Latest

35 ಲಕ್ಷ ರೂಪಾಯಿಗೆ ಬಡವರ ಮಗುವನ್ನು ಮಾರಿದ ಫರ್ಟಿಲಿಟಿ ಡಾಕ್ಟರ್, 10 ಮಂದಿ ಅರೆಸ್ಟ್

ಹೈದರಾಬಾದ್‌: ಐವಿಎಫ್‌ (IVF) ಚಿಕಿತ್ಸೆಗಾಗಿ ಫರ್ಟಿಲಿಟಿ ಸೆಂಟರ್‌ ಮೊರೆ ಹೋದ ದಂಪತಿಗೆ ತಮ್ಮದಾಗಿಯೇ ಮಗು ಎಂದು ಬೇರೆಯವರ ಮಗುವನ್ನು ನೀಡಿದ ಕಿರಾತಕ ವ್ಯವಹಾರ ಬಯಲಾಗಿದ್ದು, ಈ ಸಂಬಂಧ ಪತ್ತೆಹಚ್ಚಿದ ಸುರುಳಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗುಪ್ತವಾಗಿ ಶಿಶು ಮಾರಾಟ ಜಾಲವನ್ನೇ ನಡೆಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಇದೀಗ ಕಾನೂನಿನ ಕಪಿಮುಷ್ತಿಗೆ ಸಿಕ್ಕಿದ್ದು, ಪ್ರಕರಣ ತೀವ್ರತೆಯಲ್ಲಿದೆ.

2024ರಲ್ಲಿ ಐವಿಎಫ್ ಚಿಕಿತ್ಸೆ ಪಡೆದು ಮಗುವನ್ನು ಪಡೆದ ದಂಪತಿಗೆ ಕೆಲ ತಿಂಗಳಲ್ಲಿ ಅನುಮಾನ ಉಂಟಾಗಿದೆ. ಮಗು ತಮ್ಮದೇ ಎಂಬ ಭರವಸೆ ಮೂಡದ ಹಿನ್ನೆಲೆ ಖಾಸಗಿ ಡಿಎನ್‌ಎ ಪರೀಕ್ಷೆ ಮಾಡಿಸಿದ್ದು, ಶಾಕ್ ನೀಡುವ ವರದಿ ಕೈಗೆ ಬಿದ್ದಿದೆ—ಮಗು ಅವರದ್ದು ಅಲ್ಲ! ಕೂಡಲೇ ದಂಪತಿ ಹೈದರಾಬಾದ್‌ನ ಸಿಕಂದರ್‌ಬಾದ್‌ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆಯಾದ ಬಳಿಕ ಓರ್ವ ಹಿರಿಯ ವೈದ್ಯೆ ಡಾ. ಅಥಲೂರಿ ನಮ್ರತಾ (64), ಗಾಂಧಿ ಸರ್ಕಾರಿ ಆಸ್ಪತ್ರೆಗೆ ಸೇರಿದ ಅರಿವಳಿಕೆ ತಜ್ಞ ಡಾ. ನರ್ಗುಲಾ ಸದಾನಂದಮ್ (41) ಸೇರಿದಂತೆ ಫರ್ಟಿಲಿಟಿ ಸೆಂಟರ್‌ನ ಸಿಬ್ಬಂದಿ, ಏಜೆಂಟ್ ಮತ್ತು ಟೆಕ್ನಿಷಿಯನ್ ಸೇರಿ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.

ಹೆಸರಲ್ಲಿ ‘ಬಾಡಿಗೆ ತಾಯ್ತನ’, ನಿಜದಲ್ಲಿ ‘ಶಿಶು ಮಾರಾಟ’

ಡಾ. ನಮ್ರತಾ ನೇತೃತ್ವದ ಸೃಷ್ಟಿ ಫರ್ಟಿಲಿಟಿ ಸೆಂಟರ್‌ ದಂಪತಿಗೆ ಬಾಡಿಗೆ ತಾಯ್ತನದ ಭರವಸೆ ನೀಡಿದ್ದು, ಅವಿಶ್ವಾಸನೀಯವಾಗಿ ಬಡ ಕುಟುಂಬದಿಂದ 90 ಸಾವಿರ ರೂಪಾಯಿಗೆ ಮಗು ಖರೀದಿಸಿ, ದಂಪತಿಗೆ ‘ತಾವು ನಡೆಸಿದ ಐವಿಎಫ್‌ ಫಲಿತಾಂಶ’ವೆಂದು ಹಸ್ತಾಂತರಿಸಿದ್ದಾರೆ. ಈ ಡ್ರಾಮಾದ ನಲ್ಲಿ ದಂಪತಿಯೊಂದಿಗಿಂದ ಟ್ರೀಟ್ಮೆಂಟ್‌ ಹೆಸರಿನಲ್ಲಿ 35 ಲಕ್ಷ ರೂಪಾಯಿ ಬಡಿದುಕೊಳ್ಳಲಾಗಿದೆ.

ಪರವಾನಗಿ ಇಲ್ಲದ ಕ್ಲಿನಿಕ್‌!

ಅದಕ್ಕೂ ಹೆಚ್ಚಾಗಿ, ತನಿಖೆಯಲ್ಲಿ ಇನ್ನೊಂದು ಭಯಾನಕ ಅಂಶ ಬಯಲಾಗಿದೆ—2021ರಲ್ಲೇ ಸೃಷ್ಟಿ ಫರ್ಟಿಲಿಟಿ ಸೆಂಟರ್‌ ಪರವಾನಗಿ ರದ್ದುಪಡಿಸಲಾಗಿದೆ. ಆದರೂ ಡಾ. ನಮ್ರತಾ ಮತ್ತು ಸಹಚರರು ಅವೈಧವಾಗಿ ಕಾರ್ಯಾಚರಣೆ ಮುಂದುವರೆಸಿದ್ದರು. ಹೆಚ್ಚಿನ ಲಾಭಕ್ಕಾಗಿ ಶಿಶು ಮಾರಾಟ ಜಾಲವನ್ನೇ ರೂಪಿಸಿ, ಐವಿಎಫ್‌ ಚಿಕಿತ್ಸೆಯ ಹೆಸರಿನಲ್ಲಿ ಬಡವರ ಮಕ್ಕಳನ್ನು ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದ ಕೃತ್ಯ ಹತ್ತಾರು ವರ್ಷಗಳಿಂದ ನಡೆಯುತ್ತಿತ್ತು ಎನ್ನಲಾಗಿದೆ.

ಇನ್ನೂ ಮೂರು ನಗರಗಳಲ್ಲಿ ಶಾಖೆಗಳು

ಈ ಶಿಶು ಮಾರಾಟ ಜಾಲವು ಕೇವಲ ಸಿಕಂದರ್‌ಬಾದ್‌ವಷ್ಟೇ ಅಲ್ಲ, ಹೈದರಾಬಾದ್‌ನ ಕೊಂಡಾಪುರ, ಆಂಧ್ರದ ವಿಜಯವಾಡ ಹಾಗೂ ವಿಶಾಖಪಟ್ಟಣದಲ್ಲಿಯೂ ಇತರ ಫರ್ಟಿಲಿಟಿ ಸೆಂಟರ್‌ಗಳ ಮೂಲಕ ನಡೆದುಕೊಳ್ಳುತ್ತಿತ್ತು ಎಂಬ ಮಾಹಿತಿ ದೊರೆತಿದ್ದು, ಸ್ಥಳೀಯ ಪೊಲೀಸ್‌ ಸಿಬ್ಬಂದಿ ಎಲ್ಲೆಡೆ ದಾಳಿಗಳನ್ನು ನಡೆಸುತ್ತಿದ್ದಾರೆ.‌

ಪ್ರಸ್ತುತ ಪ್ರಕರಣದ ತನಿಖೆ ಹೆಚ್ಚಿದ ಗಂಭೀರತೆಗೆ ತಲುಪಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿಗಾಗಿ ಪ್ರಶ್ನೆ ನಡೆಸಲಾಗುತ್ತಿದೆ. ಬಡವರ ಜಿವನದೊಂದಿಗೆ ಆಟವಾಡಿದ ಈ ಕೃತ್ಯ ತೀವ್ರ ಖಂಡನೆಗೆ ಒಳಪಟ್ಟಿದ್ದು, ಫರ್ಟಿಲಿಟಿ ಕ್ಷೇತ್ರದ ಮೇಲೆ ಜನವಿಶ್ವಾಸ ಕುಸಿಯುವ ಸ್ಥಿತಿಗೆ ತಲುಪಿದೆ.

nazeer ahamad

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

1 day ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

1 day ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

1 day ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

1 day ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

1 day ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

1 day ago