Crime

“ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ: ಲಂಚಕ್ಕೆ ಡಿಮ್ಯಾಂಡ್, ಠಾಣೆಯಲ್ಲಿ ಹಲ್ಲೆ – ಪೊಲೀಸರ ವಿರುದ್ಧ ಗಂಭೀರ ಆರೋಪ!”

ಡ್ರಿಂಕ್ ಅಂಡ್ ಡ್ರೈವ್ (Drink and Drive) ತಪಾಸಣೆ ವೇಳೆ ಪೊಲೀಸರು ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂಬ ಗಂಭೀರ ಆರೋಪವೊಂದು ಮಾಡಲಾಗಿದೆ. ವಾಹನ ಸವಾರನೊಬ್ಬ, ಪೊಲೀಸ್ ಅಧಿಕಾರಿಗಳು ₹3 ಸಾವಿರ ಲಂಚಕ್ಕೆ ಒತ್ತಾಯಿಸಿದರು, ನಗದು ಕೊಡಲು ಸಾಧ್ಯವಿಲ್ಲ, ಗೂಗಲ್ ಪೇ ಮಾಡುತ್ತೇನೆ ಎಂದಾಗ ನಿರಾಕರಿಸಿದರು ಎಂದು ದೂರು ನೀಡಿದ್ದಾರೆ.

ಲಂಚದ ಬೇಡಿಕೆ ಆರೋಪ

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು, ಅದನ್ನು ಕೋರ್ಟ್‌ನಲ್ಲಿ ಪಾವತಿಸಬೇಕು ಎಂಬ ನಿಯಮವಿದೆ. ಆದರೆ, ವಿಜಯನಗರ ಸಂಚಾರಿ ಠಾಣೆ ಪೊಲೀಸರು ನೇರವಾಗಿ ಹಣ ಕೇಳಿದರಂತೆ. ಈಶ್ವರ್ ಎಂಬ ಬೈಕ್ ಸವಾರನ ಪ್ರಕಾರ, ಮಾರ್ಚ್ 14ರ ರಾತ್ರಿ ಜಿಟಿ ಮಾಲ್ ಬಳಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆರ್‌ಎಕ್ಸ್ ಬೈಕ್‌ನಲ್ಲಿ ಮದ್ಯ ಸೇವಿಸಿ ಬರುತ್ತಿದ್ದ ಈಶ್ವರ್ ಅವರನ್ನು ತಡೆದು, “₹10 ಸಾವಿರ ದಂಡ ಆಗುತ್ತದೆ, ₹3 ಸಾವಿರ ನೀಡಿದರೆ ಬಿಟ್ಟುಕೊಡುತ್ತೇವೆ” ಎಂದು ತಿಳಿಸಿದ್ದರಂತೆ.

ಈಶ್ವರ್ ನಗದು ಇಲ್ಲವೆಂದು ಗೂಗಲ್ ಪೇ ಮಾಡಲು ಯತ್ನಿಸಿದಾಗ, ಪೊಲೀಸರು ಕೇವಲ ನಗದು ಬೇಕು ಎಂದು ಒತ್ತಾಯಿಸಿದ್ರಂತೆ. ಈಶ್ವರ್ ಕೋರ್ಟ್‌ನಲ್ಲಿ ಪೂರ್ಣ ದಂಡ ಪಾವತಿಸುತ್ತೇನೆ ಎಂದಾಗ, ಅವರ ಬೈಕ್ ಅನ್ನು ಠಾಣೆಗೆ ವಾಪಸು ತೆಗೆದುಕೊಂಡು ಹೋಗಿದ್ದಾರೆ.

ಠಾಣೆಯಲ್ಲಿ ಹಲ್ಲೆ ಆರೋಪ

ಮಾರ್ಚ್ 15ರಂದು ಕೋರ್ಟ್‌ನಲ್ಲಿ ₹13 ಸಾವಿರ ದಂಡ ಪಾವತಿಸಿದ ಈಶ್ವರ್, ಮಾರ್ಚ್ 16ರಂದು ತನ್ನ ಸ್ನೇಹಿತನೊಂದಿಗೆ ಬೈಕ್ ವಾಪಸು ಪಡೆಯಲು ವಿಜಯನಗರ ಸಂಚಾರಿ ಪೊಲೀಸ್ ಠಾಣೆಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ, ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ರಂತೆ.

ಆಸ್ಪತ್ರೆಯಿಂದ ವಿಡಿಯೋ ಮೂಲಕ ದೂರು
ಈಶ್ವರ್ ಹಲ್ಲೆಯ ಬಗ್ಗೆ ವಿಡಿಯೋ ಮಾಡಿದ್ದು, “ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟ್ ನಿಂದ ಒದ್ದಿದ್ದಾರೆ. ಹಲ್ಲೆಯಿಂದ ನಾನು ಅಸ್ವಸ್ಥನಾಗಿದ್ದೆ, ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆಯಿಂದ ತನಿಖೆ

ಈ ಪ್ರಕರಣ ಸಂಬಂಧ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ವರದಿ ಕೇಳಿದ್ದಾರೆ. ಎಸಿಪಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago