Latest

ನಕಲಿ ಎಸ್‌ಐ ಮೋನಾಳ ಡ್ರಾಮಾ: ಇಬ್ಬರು ತಮ್ಮರನ್ನು ಮೇಚ್ಚಿಸಲು ಪೊಲೀಸ್ ಅಕಾಡೆಮಿಯಲ್ಲಿ ಎರಡು ವರ್ಷ ವೇಷಧಾರಣೆ!

ಜೈಪುರ್ (ರಾಜಸ್ಥಾನ್): ರಾಜ್ಯದ ಪೊಲೀಸ್ ವ್ಯವಸ್ಥೆಯನ್ನೇ ಆಘಾತಕ್ಕೀಡು ಮಾಡಿರುವ ಘಟನೆ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ವರ್ಷಗಳಿಂದ ನಕಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಪೊಲೀಸ್ ಅಕಾಡೆಮಿಯಲ್ಲೇ ತರಬೇತಿಗೆ ಹಾಜರಾಗುತ್ತಿದ್ದ ಯುವತಿಯನ್ನು ಈಗ ಪೊಲೀಸರೇ ಬಂಧಿಸಿದ್ದಾರೆ. ವಾಸ್ತವವಾಗಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣವಾಗದೆ, ನಕಲಿ ಗುರುತು ಪತ್ರಗಳ ಆಧಾರದಲ್ಲಿ ಪೊಲೀಸ್ ವೇಷಧಾರಣೆ ಮಾಡಿಕೊಂಡು ಅಧಿಕೃತ ತರಬೇತಿಗಳಲ್ಲೇ ಪಾಲ್ಗೊಂಡಿದ್ದ ಅವಳು, ಹಿರಿಯ ಅಧಿಕಾರಿಗಳ ಜತೆ ಫೋಟೋ ತೆಗೆಸಿಕೊಂಡಿದ್ದ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ.

ಈ ಬಂಡವಾಳ ಮಹಿಳೆಯ ಹೆಸರು ಮೋನಾ ಬುಗಾಲಿಯಾ ಅka ಮೋಲಿ ದೇವಿ. ನಗೌರ್ ಜಿಲ್ಲೆಯ ನಿಂಬಾ ಕೇ ದಾಸ್ ಗ್ರಾಮದ ಟ್ರಕ್ ಚಾಲಕನ ಮಗಳು. 2021ರಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದಿದ್ದರೂ ಆಯ್ಕೆಯಾಗಲಿಲ್ಲ. ಆದರೆ ಅದರಿಂದ ಕೈಚೆಲ್ಲದೆ, ನಕಲಿ ದಾಖಲೆಗಳ ಮೂಲಕ ತರಬೇತಿ ಕೇಂದ್ರ ಪ್ರವೇಶಿಸಿ, ನಿಜವಾದ ಅಧಿಕಾರಿಯಂತೆ ವರ್ತಿಸುತ್ತಿದ್ದಳು.

ಸಾಮಾಜಿಕ ಜಾಲತಾಣಗಳಲ್ಲಿ ‘ಪೊಲೀಸ್ ಅಧಿಕಾರಿ’ಯ ವೇಷ

ಪರೀಕ್ಷೆಯಲ್ಲಿ ಅಯೋಗ್ಯವಾಗಿದ್ದರೂ, ಮೋಲಿ ‘ಕ್ರೀಡಾ ಮೀಸಲಾತಿ’ಯ ಅಡಿಯಲ್ಲಿ ನೇಮಕಗೊಂಡಿರುವುದಾಗಿ ನೆಪ ಹೇಳಿ, ನಿಜವಾದ ಎಸ್‌ಐಗಳ ವಾಟ್ಸಪ್ ಗುಂಪಿಗೆ ಸೇರಿ ಮಾಹಿತಿ ಸಂಗ್ರಹಿಸಿದ್ದಳು. ಇದರ ನೆರವಿನಿಂದ ಅಕಾಡೆಮಿಯ ಪರೇಡ್ ಮೈದಾನದಲ್ಲಿ ಹಾಜರಾಗಿ ತರಬೇತಿಯೊಳಗೆ ಸೇರ್ಪಡೆಯಾಗಿದ್ದಳು. ಪೋಸ್ಟ್‌ಗಳಲ್ಲಿ ತನ್ನನ್ನು ಪೊಲೀಸ್ ಅಧಿಕಾರಿಯೆಂದು ಬಿಂಬಿಸಿ, ಸಮಾಜದಲ್ಲಿ ಪ್ರಭಾವ ಬೀರುವಂತೆಯೂ ಮಾಡಿಕೊಂಡಿದ್ದಳು.

ಅಕಾಡೆಮಿಯ ಭದ್ರತಾ ವ್ಯವಸ್ಥೆಗೆ ತೀವ್ರ ಪ್ರಶ್ನೆ

ಈಕೆಯ ವೇಷಭೂಷಣವನ್ನು ಇತ್ತೀಚೆಗೆ ಜೈಪುರದಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ಮುಂದುವರಿಸಿದ ಪೊಲೀಸರೇ ಶಾಕ್‌ಗೆ ಒಳಗಾಗಿದ್ದಾರೆ. ಸಿಕ್ಕರ್ ಜಿಲ್ಲೆಯಲ್ಲಿ ಬಂಧಿತಳಾದ ನಂತರ, 2023ರಿಂದಲೇ ತಾನು ಪೊಲೀಸ್ ಸಮವಸ್ತ್ರದಲ್ಲಿ ಅಕಾಡೆಮಿಯಲ್ಲಿ ಇದ್ದದ್ದು ಗೊತ್ತಾಗಿದೆ.

ಪೊಲೀಸರು ನಡೆಸಿದ ಸರ್ಜಿ ವೇಳೆ, ಆಕೆಯ ಕೊಠಡಿಯಲ್ಲಿ ಮೂರು ರೀತಿಯ ಸಮವಸ್ತ್ರ, 7 ಲಕ್ಷ ರೂಪಾಯಿ ನಗದು, ನಕಲಿ ಗುರುತುಪತ್ರಗಳು, ಪರೀಕ್ಷಾ ಮಾದರಿ ಪ್ರಶ್ನೆ ಪತ್ರಿಕೆಗಳು ಪತ್ತೆಯಾಗಿವೆ.

ಮೂಲ ಉದ್ದೇಶ: ಹಣ ಹಾಗೂ ಕುಟುಂಬದ ಜವಾಬ್ದಾರಿ

ವಿಚಾರಣೆ ವೇಳೆ ಮೋಲಿ, ಈ ವಂಚನೆಗೆ ತನ್ನ ಕುಟುಂಬದ ಆರ್ಥಿಕ ಹಿನ್ನಲೆ ಕಾರಣ ಎಂದು ಹೇಳಿದ್ದಾಳೆ. ನಾಲ್ವರು ಸೋದರಿಯರ ಜವಾಬ್ದಾರಿ, ಹಾಗೂ ಪೋಷಕರನ್ನು ಮೆಚ್ಚಿಸಲು ತಾನೀ ದಾರಿ ಆರಿಸಿದ್ದೆನೆಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾಳೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡು, ಕೆಲವೊಮ್ಮೆ ಹಣ ವಸೂಲಿ ಮಾಡಿದ ಆರೋಪವೂ ಮೋಲಿಗೆ ಎದುರಾಗಿದ್ದು, ತನಿಖೆ ಮುಂದುವರಿಯುತ್ತಿದೆ.

nazeer ahamad

Recent Posts

ಕ್ಯಾನ್ಸರ್‌ಗೆ ಬಲಿಯಾದ ಬೆಸ್ಕಾಂ ವಿಜಿಲೆನ್ಸ್ ಎಸ್‌ಪಿ ಬಿ.ಎನ್. ಲಾವಣ್ಯ: ಪೊಲೀಸ್ ವಲಯಕ್ಕೆ ಭಾರೀ ನಷ್ಟ

ಬೆಂಗಳೂರಿನಲ್ಲಿ ದುಃಖದ ಸುದ್ದಿ ಬೆಳಕಿಗೆ ಬಂದಿದೆ. ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬೆಸ್ಕಾಂ ವಿಜಿಲೆನ್ಸ್ ವಿಭಾಗದ ಎಸ್‌ಪಿ ಬಿ.ಎನ್. ಲಾವಣ್ಯ…

5 hours ago

ದಾಂಡೇಲಿ ದುರಂತ: ಮಲೇಷ್ಯಾದಿಂದ ಬಂದ ಪತಿ; ಪತ್ನಿಗೆ ಬೇರೊಬ್ಬನೊಂದಿಗಿದ್ದ ಸಂಬಂಧ ತಿಳಿದು ಆತ್ಮಹತ್ಯೆ

ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನಕಲಕುವ ಘಟನೆ ಒಂದು ಬೆಳಕಿಗೆ ಬಂದಿದೆ. ದಾಂಡೇಲಿ ನಗರದಲ್ಲಿ ಕುಟುಂಬ ಕಲಹ ಮತ್ತು ಮಾನಸಿಕ…

9 hours ago

ಬರ್ಗಿ ಅಣೆಕಟ್ಟು ದುರಂತ: ಸಾವಿನ ಕ್ಷಣದಲ್ಲೂ ಮಗುವಿಗೆ ಗುರಾಣಿಯಾದ ತಾಯಿ

ಮಧ್ಯಪ್ರದೇಶದ ಬರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತವು ದೇಶವನ್ನೇ ದುಃಖದ ಮೌನಕ್ಕೆ ತಳ್ಳಿದೆ. ಆದರೆ ಈ ದುರ್ಘಟನೆಯ ನಂತರ…

10 hours ago

ಅಕ್ಕ-ತಂಗಿಯರ ವಿಚಿತ್ರ ನಿರ್ಧಾರ: ಪತಿಗಳ ಅದಲು-ಬದಲು ಪ್ರಕರಣಕ್ಕೆ ಹೈಕೋರ್ಟ್ ತೀರ್ಪು

ಮಧ್ಯ ಪ್ರದೇಶದ ಗ್ವಾಲಿಯರ್ ಹೈಕೋರ್ಟ್ ಪೀಠದ ಮುಂದೆ ಅಪರೂಪದ ಹಾಗೂ ಅಚ್ಚರಿ ಮೂಡಿಸುವ ಪ್ರಕರಣವೊಂದು ವಿಚಾರಣೆಗೆ ಬಂದಿದ್ದು, ಇದು ಸಾರ್ವಜನಿಕ…

10 hours ago

ಲವ್ ಅಂಡ್ ಸೆಕ್ಸ್ ದೋಖಾ: ಮಾಜಿ ಪುರಸಭಾ ಅಧ್ಯಕ್ಷನಿಂದ ವಂಚನೆ?

ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ…

10 hours ago

ವೈದ್ಯಕೀಯ ಕ್ಷೇತ್ರದಲ್ಲಿ ಮಹಾ ವಂಚನೆ: ಆಪರೇಷನ್ ಥಿಯೇಟರ್‌ನಲ್ಲೇ ಯುವತಿಯ ಖಾಸಗಿ ಫೋಟೋ ಲೀಕ್!

ಉತ್ತರ ಪ್ರದೇಶದ ಕೌಶಂಬಿಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ರೋಗಿಯ ಖಾಸಗಿತನ ಉಲ್ಲಂಘನೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ…

15 hours ago