ಕೋಲಾರ, ಜುಲೈ 8 : ಪ್ರೇಮದ ಹೆಸರಿನಲ್ಲಿ ತನ್ನ ಗಂಡನನ್ನು ಬಿಟ್ಟು ಓಡಿ ಬಂದ ಮಹಿಳೆಯೊಬ್ಬಳು ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರೇಮದ ಭರವಸೆ ನೀಡಿ ಗರ್ಭಿಣಿ ಮಾಡಿದ ನಂತರ ಮದುವೆಗೆ ನಿರಾಕರಿಸಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದಲ್ಲಿ ಬೆಳಕಿಗೆ ಬಂದಿದೆ.
ಆರ್ ತಿಮ್ಮಸಂದ್ರ ಗ್ರಾಮದ ಸಂಯುಕ್ತಾ ಎಂಬ ಮಹಿಳೆ, ಮದುವೆಯ ಬಳಿಕ ಬೆಂಗಳೂರಿನಲ್ಲಿ ಪತಿ ಹರೀಶ್ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಇತ್ತ ಅವರು ಇಲ್ಲಿಯವರೆಗೆ ಸಮಾಧಾನಕರ ಜೀವನವನ್ನೇ ಸಾಗಿಸುತ್ತಿದ್ದರು. ಆದರೆ, ಪತಿಯ ಸ್ನೇಹಿತ ಅಮರನಾಥ್ ಅವರ ಜಿವನದಲ್ಲಿ ಕಾಲಿಟ್ಟು ಎಲ್ಲವನ್ನೂ ಬದಲಾಯಿಸಿದ.
ಅಮರನಾಥ್ ಅವರೊಂದಿಗೆ ದಿನೇದಿನೇ ಬೆಳೆತ ಸಂಪರ್ಕ ಕೊನೆಗೆ ಪ್ರೀತಿಗೆ ವಿಸ್ತರಿತವಾಗಿದ್ದು, “ನಿನ್ನನ್ನು ಮದುವೆಯಾಗದೇ ಉಳಿಯಲಾಗದು” ಎಂಬ ಮಾತುಗಳಿಂದ ಸಂಯುಕ್ತಾಳ ಮನ ಗೆದ್ದಿದ್ದ ಅಮರನಾಥ್ ಮೇಲೆ ಅವಳು ಸಂಪೂರ್ಣವಾಗಿ ನಂಬಿಕೆ ಇಟ್ಟಿದಳು.
ಈ ನಂಬಿಕೆಯ ಬೆಲೆ ಮಾಡದೆ, ಸಂಯುಕ್ತಾ ಗಂಡನನ್ನು ತೊರೆದು ಅಮರನಾಥ್ ಜೊತೆ ಓಡಿ ಬಂದು ಪ್ರೀತಿಯ ಬದುಕು ಪ್ರಯತ್ನಿಸಿದ್ದರು. ವರದಿಗಳ ಪ್ರಕಾರ, ಈ ಇಬ್ಬರ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧ ಮುಂದುವರಿದಿದ್ದು, ಇದೀಗ ಸಂಯುಕ್ತಾ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ.
ಆದರೆ ಗರ್ಭಧಾರಣೆಯ ಬಳಿಕ ಅಮರನಾಥ್ ನಿಜವಾಸ್ತವ ಹೊರಹಾಕಿ, ಮದುವೆಗೆ ಒಪ್ಪಿಕೊಳ್ಳದೆ ಆಕೆಯನ್ನು ತಳ್ಳಿಹಾಕಿ ಪರಾರಿಯಾಗಿದ್ದಾನೆ. ಜೀವನದಲ್ಲಿ ನಿರಾಶ್ರಿತಳಾಗಿ ಉಳಿದ ಸಂಯುಕ್ತಾ ಇದೀಗ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.
ಅಂಬೇಡ್ಕರ್ ಅವರ ಚಿತ್ರ ಹಿಡಿದು, ಅಮರನಾಥ್ ಅವರ ಮನೆಯ ಎದುರು ಭಗ್ನ ಪ್ರತಿಭಟನೆ ನಡೆಸುತ್ತಿರುವ ಈ ಮಹಿಳೆಯ ಸ್ಥಿತಿ ಆಕೆಯ ನಂಬಿಕೆಗೆ ದೊರಕಿದ ಪ್ರತಿಫಲವನ್ನು ತೋರಿಸುತ್ತದೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಅಮರನಾಥ್ನ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ದುಃಖದ ಸುದ್ದಿ ಬೆಳಕಿಗೆ ಬಂದಿದೆ. ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬೆಸ್ಕಾಂ ವಿಜಿಲೆನ್ಸ್ ವಿಭಾಗದ ಎಸ್ಪಿ ಬಿ.ಎನ್. ಲಾವಣ್ಯ…
ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನಕಲಕುವ ಘಟನೆ ಒಂದು ಬೆಳಕಿಗೆ ಬಂದಿದೆ. ದಾಂಡೇಲಿ ನಗರದಲ್ಲಿ ಕುಟುಂಬ ಕಲಹ ಮತ್ತು ಮಾನಸಿಕ…
ಮಧ್ಯಪ್ರದೇಶದ ಬರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತವು ದೇಶವನ್ನೇ ದುಃಖದ ಮೌನಕ್ಕೆ ತಳ್ಳಿದೆ. ಆದರೆ ಈ ದುರ್ಘಟನೆಯ ನಂತರ…
ಮಧ್ಯ ಪ್ರದೇಶದ ಗ್ವಾಲಿಯರ್ ಹೈಕೋರ್ಟ್ ಪೀಠದ ಮುಂದೆ ಅಪರೂಪದ ಹಾಗೂ ಅಚ್ಚರಿ ಮೂಡಿಸುವ ಪ್ರಕರಣವೊಂದು ವಿಚಾರಣೆಗೆ ಬಂದಿದ್ದು, ಇದು ಸಾರ್ವಜನಿಕ…
ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ…
ಉತ್ತರ ಪ್ರದೇಶದ ಕೌಶಂಬಿಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ರೋಗಿಯ ಖಾಸಗಿತನ ಉಲ್ಲಂಘನೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ…