ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವುದಾಗಿ ಕೇಳಿ ಬರುತ್ತಿರುವ ಸಂವೇದನಾಶೀಲ ಪ್ರಕರಣ ಸಂಬಂಧ, ಐದನೇ ದಿನವೂ ಅಸ್ಥಿ ಉತ್ಖನನ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಉತ್ಖನನದ ವೇಳೆ ದೂರು ನೀಡಿರುವ ವ್ಯಕ್ತಿಯ ಹಠಾತ್ ನಡೆ ಹೊಸ ಸಂಶಯ ಮತ್ತು ಕುತೂಹಲಕ್ಕೆ ಕಾರಣವಾಗಿದ್ದಾನೆ.
ಸಿಎಂ ನೇತೃತ್ವದ ವಿಶೇಷ ತನಿಖಾ ತಂಡ (SIT) ಈಗಾಗಲೇ 10 ಪಾಯಿಂಟ್ಗಳಲ್ಲಿ ಅಸ್ಥಿ ಶೋಧ ನಡೆಸಿದ್ದು, ಇಂದಿನಿಂದ 11ನೇ, 12ನೇ ಹಾಗೂ 13ನೇ ಪಾಯಿಂಟ್ಗಳಲ್ಲಿ ಶೋಧ ಆರಂಭಿಸಲು ತಯಾರಿ ನಡೆದಿದೆ. ವಿಶೇಷವಾಗಿ 12 ಮತ್ತು 13ನೇ ಪಾಯಿಂಟ್ಗಳಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಶವ ಹೂತಿದ್ದೇನೆ ಎಂದು ದೂರುದಾರ ಹಿಂದಿನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದ ಹಿನ್ನೆಲೆಯಲ್ಲಿ, ಈ ಸ್ಥಳಗಳ ಪರಿಶೀಲನೆ ಹೆಚ್ಚು ಮಹತ್ವದಾಗಿ ಪರಿಗಣಿಸಲಾಗಿದೆ.
ಆದರೆ ಉತ್ಖನನದ ಸಮಯದಲ್ಲಿ ದೂರುದಾರನೊಬ್ಬನ ಅನುಮಾನಾಸ್ಪದ ನಡೆ ಎಲ್ಲರ ಗಮನ ಸೆಳೆದಿದೆ. ಅಧಿಕಾರಿಗಳು 11ನೇ ಪಾಯಿಂಟ್ಗೆ ಕರೆದೊಯ್ಯುವ ಬದಲು, ನೇತ್ರಾವತಿ ನದಿಯ ಸಮೀಪದ ಒಂದು ಅನಾಮಿಕ ಗುಡ್ಡದ ಕಡೆಗೆ ದೂರುದಾರನನ್ನು ಕರೆದೊಯ್ದಿರುವುದು ಹೊಸ ಶಂಕೆಗಳಿಗೆ ದಾರಿತೊರೆದಿದೆ.
ಇದುವರೆಗೆ ನಡೆದ 10 ಪಾಯಿಂಟ್ಗಳ ಉತ್ಖನನದಲ್ಲಿ ಕೇವಲ ಆರನೇ ಪಾಯಿಂಟ್ನಲ್ಲಿಯೇ ಅಸ್ಥಿಗಳು ಪತ್ತೆಯಾಗಿವೆ. ಇಲ್ಲಿಯೇ ತಲೆಬುರುಡೆ ಸೇರಿದಂತೆ ಹಲವು ಮೂಳೆಗಳು ಪತ್ತೆಯಾಗಿದ್ದು, ಈ ಅಸ್ಥಿಗಳನ್ನು ತಕ್ಷಣ ಎಫ್ಎಸ್ಎಲ್ (FSL)ಗೆ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಈ ಮೂಳೆಗಳು ಕನಿಷ್ಠ 15 ವರ್ಷಕ್ಕೂ ಹಳೆಯದಾಗಿರಬಹುದೆಂಬ ಅಂದಾಜು ಲಭಿಸಿದೆ.
ಇಡೀ ತನಿಖೆಯು ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆಯುತ್ತಿದ್ದು, ಶವ ಹೂತು ಪ್ರಕರಣ ಸತ್ಯಕ್ಕೂ ಕೇವಲ ಕಾಲದ ಪ್ರಶ್ನೆಯಾಗಿರಬಹುದು ಎಂಬ ನಿರೀಕ್ಷೆಯಿದೆ.
ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…
ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…
ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…
ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್ನಲ್ಲಿ ಶ್ರೀಕೃಷ್ಣನ…
ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…
ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…