Crime

ಸಾಲಗಾರರ ಕಾಟ; ಯುವಕ ಆತ್ಮಹತ್ಯೆಗೆ ಯತ್ನ…!

ಕುಂದಗೋಳ: ಸಾಲಗಾರರ ಕಾಟದಿಂದ ಬೇಸತ್ತು ಯುವಕನೊಬ್ಬ ಮನನೊಂದು ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಗೋಳ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಕುಂದಗೋಳ ಪಟ್ಟಣದ ನಿವಾಸಿ ಸುನೀಲ ಹೆೇಮಣ್ಣ ಪಾತ್ರೋಟಿ (26) ಎಂಬ ಯುವಕ ತಮ್ಮ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಎಂಬ ಕಾರಣದಿಂದ ಚಿಕಿತ್ಸೆಗೆ ಅಂತ 2023ರಲ್ಲಿ ಆರೋಪಿತ ನಾದ ಸಂತೋಷ ಸಿದ್ದಪ್ಪ ಮುಳ್ಳೂಳ್ಳಿ ಇವರಿಂದ 40 ಸಾವಿರ ರೂಪಾಯಿ ಕೈಗಡ ಸಾಲವನ್ನು ತೆಗೆದುಕೊಂಡಿರುತ್ತಾನೆ. ನಾಲ್ಕು ತಿಂಗಳ ಬಳಿಕ ಸಾಲ ಪಡೆದ ತಂದೆ ತೀರಿ ಹೋಗಿರುತ್ತಾರೆ. ಸಾಲಗಾರರು ಮರಳಿ ಹಣವನ್ನು ಕೂಡು ಎಂತು ಕೇಳಿದಾಗ ಸ್ವಲ್ಪ ದಿನ ನಂತರ ಕೊಡುತ್ತೇನೆ ಎಂದು ಸುನೀಲ್ ಹೇಳಿರುತ್ತಾನೆ.

ಬಳಿಕ 2024 ರ ಅಗಸ್ಟ್ ರಂದು 4 ಆರೋಪಿಗಳು ಸೇರಿಕೊಂಡು ಸುನೀಲ ಪಾತ್ರೋಟಿ ಇವರ ಮನೆಯ ಮುಂದೆ ಹೋಗಿ 30 ಸಾವಿರ ರೂಪಾಯಿಗೆ ಬಡ್ಡಿ ಸೇರಿ 1,80 ಸಾವಿರ ಆಗಿದೆ ಎಂದು ಕಿರುಕುಳ ಕೊಟ್ಟಿದ್ದಕ್ಕೆ ಸಾಲಗಾರ ಸುನೀಲ ಆರೋಪಿತ ನಾದ ಸಂತೋಷ ಸಿದ್ದಪ್ಪ ಮುಳ್ಳೂಳ್ಳಿ ಇವನಿಗೆ ಪ್ರತಿವಾರ ಪೋನ್ ಫೇ ಹಾಗೂ ಕೈಗಡ 5 ಸಾವಿರ ರೂಪಾಯಿ ನೀಡುತ್ತ ಬಂದಿರುತ್ತಾನೆ.

ಇದಲ್ಲದೆ ಸಾಲ ತೀರಿಲ್ಲ ಎಂದು ಬೆಟದೂರ ರಸ್ತ ಬಳಿ ಸಂತೋಷ ಮೂಳ್ಳೂಳ್ಳಿ, ಜತೆ ಶಿವು ಮೂಳ್ಳೂಳ್ಳಿ, ಪ್ರವೀಣ ಮುದೆಣ್ಣವರ, ಪ್ರಕಾಶ ಮೂಳ್ಳೂಳ್ಳಿ, ಸೇರಿಕೂಂಡು ಸುನೀಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿ ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ. ಇದರಿಂದಾಗಿ ಮನನೊಂದು ಸುನೀಲ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯುತ್ನಿಸಿದ್ದಾನೆ. ಈ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭ್ರಷ್ಟರ ಬೇಟೆ

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

17 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

22 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

22 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

22 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

22 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

1 day ago