Latest

ಪ್ರೇಮದ ನಂಬಿಕೆಗೆ ಧಿಕ್ಕಾರ: ಗರ್ಭಿಣಿ ಮಾಡಿದ ನಂತರ ಪ್ರಿಯಕರ ಪರಾರಿಯಾದ ಘಟನೆ.!

ಕೋಲಾರ, ಜುಲೈ 8 : ಪ್ರೇಮದ ಹೆಸರಿನಲ್ಲಿ ತನ್ನ ಗಂಡನನ್ನು ಬಿಟ್ಟು ಓಡಿ ಬಂದ ಮಹಿಳೆಯೊಬ್ಬಳು ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರೇಮದ ಭರವಸೆ ನೀಡಿ ಗರ್ಭಿಣಿ ಮಾಡಿದ ನಂತರ ಮದುವೆಗೆ ನಿರಾಕರಿಸಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದಲ್ಲಿ ಬೆಳಕಿಗೆ ಬಂದಿದೆ.

ಆರ್ ತಿಮ್ಮಸಂದ್ರ ಗ್ರಾಮದ ಸಂಯುಕ್ತಾ ಎಂಬ ಮಹಿಳೆ, ಮದುವೆಯ ಬಳಿಕ ಬೆಂಗಳೂರಿನಲ್ಲಿ ಪತಿ ಹರೀಶ್‌ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಇತ್ತ ಅವರು ಇಲ್ಲಿಯವರೆಗೆ ಸಮಾಧಾನಕರ ಜೀವನವನ್ನೇ ಸಾಗಿಸುತ್ತಿದ್ದರು. ಆದರೆ, ಪತಿಯ ಸ್ನೇಹಿತ ಅಮರನಾಥ್‌ ಅವರ ಜಿವನದಲ್ಲಿ ಕಾಲಿಟ್ಟು ಎಲ್ಲವನ್ನೂ ಬದಲಾಯಿಸಿದ.

ಅಮರನಾಥ್‌ ಅವರೊಂದಿಗೆ ದಿನೇದಿನೇ ಬೆಳೆತ ಸಂಪರ್ಕ ಕೊನೆಗೆ ಪ್ರೀತಿಗೆ ವಿಸ್ತರಿತವಾಗಿದ್ದು, “ನಿನ್ನನ್ನು ಮದುವೆಯಾಗದೇ ಉಳಿಯಲಾಗದು” ಎಂಬ ಮಾತುಗಳಿಂದ ಸಂಯುಕ್ತಾಳ ಮನ ಗೆದ್ದಿದ್ದ ಅಮರನಾಥ್‌ ಮೇಲೆ ಅವಳು ಸಂಪೂರ್ಣವಾಗಿ ನಂಬಿಕೆ ಇಟ್ಟಿದಳು.

ಈ ನಂಬಿಕೆಯ ಬೆಲೆ ಮಾಡದೆ, ಸಂಯುಕ್ತಾ ಗಂಡನನ್ನು ತೊರೆದು ಅಮರನಾಥ್ ಜೊತೆ ಓಡಿ ಬಂದು ಪ್ರೀತಿಯ ಬದುಕು ಪ್ರಯತ್ನಿಸಿದ್ದರು. ವರದಿಗಳ ಪ್ರಕಾರ, ಈ ಇಬ್ಬರ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧ ಮುಂದುವರಿದಿದ್ದು, ಇದೀಗ ಸಂಯುಕ್ತಾ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ.

ಆದರೆ ಗರ್ಭಧಾರಣೆಯ ಬಳಿಕ ಅಮರನಾಥ್ ನಿಜವಾಸ್ತವ ಹೊರಹಾಕಿ, ಮದುವೆಗೆ ಒಪ್ಪಿಕೊಳ್ಳದೆ ಆಕೆಯನ್ನು ತಳ್ಳಿಹಾಕಿ ಪರಾರಿಯಾಗಿದ್ದಾನೆ. ಜೀವನದಲ್ಲಿ ನಿರಾಶ್ರಿತಳಾಗಿ ಉಳಿದ ಸಂಯುಕ್ತಾ ಇದೀಗ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ಅಂಬೇಡ್ಕರ್ ಅವರ ಚಿತ್ರ ಹಿಡಿದು, ಅಮರನಾಥ್ ಅವರ ಮನೆಯ ಎದುರು ಭಗ್ನ ಪ್ರತಿಭಟನೆ ನಡೆಸುತ್ತಿರುವ ಈ ಮಹಿಳೆಯ ಸ್ಥಿತಿ ಆಕೆಯ ನಂಬಿಕೆಗೆ ದೊರಕಿದ ಪ್ರತಿಫಲವನ್ನು ತೋರಿಸುತ್ತದೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಅಮರನಾಥ್‍ನ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.

nazeer ahamad

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago