ಧಾರವಾಡ: ನಗರದ ರೌಡಿಶೀಟರ್ಗಳಿಗೆ ಸೋಮವಾರದ ಬೆಳಿಗ್ಗೆ ಬೀಗದ ಬಾಗಿಲು ತೆರೆಯುವಷ್ಟರಲ್ಲೇ ಪೊಲೀಸ್ ಸಿಬ್ಬಂದಿಗಳು ಅವರ ಮನೆ ಮುಂದೆ ನಿಂತಿದ್ದರು ದೃಶ್ಯ ಕಂಡು ಕೆಲವರು ಬೆಚ್ಚಿಬಿದ್ದರು. ಈ ಹಿಂದೆಂದೂ ಅನುಭವಿಸದ ಅನುಭವವನ್ನು ಈ ಬಾರಿ ಧಾರವಾಡದ 1158 ರೌಡಿಶೀಟರ್ಗಳು ಅನುಭವಿಸಿದರು!
ಧಾರವಾಡ ನಗರ ಪೊಲೀಸ್ ಇಲಾಖೆ ಈಚೆಗೆ ಕಾನೂನು ಸುವ್ಯವಸ್ಥೆ ಖಾತರಿಗಾಗಿ ನಿರ್ದಿಷ್ಟ ಪ್ಲಾನ್ ರೂಪಿಸಿಕೊಂಡು, ನಗರದ ವಿದ್ಯಾಗಿರಿ, ಉಪನಗರ ಹಾಗೂ ಶಹರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಎಲ್ಲ ರೌಡಿಶೀಟರ್ಗಳ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು. ಈ ಸಮಯದಲ್ಲಿ 80 ಮೊಬೈಲ್ ಫೋನ್ಗಳು, 14 ಮೋಟಾರ್ ಸೈಕಲ್ಗಳು ಹಾಗೂ 2 ಮಾಕಾಸ್ತ್ರಗಳು ವಶಕ್ಕೆ ಪಡೆಯಲಾಯಿತು.
ಪುನಃ ಮತುಕೊಂಡ ರೌಡಿಶೀಟರ್ಗಳಿಗೆ ಮತ್ತೊಮ್ಮೆ ಕಾನೂನುಬದ್ಧ ಎಚ್ಚರಿಕೆಯನ್ನು ನೀಡಲು ಪೊಲೀಸರು ಅವರನ್ನು ಕರೆಸಿಸಿಕೊಂಡು ಪರೇಡ್ ನಡೆಸಿದರು. ಈ ವೇಳೆ ಮಾತನಾಡಿದ ಧಾರವಾಡ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ್ ಅವರು, ಇನ್ನು ಮುಂದೆ ಯಾರೇನು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ, ತಪ್ಪು ಮಾಡಿಕೊಂಡರೆ ಕ್ಷಮೆಯಿಲ್ಲ. ಪರಿಣಾಮ ತುಂಬಾ ಕಠಿಣವಾಗಲಿದೆ,” ಎಂದು ಖಡಕ್ ಸಂದೇಶ ನೀಡಿದರು.
ಈ ವಿಶೇಷ ಪರೇಡ್ನಲ್ಲಿ ಒಟ್ಟು 737 ರೌಡಿಶೀಟರ್ಗಳು, 20 ಡ್ರಗ್ ಪೆಡ್ಲರ್ಗಳು ಹಾಗೂ 227 ಡ್ರಗ್ಸ್ ಬಳಕೆದಾರರು ಪಾಲ್ಗೊಂಡಿದ್ದರು. ಇಂತಹ ಚಟುವಟಿಕೆಗಳಲ್ಲಿರುವ ಎಂಓಬಿ (ಹಾಗೇ ಮತ್ತೆ ಮತ್ತೆ ಗಲಾಟೆಗಳಿಗೆ ಒಳಪಡುವ ವ್ಯಕ್ತಿಗಳು) 72 ಜನರನ್ನೂ ಪರೇಡ್ಗೆ ಒಳಪಡಿಸಲಾಗಿದೆ.
“ಕಾನೂನು ಬಾಹಿರ ಚಟುವಟಿಕೆಗಳಿಗೆ ನಗರದಲ್ಲಿ ಸ್ಥಳವಿಲ್ಲ. ಯಾರೇನು ವಿದ್ರೋಹ ಮಾಡುವ ಯತ್ನ ಮಾಡಿದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಈ ಕಾರ್ಯಾಚರಣೆಯಲ್ಲಿ ಧಾರವಾಡ ಶಹರ ಠಾಣೆಯ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರ ಮಠ, ಉಪನಗರ ಠಾಣೆಯ ಇನ್ಸ್ಪೆಕ್ಟರ್ ದಯಾನಂದ್, ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ್ ದಿಡ್ಡಿಗನಾಳ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು.
ವರದಿ: ಮಹೇಶ್ ನಿಕ್ಕಮ್ಮನವರ್
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…