Categories: CrimeLatest

ಫೇಸ್‌ಬುಕ್ ಸ್ನೇಹದ ಬಲೆ: ಖಾಸಗಿ ಫೋಟೋಗಳಿಂದ ಬ್ಲ್ಯಾಕ್‌ಮೇಲ್, ದಂಪತಿ ಪೊಲೀಸ್ ಬಲೆಗೆ!

ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಬೆಳೆಸುವ ಸ್ನೇಹ ಕೆಲವೊಮ್ಮೆ ಎಷ್ಟೊಂದು ಅಪಾಯಕಾರಿಯಾಗಬಹುದು ಎಂಬುದಕ್ಕೆ ಹಾವೇರಿಯಲ್ಲಿ ನಡೆದಿರುವ ಈ ಘಟನೆ ಉದಾಹರಣೆಯಾಗಿದೆ. ಫೇಸ್‌ಬುಕ್‌ನಲ್ಲಿ ಆರಂಭವಾದ ಪರಿಚಯವು ಮಹಿಳೆಯೊಬ್ಬಳನ್ನು ಬ್ಲ್ಯಾಕ್‌ಮೇಲ್, ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆಯವರೆಗೆ ಕೊಂಡೊಯ್ದಿದೆ.

ಹಾವೇರಿಯ ಬಸವೇಶ್ವರ ನಗರದ ನಿವಾಸಿ ಹಾಗೂ ಗುತ್ತಿಗೆದಾರ ಸಚಿನ್ ದಾನಪ್ಪನವರ್ ಮತ್ತು ಆತನ ಪತ್ನಿ ಸುಪ್ರಿಯಾ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹಾವೇರಿ CEN ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ವೇಳೆ ಇಬ್ಬರ ವಿರುದ್ಧ ಐಟಿ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಗಂಭೀರ ಕಲಂಗಳಡಿ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಪಕ್ಕದ ಪ್ರದೇಶದ ನಿವಾಸಿಯಾಗಿದ್ದ ಕಾರಣ ಸಂತ್ರಸ್ತೆ ಸಚಿನ್‌ನೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡುತ್ತಿದ್ದರು. ಈ ಪರಿಚಯವನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಮಹಿಳೆಯ ಖಾಸಗಿ ಫೋಟೋ ಮತ್ತು ವಿಡಿಯೊಗಳನ್ನು ಕಪಟವಾಗಿ ತನ್ನ ವಶಕ್ಕೆ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಅವುಗಳನ್ನು ಆಧಾರವಾಗಿಸಿಕೊಂಡು ತನ್ನ ಲೈಂಗಿಕ ಆಸೆಗೆ ಸಹಕರಿಸುವಂತೆ ಮಹಿಳೆಯ ಮೇಲೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆ ಆರೋಪಿಯ ಬೇಡಿಕೆಗೆ ಒಪ್ಪದಿದ್ದಾಗ, ಖಾಸಗಿ ಫೋಟೋಗಳನ್ನು ಆಕೆಯ ಪತಿಗೆ ಕಳುಹಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಜುಲೈ 12ರಂದು PhonePe ಮೂಲಕ ಮಹಿಳೆಯ ಪತಿಗೆ ಖಾಸಗಿ ಫೋಟೋಗಳನ್ನು ಕಳುಹಿಸಿ ಮತ್ತಷ್ಟು ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಮೀರಿಯಾಗಿ, ಆರೋಪಿ ಸಚಿನ್‌ನ ಪತ್ನಿ ಸುಪ್ರಿಯಾ ಕೂಡ ಮಹಿಳೆಗೆ ಜೀವ ಬೆದರಿಕೆ ಹಾಕಿ, “ಸುಪಾರಿ ನೀಡಿ ಕೊಲೆ ಮಾಡಿಸುತ್ತೇನೆ” ಎಂದು ಬೆದರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ನಿರಂತರ ಬ್ಲ್ಯಾಕ್‌ಮೇಲ್ ಮತ್ತು ಬೆದರಿಕೆಯಿಂದ ಆತಂಕಗೊಂಡ ಮಹಿಳೆ ಕೊನೆಗೆ ಹಾವೇರಿ CEN ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಸಚಿನ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಭ್ರಷ್ಟರ ಬೇಟೆ

Recent Posts

ಹುಬ್ಬಳ್ಳಿಯಲ್ಲಿ ರೈಲ್ವೆ ಹಳಿ ಪಕ್ಕ ಯುವಕನ ಶವ ಪತ್ತೆ; ಪತ್ನಿಯೊಂದಿಗೆ ಕಲಹದ ಬಳಿಕ ವ್ಯಸನಕ್ಕೆ ಬಿದ್ದಿದ್ದ ಆರೋಪ

ಹುಬ್ಬಳ್ಳಿ: ನಗರದ ಲೋಕಪ್ಪನ ಹಕ್ಕಲ ರೈಲ್ವೆ ಸೇತುವೆ ಸಮೀಪ ರೈಲ್ವೆ ಹಳಿ ಪಕ್ಕದಲ್ಲಿ 25 ವರ್ಷದ ಯುವಕನ ಶವ ಪತ್ತೆಯಾಗಿದ್ದು,…

8 hours ago

ಗುಡಿಗೇರಿಯಲ್ಲಿ ಅಕ್ರಮ ಮಟ್ಕಾ ದಂಧೆ ಮೇಲೆ ಪೊಲೀಸರ ದಾಳಿ; ಓಸಿ ಬರೆಯುತ್ತಿದ್ದ ಆರೋಪಿ ಬಂಧನ

ಧಾರವಾಡ: ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಿಗೇರಿ ಗ್ರಾಮದ ಕೆಳಗಿನ ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಮಟ್ಕಾ (ಓಸಿ) ಸಂಖ್ಯೆಗಳನ್ನು ಬರೆಯುತ್ತಿದ್ದ…

8 hours ago

ಬಿಎಂಟಿಸಿ ಬಸ್‌ನಲ್ಲಿ ಯುವತಿಗೆ ಅಸಭ್ಯ ವರ್ತನೆ: ಕಾಮುಕನಿಗೆ ಪ್ರಯಾಣಿಕರಿಂದ ಧರ್ಮದೇಟು, ಪೊಲೀಸರ ವಶಕ್ಕೆ

ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ಸವಾಲೊಡ್ಡುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆಗೆ ತೆರಳುತ್ತಿದ್ದ…

8 hours ago

ಅನುಮಾನದ ಕಾಟಕ್ಕೆ ಯುವ ಗೃಹಿಣಿ ಬಲಿ? ಬಿ.ಎಸ್‌ಸಿ ಪದವೀಧರೆ ಪ್ರೇರಣಾ ಸಾವಿನ ಹಿಂದೆ ಪತಿ ಕಿರುಕುಳದ ಆರೋಪ

ಬೆಂಗಳೂರು: ಪತಿಯ ನಿರಂತರ ಅನುಮಾನ ಮತ್ತು ಕಿರುಕುಳದಿಂದ ಬೇಸತ್ತ ಯುವ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಘಟನೆ ಬೆಂಗಳೂರಿನ ಇಂದಿರಾನಗರ…

8 hours ago

ನೀಟ್-ಯುಜಿ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಣೆ; ವಿದ್ಯಾರ್ಥಿಗಳ ಭವಿಷ್ಯವೇ ಮೊದಲ ಆದ್ಯತೆ ಎಂದ ಸಚಿವ

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷೆಯಲ್ಲಿನ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕೇಂದ್ರ…

11 hours ago

NEET ಪೇಪರ್ ಲೀಕ್: NTAಯಲ್ಲಿ ಭಾರಿ ಶುದ್ಧೀಕರಣ, 47 ಸಿಬ್ಬಂದಿ ವಜಾ, ಪರೀಕ್ಷಾ ವ್ಯವಸ್ಥೆಗೆ ಸಂಪೂರ್ಣ ಮೇಜರ್ ಸರ್ಜರಿ!

ಮೊದಲ ಬಾರಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆ ನಡೆಯುತ್ತಿದೆ. ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ…

17 hours ago