ಧಾರವಾಡ: ನಗರದ ರೌಡಿಶೀಟರ್ಗಳಿಗೆ ಸೋಮವಾರದ ಬೆಳಿಗ್ಗೆ ಬೀಗದ ಬಾಗಿಲು ತೆರೆಯುವಷ್ಟರಲ್ಲೇ ಪೊಲೀಸ್ ಸಿಬ್ಬಂದಿಗಳು ಅವರ ಮನೆ ಮುಂದೆ ನಿಂತಿದ್ದರು ದೃಶ್ಯ ಕಂಡು ಕೆಲವರು ಬೆಚ್ಚಿಬಿದ್ದರು. ಈ ಹಿಂದೆಂದೂ ಅನುಭವಿಸದ ಅನುಭವವನ್ನು ಈ ಬಾರಿ ಧಾರವಾಡದ 1158 ರೌಡಿಶೀಟರ್ಗಳು ಅನುಭವಿಸಿದರು!
ಧಾರವಾಡ ನಗರ ಪೊಲೀಸ್ ಇಲಾಖೆ ಈಚೆಗೆ ಕಾನೂನು ಸುವ್ಯವಸ್ಥೆ ಖಾತರಿಗಾಗಿ ನಿರ್ದಿಷ್ಟ ಪ್ಲಾನ್ ರೂಪಿಸಿಕೊಂಡು, ನಗರದ ವಿದ್ಯಾಗಿರಿ, ಉಪನಗರ ಹಾಗೂ ಶಹರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಎಲ್ಲ ರೌಡಿಶೀಟರ್ಗಳ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು. ಈ ಸಮಯದಲ್ಲಿ 80 ಮೊಬೈಲ್ ಫೋನ್ಗಳು, 14 ಮೋಟಾರ್ ಸೈಕಲ್ಗಳು ಹಾಗೂ 2 ಮಾಕಾಸ್ತ್ರಗಳು ವಶಕ್ಕೆ ಪಡೆಯಲಾಯಿತು.
ಪುನಃ ಮತುಕೊಂಡ ರೌಡಿಶೀಟರ್ಗಳಿಗೆ ಮತ್ತೊಮ್ಮೆ ಕಾನೂನುಬದ್ಧ ಎಚ್ಚರಿಕೆಯನ್ನು ನೀಡಲು ಪೊಲೀಸರು ಅವರನ್ನು ಕರೆಸಿಸಿಕೊಂಡು ಪರೇಡ್ ನಡೆಸಿದರು. ಈ ವೇಳೆ ಮಾತನಾಡಿದ ಧಾರವಾಡ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ್ ಅವರು, ಇನ್ನು ಮುಂದೆ ಯಾರೇನು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ, ತಪ್ಪು ಮಾಡಿಕೊಂಡರೆ ಕ್ಷಮೆಯಿಲ್ಲ. ಪರಿಣಾಮ ತುಂಬಾ ಕಠಿಣವಾಗಲಿದೆ,” ಎಂದು ಖಡಕ್ ಸಂದೇಶ ನೀಡಿದರು.
ಈ ವಿಶೇಷ ಪರೇಡ್ನಲ್ಲಿ ಒಟ್ಟು 737 ರೌಡಿಶೀಟರ್ಗಳು, 20 ಡ್ರಗ್ ಪೆಡ್ಲರ್ಗಳು ಹಾಗೂ 227 ಡ್ರಗ್ಸ್ ಬಳಕೆದಾರರು ಪಾಲ್ಗೊಂಡಿದ್ದರು. ಇಂತಹ ಚಟುವಟಿಕೆಗಳಲ್ಲಿರುವ ಎಂಓಬಿ (ಹಾಗೇ ಮತ್ತೆ ಮತ್ತೆ ಗಲಾಟೆಗಳಿಗೆ ಒಳಪಡುವ ವ್ಯಕ್ತಿಗಳು) 72 ಜನರನ್ನೂ ಪರೇಡ್ಗೆ ಒಳಪಡಿಸಲಾಗಿದೆ.
“ಕಾನೂನು ಬಾಹಿರ ಚಟುವಟಿಕೆಗಳಿಗೆ ನಗರದಲ್ಲಿ ಸ್ಥಳವಿಲ್ಲ. ಯಾರೇನು ವಿದ್ರೋಹ ಮಾಡುವ ಯತ್ನ ಮಾಡಿದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಈ ಕಾರ್ಯಾಚರಣೆಯಲ್ಲಿ ಧಾರವಾಡ ಶಹರ ಠಾಣೆಯ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರ ಮಠ, ಉಪನಗರ ಠಾಣೆಯ ಇನ್ಸ್ಪೆಕ್ಟರ್ ದಯಾನಂದ್, ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ್ ದಿಡ್ಡಿಗನಾಳ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು.
ವರದಿ: ಮಹೇಶ್ ನಿಕ್ಕಮ್ಮನವರ್
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…