Latest

ಪ್ರೇಮದ ನಂಬಿಕೆಗೆ ಧಿಕ್ಕಾರ: ಗರ್ಭಿಣಿ ಮಾಡಿದ ನಂತರ ಪ್ರಿಯಕರ ಪರಾರಿಯಾದ ಘಟನೆ.!

ಕೋಲಾರ, ಜುಲೈ 8 : ಪ್ರೇಮದ ಹೆಸರಿನಲ್ಲಿ ತನ್ನ ಗಂಡನನ್ನು ಬಿಟ್ಟು ಓಡಿ ಬಂದ ಮಹಿಳೆಯೊಬ್ಬಳು ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರೇಮದ ಭರವಸೆ ನೀಡಿ ಗರ್ಭಿಣಿ ಮಾಡಿದ ನಂತರ ಮದುವೆಗೆ ನಿರಾಕರಿಸಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದಲ್ಲಿ ಬೆಳಕಿಗೆ ಬಂದಿದೆ.

ಆರ್ ತಿಮ್ಮಸಂದ್ರ ಗ್ರಾಮದ ಸಂಯುಕ್ತಾ ಎಂಬ ಮಹಿಳೆ, ಮದುವೆಯ ಬಳಿಕ ಬೆಂಗಳೂರಿನಲ್ಲಿ ಪತಿ ಹರೀಶ್‌ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಇತ್ತ ಅವರು ಇಲ್ಲಿಯವರೆಗೆ ಸಮಾಧಾನಕರ ಜೀವನವನ್ನೇ ಸಾಗಿಸುತ್ತಿದ್ದರು. ಆದರೆ, ಪತಿಯ ಸ್ನೇಹಿತ ಅಮರನಾಥ್‌ ಅವರ ಜಿವನದಲ್ಲಿ ಕಾಲಿಟ್ಟು ಎಲ್ಲವನ್ನೂ ಬದಲಾಯಿಸಿದ.

ಅಮರನಾಥ್‌ ಅವರೊಂದಿಗೆ ದಿನೇದಿನೇ ಬೆಳೆತ ಸಂಪರ್ಕ ಕೊನೆಗೆ ಪ್ರೀತಿಗೆ ವಿಸ್ತರಿತವಾಗಿದ್ದು, “ನಿನ್ನನ್ನು ಮದುವೆಯಾಗದೇ ಉಳಿಯಲಾಗದು” ಎಂಬ ಮಾತುಗಳಿಂದ ಸಂಯುಕ್ತಾಳ ಮನ ಗೆದ್ದಿದ್ದ ಅಮರನಾಥ್‌ ಮೇಲೆ ಅವಳು ಸಂಪೂರ್ಣವಾಗಿ ನಂಬಿಕೆ ಇಟ್ಟಿದಳು.

ಈ ನಂಬಿಕೆಯ ಬೆಲೆ ಮಾಡದೆ, ಸಂಯುಕ್ತಾ ಗಂಡನನ್ನು ತೊರೆದು ಅಮರನಾಥ್ ಜೊತೆ ಓಡಿ ಬಂದು ಪ್ರೀತಿಯ ಬದುಕು ಪ್ರಯತ್ನಿಸಿದ್ದರು. ವರದಿಗಳ ಪ್ರಕಾರ, ಈ ಇಬ್ಬರ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧ ಮುಂದುವರಿದಿದ್ದು, ಇದೀಗ ಸಂಯುಕ್ತಾ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ.

ಆದರೆ ಗರ್ಭಧಾರಣೆಯ ಬಳಿಕ ಅಮರನಾಥ್ ನಿಜವಾಸ್ತವ ಹೊರಹಾಕಿ, ಮದುವೆಗೆ ಒಪ್ಪಿಕೊಳ್ಳದೆ ಆಕೆಯನ್ನು ತಳ್ಳಿಹಾಕಿ ಪರಾರಿಯಾಗಿದ್ದಾನೆ. ಜೀವನದಲ್ಲಿ ನಿರಾಶ್ರಿತಳಾಗಿ ಉಳಿದ ಸಂಯುಕ್ತಾ ಇದೀಗ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ಅಂಬೇಡ್ಕರ್ ಅವರ ಚಿತ್ರ ಹಿಡಿದು, ಅಮರನಾಥ್ ಅವರ ಮನೆಯ ಎದುರು ಭಗ್ನ ಪ್ರತಿಭಟನೆ ನಡೆಸುತ್ತಿರುವ ಈ ಮಹಿಳೆಯ ಸ್ಥಿತಿ ಆಕೆಯ ನಂಬಿಕೆಗೆ ದೊರಕಿದ ಪ್ರತಿಫಲವನ್ನು ತೋರಿಸುತ್ತದೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಅಮರನಾಥ್‍ನ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.

nazeer ahamad

Recent Posts

ಬೆಂಗಳೂರಿನ ಪೊಲೀಸರೇ ತಲೆತಗ್ಗಿಸುವ ಕೆಲಸ, ಪೊಲೀಸರೇ ಅರೆಸ್ಟ್ : ಸಿಐಡಿ ಜೀಪ್‌ನಲ್ಲಿ ಬಂದು ₹20 ಲಕ್ಷ ದರೋಡೆ

ಬೆಂಗಳೂರು ನಗರದಲ್ಲಿ ಪೊಲೀಸರ ಮೇಲೆಯೇ ದರೋಡೆ ಆರೋಪ ಕೇಳಿಬಂದಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…

40 minutes ago

ಗೌರಿಬಿದನೂರಿನಲ್ಲಿ ಭೀಕರ ದರೋಡೆ: ಕಿವಿಯ ಸಮೇತ ಬಂಗಾರದ ವಾಲೆ ಕಿತ್ತುಕೊಂಡ ಕಳ್ಳರು, ವೃದ್ಧೆ ಮೃತ್ಯು

ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಭೀಕರ ದರೋಡೆ ಹಾಗೂ ಹಲ್ಲೆ ಪ್ರಕರಣವು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು,…

42 minutes ago

ಭಟ್ಕಳ ಘಟನೆಗೆ ಹೊಸ ತಿರುವು: ಯುವತಿಯ ದೂರಿನ ಮೇರೆಗೆ ಮುಸ್ಲಿಂ ಯುವಕ ಬಂಧನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಹಿನ್ನೆಲೆಯಲ್ಲಿ…

16 hours ago

ಅಧಿಕಾರಿಗೆ ಚಪ್ಪಲಿ ಏಟು: 20 ವರ್ಷವಾದರೂ ಭೂ ಪರಿಹಾರ ನೀಡದ ಬಾಗಲಕೋಟೆ ಅಧಿಕಾರಿಗಳಿಗೆ ಲೋಕಾಯುಕ್ತ ಸಮನ್ಸ್

ಬಾಗಲಕೋಟೆ: ಸುಮಾರು 20 ವರ್ಷಗಳ ಹಿಂದೆ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಇನ್ನೂ ಪರಿಹಾರ ನೀಡದೇ ರೈತನನ್ನು ಅಲೆದಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ…

1 day ago

ಸಾರ್ವಜನಿಕರ ದೂರುಗಳ ಬೆನ್ನಲ್ಲೇ ದಾಸನಪುರ ಗ್ರಾಮ ಪಂಚಾಯಿತಿ ಪಿಡಿಓ ಉಷಾ ಅಮಾನತು

ಬೆಂಗಳೂರು: ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ…

1 day ago

ರೈತರ ಹಣ ಗುಳುಂ: ತೊಂಡೇಭಾವಿ ಹಾಲು ಡೇರಿಯಲ್ಲಿ ₹2.33 ಲಕ್ಷ ಹಣ ದುರುಪಯೋಗ.!

ಗೌರಿಬಿದನೂರು: ತೊಂಡೇಭಾವಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತರ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಹಾಗೂ…

1 day ago