ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಮುಡಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ತುಂಬಾ ಸಂಕಷ್ಟವಾಗಿದೆ ಯಾಕೆಂದರೆ ಚರಂಡಿಗಳಲ್ಲಿ ಸಾಮಾನ್ಯವಾಗಿ ನೀರು ಹೋಗಲು ಇರುತ್ತದೆ ಆದರೆ ಇಲ್ಲಿ ನೀರು ಹೋಗುತ್ತಿಲ್ಲ ಅದರಲ್ಲಿ ಮಣ್ಣು, ಕಸ, ಪ್ಲಾಸ್ಟಿಕ್ ಹಾಗೂ ಪೊದೆಗಳು ಸಹ ಬೆಳೆದುಕೊಂಡಿದೆ. ನೀರು ಹೋಗಲು ಜಾಗವಿಲ್ಲದೆ ಅಲ್ಲೇ ನಿಲುತಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಚರಂಡಿಗಳಲ್ಲಿ ನೀರು ನಿತ್ತು ಕೊಳೆಯುತ್ತಿದೆ ಆ ನೀರು ನಿಂತಿರುವ ಜಾಗದಿಂದಲೇ ಸೊಳ್ಳೆಗಳು ಸಹ ಬರುತ್ತಿವೆ. ಅಷ್ಟೇ ಅಲ್ಲ ಇನ್ನು ಚಾನೆಲ್, ಮೋರಿಗಳ ಮೇಲೆ ಕೊಳೆತು ಹೋಗಿರುವ ಪದಾರ್ಥ ಹಾಗೂ ಮನೆಯಲ್ಲಿ ಮೂರು ನಾಲ್ಕು ದಿನ ಇಟ್ಟುಕೊಂಡಿರುವ ಮುಸುರೆ ನೀರನ್ನು ಸಹ ಹಾಕುತ್ತಾರೆ. ಪೊದೆ ಬೆಳೆದುಕೊಂಡು ಮೋರಿಯು ಸಹ ಕಾಣಿಸುತ್ತಿಲ್ಲ, ನೀರು ಹೋಗಲುದಾರಿನು ಇಲ್ಲ. ಅಲ್ಲೇ ನೀರು ನಿಲ್ಲುತ್ತದೆ ಅಲ್ಲೂ ಸಹ ಮೊದಲೇ ಹೇಳಿದಂತೆ ಸೊಳ್ಳೆಗಳು ಬರುತ್ತಿವೆ. ಸೊಳ್ಳೆ ಹೆಚ್ಚಾದ ಕಾರಣ ಬರುವ ಡೆಂಗ್ಯೂ ಕಾಯಿಲೆ ಇಂದ ಜನರಿಗೆ ಸಮಸ್ಯೆ ಆಗುತ್ತದೆ. ಇದರ ಬಗ್ಗೆ ಮುಡುಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಭದ್ರಾಚಾರಿಯವರು ಕಾಳಜಿ ವಹಿಸಬೇಕು ಇಲ್ಲದಿದ್ದರೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಸಾಕಷ್ಟು ಜನ ಕಯಿಲ್ಲೆ ಬೀಳುತ್ತಾರೆ ಆದ್ದರಿಂದ ಈ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.
ವರದಿ: ನಜೀರ್ ಅಹಮದ್
ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…
ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…
ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…
ಉತ್ತರ ಪ್ರದೇಶದ ಅಲಿಗಢ್ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…
ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…
ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…