Latest

ನೀರು ಪೋಲಾಗುತ್ತಿದ್ದರೂ ನಿಗಾ ವಹಿಸದ ಅಧಿಕಾರಿಗಳು.

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಡೊಮನಾಳ ಜೆಪಿ (ಸಿದ್ದಪನ ಅಡಿ) ಗ್ರಾಮದಲ್ಲಿ ನೀರಿನ ಟ್ಯಾಂಕ್ ಇದ್ದು, ಈ ಟ್ಯಾಂಕ್ ಗೆ ಸರಿಯಾದ ವ್ಯವಸ್ಥೆ ಇಲ್ಲವಾಗಿದೆ. ಪ್ರತಿದಿನವೂ ನೀರು ಅನಾವಶ್ಯಕವಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೋಲಾಗುತ್ತಿದೆ. ಅಲ್ಲೇ ಹತ್ತಿರವಿರುವ ಒಬ್ಬರನ್ನು ಕೇಳಿದಾಗ ಈ ಟ್ಯಾಂಕ್ ಗೆ ನಳಗಳಿಲ್ಲದೆ ಎಷ್ಟೋ ವರ್ಷಗಳು ಕಳೆದಿವೆ ಎಂದು ತಿಳಿಸಿದರು. ಪ್ರತಿದಿನ ಗ್ರಾಮ ಪಂಚಾಯತಿ ಸಿಬ್ಬಂದಿ ನೋಡಿದರೂ ನೋಡದ ಹಾಗೆ ಇರುತ್ತಾರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿಯ ಪ್ರಜ್ಞಾವಂತರು ತಿಳಿಸಿದ್ದಾರೆ.
ಈ ಟ್ಯಾಂಕ್ ನ ಎದುರುಗಡೆಗೆ ಶಾಲೆಯಿದೆ. ಆ ಶಾಲೆಯಲ್ಲಿ ಅದೇಷ್ಟೋ ಪುಟ್ಟ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅಲ್ಲೇ ಹತ್ತಿರವಿರುವ ನೀರು ಪೋಲಾಗುತ್ತಿದೆ ಹೊರತು ಆ ಪುಟ್ಟ ವಿದ್ಯಾರ್ಥಿಗಳಿಗೆ ಆ ನೀರು ಸಿಗುತ್ತಿಲ್ಲ. ಈ ಟ್ಯಾಂಕ್ ಸ್ವಚ್ಚಗೊಳಿಸಿ ನಳಗಳ ವ್ಯವಸ್ಥೆ ಮಾಡಿದರೆ ಎಲ್ಲಾ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂಬುದನ್ನು ಅರಿಯದ ಅಧಿಕಾರಿಗಳು ಇದು ನಿಜಕ್ಕೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಅಸೂಯೆ ತರುವ ವಿಷಯವಾಗಿದೆ. ಇನ್ನುಮುಂದೆ ಆದರೂ ಈ ಟ್ಯಾಂಕ್ ಗೆ ನಳದ ವ್ಯವಸ್ಥೆ ಕಲ್ಪಿಸಿ, ಪೋಲಾಗುತ್ತಿರುವ ನೀರನ್ನು ತಡೆಗಟ್ಟಿ ಮುಂದಿನ ಪೀಳಿಗೆಗೆ ನೀರು ಸಿಗುವ ಹಾಗೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಲಕ್ಷಣವಾಗಿದೆ. ಈ ವರದಿಯನ್ನು ಗಮನಿಸಿಯಾದರೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್ಚೆತ್ತುಕೊಂಡು ವ್ಯವಸ್ಥೆ ಕಲ್ಪಿಸುತ್ತಾರಾ? ಕಾದು ನೋಡಬೇಕಿದೆ.

ವರದಿ: ವಿಶ್ವನಾಥ ಭಜಂತ್ರಿ

ಭ್ರಷ್ಟರ ಬೇಟೆ

Recent Posts

ಭ್ರೂಣಲಿಂಗ ಪತ್ತೆ–ಅಕ್ರಮ ಸ್ಕ್ಯಾನಿಂಗ್ ದಂಧೆ ಭಂಡಾಫೋಡ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಬಂಧನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…

6 hours ago

₹15 ಲಕ್ಷ ಲಂಚ ಸ್ವೀಕರಿಸುವ ವೇಳೆ ಕೆಎಎಸ್ ಅಧಿಕಾರಿ ಬಲೆಗೆ; ಚಾಲಕನೊಂದಿಗೆ ಬಂಧನ

ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…

7 hours ago

ಪತ್ನಿಯ ದ್ರೋಹ ಗೊತ್ತಿದ್ದರೂ ಮಕ್ಕಳಿಗಾಗಿ ಸಹನೆ; ವಿಚ್ಛೇದನವೇ? ಹೊಸ ಬದುಕೇ? ಪತಿಯ ಪ್ರಶ್ನೆ ವೈರಲ್

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…

9 hours ago

31 ವರ್ಷ ಜೈಲು ಜೀವನದ ನಂತರ ಹೊಸ ಹಾದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ದೋಷಿ ಪೆರಾರಿವಾಲನ್ ಇದೀಗ ವಕೀಲ

ಮಾಜಿ ಪ್ರಧಾನಿ Rajiv Gandhi ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಎ.ಜಿ. ಪೆರಾರಿವಾಲನ್ ಇದೀಗ ವಕೀಲರಾಗಿರುವುದು ಗಮನಸೆಳೆಯುವ ಬೆಳವಣಿಗೆಯಾಗಿದೆ. 2022ರಲ್ಲಿ…

9 hours ago

ಪತಿಯ ಅನೈತಿಕ ಸಂಬಂಧ, ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ; ಬಿಜೆಪಿ ಮುಖಂಡ ಬಂಧನ

ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ದುರಂತ ಘಟನೆ ಸಂಭವಿಸಿದೆ. ಪತಿಯ ಅನೈತಿಕ ಸಂಬಂಧ ಹಾಗೂ ನಿರಂತರ ದೈಹಿಕ-ಮಾನಸಿಕ…

9 hours ago

ಮದುವೆ ಹೆಸರಿನಲ್ಲಿ ₹10 ಕೋಟಿ ವಂಚನೆ ಆರೋಪ: ಬಿಗ್‌ಬಾಸ್ ಖ್ಯಾತಿಯ ಆಶು ರೆಡ್ಡಿ ವಿರುದ್ಧ ಪ್ರಕರಣ

ಹೈದರಾಬಾದ್: ಬಣ್ಣದ ಲೋಕದಲ್ಲಿ ಮತ್ತೆ ವಂಚನೆ ಆರೋಪ ಕೇಳಿಬಂದಿದ್ದು, ತೆಲುಗು ಬಿಗ್‌ಬಾಸ್ ಮೂಲಕ ಜನಪ್ರಿಯತೆ ಪಡೆದ ನಟಿ ಆಶು ರೆಡ್ಡಿ…

1 day ago