸೆಂಟರ್‌ ಮೊರೆ ಹೋದ ದಂಪತಿಗೆ ತಮ್ಮದಾಗಿಯೇ ಮಗು ಎಂದು ಬೇರೆಯವರ ಮಗುವನ್ನು ನೀಡಿದ ಕಿರಾತಕ ವ್ಯವಹಾರ ಬಯಲಾಗಿದ್ದು, ಈ ಸಂಬಂಧ ಪತ್ತೆಹಚ್ಚಿದ ಸುರುಳಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗುಪ್ತವಾಗಿ ಶಿಶು ಮಾರಾಟ ಜಾಲವನ್ನೇ ನಡೆಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಇದೀಗ ಕಾನೂನಿನ ಕಪಿಮುಷ್ತಿಗೆ ಸಿಕ್ಕಿದ್ದು, ಪ್ರಕರಣ ತೀವ್ರತೆಯಲ್ಲಿದೆ.

2024ರಲ್ಲಿ ಐವಿಎಫ್ ಚಿಕಿತ್ಸೆ ಪಡೆದು ಮಗುವನ್ನು ಪಡೆದ ದಂಪತಿಗೆ ಕೆಲ ತಿಂಗಳಲ್ಲಿ ಅನುಮಾನ ಉಂಟಾಗಿದೆ. ಮಗು ತಮ್ಮದೇ ಎಂಬ ಭರವಸೆ ಮೂಡದ ಹಿನ್ನೆಲೆ ಖಾಸಗಿ ಡಿಎನ್‌ಎ ಪರೀಕ್ಷೆ ಮಾಡಿಸಿದ್ದು, ಶಾಕ್ ನೀಡುವ ವರದಿ ಕೈಗೆ ಬಿದ್ದಿದೆ—ಮಗು ಅವರದ್ದು ಅಲ್ಲ! ಕೂಡಲೇ ದಂಪತಿ ಹೈದರಾಬಾದ್‌ನ ಸಿಕಂದರ್‌ಬಾದ್‌ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆಯಾದ ಬಳಿಕ ಓರ್ವ ಹಿರಿಯ ವೈದ್ಯೆ ಡಾ. ಅಥಲೂರಿ ನಮ್ರತಾ (64), ಗಾಂಧಿ ಸರ್ಕಾರಿ ಆಸ್ಪತ್ರೆಗೆ ಸೇರಿದ ಅರಿವಳಿಕೆ ತಜ್ಞ ಡಾ. ನರ್ಗುಲಾ ಸದಾನಂದಮ್ (41) ಸೇರಿದಂತೆ ಫರ್ಟಿಲಿಟಿ ಸೆಂಟರ್‌ನ ಸಿಬ್ಬಂದಿ, ಏಜೆಂಟ್ ಮತ್ತು ಟೆಕ್ನಿಷಿಯನ್ ಸೇರಿ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.

ಹೆಸರಲ್ಲಿ ‘ಬಾಡಿಗೆ ತಾಯ್ತನ’, ನಿಜದಲ್ಲಿ ‘ಶಿಶು ಮಾರಾಟ’

ಡಾ. ನಮ್ರತಾ ನೇತೃತ್ವದ ಸೃಷ್ಟಿ ಫರ್ಟಿಲಿಟಿ ಸೆಂಟರ್‌ ದಂಪತಿಗೆ ಬಾಡಿಗೆ ತಾಯ್ತನದ ಭರವಸೆ ನೀಡಿದ್ದು, ಅವಿಶ್ವಾಸನೀಯವಾಗಿ ಬಡ ಕುಟುಂಬದಿಂದ 90 ಸಾವಿರ ರೂಪಾಯಿಗೆ ಮಗು ಖರೀದಿಸಿ, ದಂಪತಿಗೆ ‘ತಾವು ನಡೆಸಿದ ಐವಿಎಫ್‌ ಫಲಿತಾಂಶ’ವೆಂದು ಹಸ್ತಾಂತರಿಸಿದ್ದಾರೆ. ಈ ಡ್ರಾಮಾದ ನಲ್ಲಿ ದಂಪತಿಯೊಂದಿಗಿಂದ ಟ್ರೀಟ್ಮೆಂಟ್‌ ಹೆಸರಿನಲ್ಲಿ 35 ಲಕ್ಷ ರೂಪಾಯಿ ಬಡಿದುಕೊಳ್ಳಲಾಗಿದೆ.

ಪರವಾನಗಿ ಇಲ್ಲದ ಕ್ಲಿನಿಕ್‌!

ಅದಕ್ಕೂ ಹೆಚ್ಚಾಗಿ, ತನಿಖೆಯಲ್ಲಿ ಇನ್ನೊಂದು ಭಯಾನಕ ಅಂಶ ಬಯಲಾಗಿದೆ—2021ರಲ್ಲೇ ಸೃಷ್ಟಿ ಫರ್ಟಿಲಿಟಿ ಸೆಂಟರ್‌ ಪರವಾನಗಿ ರದ್ದುಪಡಿಸಲಾಗಿದೆ. ಆದರೂ ಡಾ. ನಮ್ರತಾ ಮತ್ತು ಸಹಚರರು ಅವೈಧವಾಗಿ ಕಾರ್ಯಾಚರಣೆ ಮುಂದುವರೆಸಿದ್ದರು. ಹೆಚ್ಚಿನ ಲಾಭಕ್ಕಾಗಿ ಶಿಶು ಮಾರಾಟ ಜಾಲವನ್ನೇ ರೂಪಿಸಿ, ಐವಿಎಫ್‌ ಚಿಕಿತ್ಸೆಯ ಹೆಸರಿನಲ್ಲಿ ಬಡವರ ಮಕ್ಕಳನ್ನು ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದ ಕೃತ್ಯ ಹತ್ತಾರು ವರ್ಷಗಳಿಂದ ನಡೆಯುತ್ತಿತ್ತು ಎನ್ನಲಾಗಿದೆ.

ಇನ್ನೂ ಮೂರು ನಗರಗಳಲ್ಲಿ ಶಾಖೆಗಳು

ಈ ಶಿಶು ಮಾರಾಟ ಜಾಲವು ಕೇವಲ ಸಿಕಂದರ್‌ಬಾದ್‌ವಷ್ಟೇ ಅಲ್ಲ, ಹೈದರಾಬಾದ್‌ನ ಕೊಂಡಾಪುರ, ಆಂಧ್ರದ ವಿಜಯವಾಡ ಹಾಗೂ ವಿಶಾಖಪಟ್ಟಣದಲ್ಲಿಯೂ ಇತರ ಫರ್ಟಿಲಿಟಿ ಸೆಂಟರ್‌ಗಳ ಮೂಲಕ ನಡೆದುಕೊಳ್ಳುತ್ತಿತ್ತು ಎಂಬ ಮಾಹಿತಿ ದೊರೆತಿದ್ದು, ಸ್ಥಳೀಯ ಪೊಲೀಸ್‌ ಸಿಬ್ಬಂದಿ ಎಲ್ಲೆಡೆ ದಾಳಿಗಳನ್ನು ನಡೆಸುತ್ತಿದ್ದಾರೆ.‌

ಪ್ರಸ್ತುತ ಪ್ರಕರಣದ ತನಿಖೆ ಹೆಚ್ಚಿದ ಗಂಭೀರತೆಗೆ ತಲುಪಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿಗಾಗಿ ಪ್ರಶ್ನೆ ನಡೆಸಲಾಗುತ್ತಿದೆ. ಬಡವರ ಜಿವನದೊಂದಿಗೆ ಆಟವಾಡಿದ ಈ ಕೃತ್ಯ ತೀವ್ರ ಖಂಡನೆಗೆ ಒಳಪಟ್ಟಿದ್ದು, ಫರ್ಟಿಲಿಟಿ ಕ್ಷೇತ್ರದ ಮೇಲೆ ಜನವಿಶ್ವಾಸ ಕುಸಿಯುವ ಸ್ಥಿತಿಗೆ ತಲುಪಿದೆ.

nazeer ahamad

Recent Posts

10 ದಿನಗಳಿಂದ ನೀರಿಲ್ಲದೆ ಪರದಾಟ: ಮುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ಭಟ್ಕಳ: ಕುಡಿಯುವ ನೀರಿನ ತೀವ್ರ ಸಮಸ್ಯೆಯಿಂದ ಬೇಸತ್ತ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ಕೋಟಿ ಖಜಾನೆ ಮನೆ ಪ್ರದೇಶದ ನಿವಾಸಿಗಳು…

16 hours ago

20 ದಿನಗಳಿಂದ ನೀರಿನ ಬವಣೆ: ಮುತ್ತಗಿ ಗ್ರಾಮಸ್ಥರ ಆಕ್ರೋಶ, ಹೋರಾಟದ ಎಚ್ಚರಿಕೆ

ಮುತ್ತಗಿ: ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ ಸುಮಾರು 20…

20 hours ago

2 ಕೋಟಿ ವಿಮೆಗಾಗಿ ಮಾಜಿ ಸೈನಿಕನ ಹತ್ಯೆ? ಪ್ರಿಯಕರನ ಸೆಲ್ಫಿ ವಿಡಿಯೋದಿಂದ ಬಯಲಾಯ್ತು ಭೀಕರ ರಹಸ್ಯ!

ಬೆಳಗಾವಿಯಲ್ಲಿ ಮಾಜಿ ಸೈನಿಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಮೃತನ ಪತ್ನಿಯ ಪ್ರಿಯಕರನೊಬ್ಬ ಬಿಡುಗಡೆ ಮಾಡಿದ…

21 hours ago

₹11.82 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ: ‘ಮಿಸೆಸ್ ಕೇರಳ 2025’ ವಿಜೇತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

ಮುಂಬೈ: ಹೈಡ್ರೋಪೋನಿಕ್ ಗಾಂಜಾವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ 28 ವರ್ಷದ ಮಾಡೆಲ್ ಹಾಗೂ ‘ಮಿಸೆಸ್ ಕೇರಳ 2025’…

1 day ago

ಪ್ರತಿ ಅಂತ್ಯಸಂಸ್ಕಾರದಲ್ಲೂ ತಪ್ಪದೆ ಹಾಜರಿ! ಡಂಬಳ ಗ್ರಾಮದ ಬಿಳಿ ನಾಯಿ ಮೂಡಿಸಿದ ವಿಸ್ಮಯ

ಡಂಬಳ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆಯೊಂದು ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಗ್ರಾಮದ…

1 day ago

ದಿನಕ್ಕೆ ₹2000 ಆದಾಯ ಕೇಳಿ ಶಾಕ್ ಆದ ಯುವತಿ; ಆಟೋ ಚಾಲಕನನ್ನೇ ಗಂಡನಾಗಿ ಆಯ್ಕೆ!

ಜೀವನದಲ್ಲಿ ನಮ್ಮ ಜೀವನ ಸಂಗಾತಿ ಯಾರು ಆಗುತ್ತಾರೆ ಎಂಬುದನ್ನು ಮುಂಚಿತವಾಗಿ ಊಹಿಸುವುದು ಅಸಾಧ್ಯ. ಕೆಲವೊಮ್ಮೆ ಒಂದು ಸಣ್ಣ ಘಟನೆ ಅಥವಾ…

1 day ago