ದಕ್ಷಿಣಕನ್ನಡ (ಆ.6): ಧರ್ಮಸ್ಥಳದ ಬಹುಚರ್ಚಿತ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ಪರಿಶೀಲನೆ ಕಾರ್ಯವನ್ನು ತೀವ್ರಗೊಳಿಸಿದ್ದು, ಇಂದು 13ನೇ ಮತ್ತು ಅಂತಿಮ ಸ್ಥಳದ ಮಹಜರು ನಡೆಯಲಿದೆ. ಈಗಾಗಲೇ ಗುರುತಿಸಲಾದ 13 ಸ್ಥಳಗಳಲ್ಲಿ 12ರಲ್ಲಿ ಭೂಮಿ ಅಗೆಯುವ ಕಾರ್ಯ ಇಂದು ನಡೆಯುವ ಪರಿಶೀಲನೆಯಿಂದ ಮಹತ್ವದ ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ.
ತನಿಖೆಯಲ್ಲಿ ಇಲ್ಲಿವರೆಗೆ 6ನೇ ಸ್ಥಳದಿಂದ 25 ಮೂಳೆಗಳು ಹಾಗೂ 11ನೇ ಸ್ಥಳದ ಬಳಿಯಿಂದ ಒಂದು ಅಸ್ಥಿಪಂಜರ ಪತ್ತೆಯಾಗಿದ್ದು, ಇವು ಪ್ರಕರಣದ ಗಂಭೀರತೆಯನ್ನು ತೋರಿಸುತ್ತವೆ. ಈ ಅಸ್ಥಿಪಂಜರ ಹಾಗೂ ಸಿಕ್ಕಿದ ಸೀರೆ, ಬಟ್ಟೆಯ ತುಂಡುಗಳು ಈಗಾಗಲೇ ಫಾರೆನ್ಸಿಕ್ ಸೈನ್ಸ್ ಲ್ಯಾಬ್ (FSL)ಗೆ ಕಳುಹಿಸಲಾಗಿವೆ.
ಹೀಗೆಯೇ, ದೂರುದಾರನ ಪರ ವಕೀಲ ಮಂಜುನಾಥ್ ಎನ್ ಅವರು ಹೊಸ ಆರೋಪವನ್ನು ಹೊರಹಾಕಿದ್ದು, 11ನೇ ಸ್ಥಳದ ಸಮೀಪವಿರುವ ಭಾಗದಲ್ಲಿ ಮೂರು ಅಸ್ಥಿಪಂಜರಗಳು ಮತ್ತು ಮಹಿಳೆಯ ಮೃತದೇಹವಿರುವ ಸೀರೆ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಈ ದೂರು ತನಿಖೆಗೆ ಹೊಸ ಆಯಾಮ ನೀಡಿದೆ.
ಮಹತ್ವದ ಪತ್ತೆಗಳು:
6ನೇ ಸ್ಥಳ: 25 ಮೂಳೆಗಳು ಮತ್ತು ಬುರುಡೆ ಪತ್ತೆ.
11ನೇ ಸ್ಥಳದ ಬಳಿಯ ಜಾಗ: ಒಂದು ಅಸ್ಥಿಪಂಜರ, ಸೀರೆ ಮತ್ತು ಬಟ್ಟೆ ತುಂಡುಗಳು.
1ನೇ ಸ್ಥಳ: ಪಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪತ್ತೆಯಾದರೂ, ಅವು ಧರ್ಮಸ್ಥಳದಲ್ಲಿ ನಡೆದ ಘಟನೆಗಳಿಗೆ ಸಂಬಂಧವಿಲ್ಲ.
8ನೇ ಸ್ಥಳ: ಕೆಂಪು ಬಣ್ಣದ ಹರಿದ ಬ್ಲೌಸ್ ತುಂಡು ಪತ್ತೆ.
11, 12ನೇ ಸ್ಥಳಗಳು: ಯಾವುದೇ ಮೃತದೇಹ ಪತ್ತೆಯಾಗಿಲ್ಲ.
ಹೆಚ್ಚುವರಿ ಪ್ರಕರಣಗಳು ಎಸ್ಐಟಿಗೆ:
ಪ್ರಸ್ತುತ ತನಿಖೆಯ ನಡುವೆಯೇ, ಎರಡು ಹೊಸ ದೂರುಗಳು ಎಸ್ಐಟಿ ಎದುರು ಬಂದಿವೆ. 6ನೇ ಸ್ಥಳದ ಮೂಳೆಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ, ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ ಅವರು ಒಬ್ಬ ಬಾಲಕಿಯ ಮೃತದೇಹವನ್ನು ದಟ್ಟ ವನವಲಯದಲ್ಲಿ ನೋಡಿದ್ದಾಗಿ ದೂರು ನೀಡಿದ್ದಾರೆ.
ತನಿಖೆಯ ಮುಂದಿನ ಹಾದಿ:
ಇಂದು ನಡೆಯುವ 13ನೇ ಸ್ಥಳದ ಪರಿಶೀಲನೆಯ ನಂತರ, ಸ್ಥಳದಲ್ಲಿ ಹೊಸ ಪತ್ತೆಗಳು ನಡೆಯದೇ ಹೋದರೆ ದೂರುದಾರನಾದ ಅನಾಮಿಕನ ವಿಚಾರಣೆಗೆ ಹೆಚ್ಚು ತೀವ್ರತೆ ನೀಡಲಾಗಲಿದೆ. ಅವನ ಮೇಲಿಂದಲೇ ಬ್ರೈನ್ ಮ್ಯಾಪಿಂಗ್ ಅಥವಾ ಲೈ ಡಿಟೆಕ್ಟರ್ ಟೆಸ್ಟ್ ನಡೆಸುವ ಅವಕಾಶವಿದೆ. ಜೊತೆಗೆ, ಹೊಸ ಸ್ಥಳಗಳನ್ನು ಅನಾಮಿಕ ಗುರುತಿಸಿದರೆ ಅವುಗಳಲ್ಲಿಯೂ ಮಹಜರು ನಡೆಯುವುದು ಖಚಿತ.
ವಕೀಲ ಮಂಜುನಾಥ್ ಎನ್ ಅವರು ಮಾಡಿದ ಹೊಸ ಆರೋಪ ಮತ್ತು ಈಗಾಗಲೇ ನಡೆದ ಪತ್ತೆಗಳು ಈ ಪ್ರಕರಣಕ್ಕೆ ಹಲವಾರು ಅನುಮಾನಗಳನ್ನು ಉಂಟುಮಾಡಿದ್ದು, ಎಸ್ಐಟಿ ತನಿಖೆಗೆ ಹೊಸ ದಿಕ್ಕು ನೀಡಿವೆ. ಇಂದಿನ ಕಾರ್ಯಚರಣೆ ಮತ್ತು ಮಹಜರಿನಿಂದಲೇ ಮುಂದಿನ ತನಿಖೆಯ ದಿಕ್ಕು ಸ್ಪಷ್ಟವಾಗಲಿದೆ.
ಗುಜರಾತಿನ ರಾಜ್ಕೋಟ್ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…
ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…
ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…
ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…