Latest

ನೋಯ್ಡಾದಲ್ಲಿ ನಕಲಿ ಪನ್ನೀರ್ ಪತ್ತೆ: ಆರೋಗ್ಯಕ್ಕೆ ಭಾರೀ ಅಪಾಯ, ಎಚ್ಚರಿಕೆ ನೀಡಿದ ಇಲಾಖೆ

ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಹೆಚ್ಚಾದ ಎಚ್ಚರಿಕೆಯ ನಡುವೆಯೇ, ಮಾರುಕಟ್ಟೆಯಲ್ಲಿ ದೊರೆಯುವ “ಆರೋಗ್ಯಕರ” ಆಹಾರಗಳ ಬೆನ್ನಲ್ಲಿಯೇ ಆತಂಕಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಜನ ಸಾಮಾನ್ಯರು ಆರೋಗ್ಯವಂತಿಕೆಗಾಗಿ ತಿನ್ನುವ ಹಲವಾರು ಆಹಾರ ಪದಾರ್ಥಗಳು ನಿಜವಾಗಿ ದೇಹಕ್ಕೆ ಅಪಾಯಕಾರಿಯಾಗಿವೆ ಎಂಬುದು ಈಗ ಬಹಿರಂಗವಾಗಿದೆ.

ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ದಾಳಿಯಲ್ಲಿ ನಕಲಿ ಪನ್ನೀರ್‌ ತಯಾರಿಸುತ್ತಿದ್ದ ಮಾಫಿಯಾ ಪತ್ತೆಯಾಗಿದ್ದು, ಸುಮಾರು 14 ಕ್ವಿಂಟಾಲ್ ನಕಲಿ ಪನ್ನೀರ್‌ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಾಚರಣೆಯು ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಕಲಿ ಪನ್ನೀರ್‌ – ಹೆಲ್ದಿ ಅಂತಲೇ ಭಯ!

ಪನ್ನೀರ್‌ ಎಂಬುದು ಸಾಮಾನ್ಯವಾಗಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಂತಹ ಪೌಷ್ಠಿಕಾಂಶಗಳಿಂದ ತುಂಬಿರುತ್ತದೆ. ಆದ್ದರಿಂದಲೇ ಹಲವರು ದಿನನಿತ್ಯವೂ ಪನ್ನೀರ್ ಸೇವಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ನಕಲಿ ಪನ್ನೀರ್‌ಗಳು ವ್ಯಾಪಕವಾಗಿ ಲಭ್ಯವಿರುವುದರಿಂದ ಈಗ ಇದರ ಸೇವನೆ ಭಯದ ಸಂಗತಿಯಾಗಿದೆ.

ಹೆಚ್ಚು ಲಾಭದ ಆಸೆಯಲ್ಲಿ ಇಂತಹ ನಕಲಿ ಪನ್ನೀರ್ ತಯಾರಕರ ಬಳಕೆ ಆಗುತ್ತಿರುವ ಕಚ್ಚಾ ವಸ್ತುಗಳು ಸಾಮಾನ್ಯ ಆರೋಗ್ಯ ಮಾಪದಂಡಗಳಿಗೆ ತಕ್ಕದ್ದಲ್ಲ. ಕಳಪೆ ಗುಣಮಟ್ಟದ ಪಾಮೋಲಿನ್ ಆಯಿಲ್‌, ಪೋಸ್ಟರ್ ವೈಟ್ನರ್, ಬ್ಲೂ ಬಾಕ್ಸ್ ಕೆಮಿಕಲ್ಸ್, ಮತ್ತು ರೆಡ್ ಬುಲ್ ಬೀನ್ಸ್ ಗೆ ಸಪ್ರೋಟಾ ಸೇರಿಸಿ ಕುದಿಸುವ ವಿಧಾನ ಮುಂತಾದ ಅಪಾಯಕಾರಿ ಪದಾರ್ಥಗಳನ್ನು ಬಳಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಹೃದಯದ ಮೇಲೆ ಹಾನಿ

ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಈ ನಕಲಿ ಪನ್ನೀರ್‌ ದೀರ್ಘಕಾಲ ಸೇವನೆಯು ಹೃದಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆಯಿದೆ. ಪಾಮೋಲಿನ್ ಆಯಿಲ್‌ನ ಅತಿಯಾದ ಬಳಕೆ ಕೊರೊನರಿ ಆರೆಟರಿ ಸಮಸ್ಯೆಗಳಿಗೆ ಕಾರಣವಾಗಬಹುದೆಂಬ ಎಚ್ಚರಿಕೆಯಿದೆ.

6 ತಿಂಗಳ ಹಿಂದೆ ಆರಂಭವಾದ ಚಟುವಟಿಕೆ

ಅದರಲ್ಲೂ, ಈ ನಕಲಿ ಪನ್ನೀರ್‌ನ್ನು ಅಸಲಿ ಪನ್ನೀರ್‌ ಎಂಬ ನಾಮದಲ್ಲಿ ಎನ್‌ಸಿಆರ್‌ ಪ್ರದೇಶದ ಅಂಗಡಿಗಳಿಗೆ ₹180 ರಿಂದ ₹220 ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಬಂಧನದಲ್ಲಿರುವ ಆರೋಪಿಗಳು ತಮ್ಮ ನಕಲಿ ತಂತ್ರಗಳನ್ನು ಪೊಲೀಸರಿಗೆ ಬಿಚ್ಚಿಟ್ಟಿದ್ದಾರೆ. ಸಾರ್ವಜನಿಕರು ನಂಬಿಕೆಯಿಂದ ಖರೀದಿ ಮಾಡುತ್ತಿದ್ದ ಈ ಪನ್ನೀರ್ ನಿಜಕ್ಕೂ ಆರೋಗ್ಯದ ಮೇಲೆ ಬಾಂಬ್‌ ಎಂಬಂತಾಗಿತ್ತು.

nazeer ahamad

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

17 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

22 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

22 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

22 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

22 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

1 day ago