Categories: CrimeLatest

ಬದುಕಿರುವ ಗಂಡನಿಗೆ ಮರಣ ಪತ್ರ: ಪತ್ನಿಯ ಮೋಸದ ಜಾಲ ಬಯಲು

ರಾಜಧಾನಿ ಬೆಂಗಳೂರಿನಲ್ಲಿ ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಇದರ ಹಿಂದೆ ಪತ್ನಿಯೇ ನಡೆಸಿದ ವಂಚನೆ ಬಹಿರಂಗವಾಗಿದೆ.

39 ವರ್ಷದ ಮೆಹೆಬೂಬ್ ಬಾಷಾ ಅವರು ಬದುಕಿದ್ದರೂ ತಮ್ಮ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. 2025ರ ಏಪ್ರಿಲ್ 23ರಂದು ಬಾಷಾ ಮೃತಪಟ್ಟಿದ್ದಾರೆ ಎಂದು ಚಿಕ್ಕಪೇಟೆಯ ಜನನ ಮತ್ತು ಮರಣ ನೋಂದಣಾಧಿಕಾರಿ ಪ್ರಮಾಣ ಪತ್ರ ನೀಡಿದ್ದರಿಂದ ಅವರ ಬಿಪಿಎಲ್ ಕಾರ್ಡ್ ಸಹ ರದ್ದಾಗಿತ್ತು.

ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ನಡೆಸಿದ ತನಿಖೆಯಲ್ಲಿ ಪ್ರಕರಣದ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಬಾಷಾ ಅವರ ಪತ್ನಿ ಶಬಾನಾ, ತನ್ನ ಗಂಡನ ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಬಳಸಿ ಕಿದ್ವಾಯಿ ಆಸ್ಪತ್ರೆಯಲ್ಲಿ ಬೇರೊಬ್ಬ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದ್ದಳು ಎಂಬುದು ಪತ್ತೆಯಾಗಿದೆ.

ಆಸ್ಪತ್ರೆಯ ಎಲ್ಲಾ ಹಂತಗಳಲ್ಲೂ ಬಾಷಾ ಅವರ ದಾಖಲೆಗಳನ್ನು ಬಳಸಲಾಗಿದ್ದರಿಂದ, ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಗುರುತು ತಪ್ಪಾಗಿ ದಾಖಲಾಗಿತ್ತು. ಬಳಿಕ 2025ರ ಏಪ್ರಿಲ್ 23ರಂದು ಆ ಅನ್ಯ ವ್ಯಕ್ತಿ ಮೃತಪಟ್ಟಾಗ, ಆಸ್ಪತ್ರೆ ದಾಖಲೆಗಳ ಆಧಾರದ ಮೇಲೆ ಬಾಷಾ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಹೊರಡಿಸಲಾಯಿತು.

ಇನ್ನಷ್ಟು ಅಚ್ಚರಿಯ ವಿಷಯವೆಂದರೆ, ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಕೂಡ ಶಬಾನಾ ‘ತನ್ನ ಪತಿ’ ಎಂದು ಸಹಿ ಹಾಕಿ ಪಡೆದುಕೊಂಡಿದ್ದಾಳೆ. ಇದರಿಂದ ಆಸ್ಪತ್ರೆ ಮತ್ತು ಬಿಬಿಎಂಪಿ ಅಧಿಕಾರಿಗಳು ದಾಖಲೆಗಳನ್ನೇ ನಂಬಿ ಕ್ರಮ ಕೈಗೊಂಡಿದ್ದರು.

ಈ ಪ್ರಕರಣವು ದಾಖಲೆಗಳ ದುರುಪಯೋಗದ ಮೂಲಕ ನಡೆದ ದೊಡ್ಡ ಮಟ್ಟದ ವಂಚನೆಯನ್ನು ಬಹಿರಂಗಪಡಿಸಿದ್ದು, ಪತ್ನಿಯ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಭ್ರಷ್ಟರ ಬೇಟೆ

Recent Posts

ಪತಿಯನ್ನು ಹೊರಗೆ ಕೂರಿಸಿ, ಮಾದಕ ದ್ರವ್ಯ ನೀಡಿ ಮಹಿಳೆ ಮೇಲೆ ಅತ್ಯಾಚಾರ: ನಾಸಿಕ್ ‘ದೇವಮಾನವ’ ಖರತ್ ವಿರುದ್ಧ 10 ಪ್ರಕರಣಗಳು

ಮಹಾರಾಷ್ಟ್ರದ Nasik Police 67 ವರ್ಷದ ಸ್ವಯಂ ಘೋಷಿತ ಜ್ಯೋತಿಷಿ-ದೇವಮಾನವ ಅಶೋಕ್ ಖರತ್ ವಿರುದ್ಧ ಗಂಭೀರ ಆರೋಪಗಳ ಮೇಲೆ ಹಲವು…

3 hours ago

ಹೊರಗುತ್ತಿಗೆ ನೌಕರರಿಗೆ ಶಾಕ್: ಒಪ್ಪಂದ ಮುಗಿದ ತಕ್ಷಣ ಸೇವೆ ಅಂತ್ಯ – ಸರ್ಕಾರದ ಕಟ್ಟುನಿಟ್ಟಿನ ಆದೇಶ

ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರ ಮಹತ್ವದ ಹಾಗೂ…

3 hours ago

ಗಂಡ ರೇಪ್ ಮಾಡುತ್ತಿದ್ದರೆ ಪತ್ನಿಯೇ ಕಾವಲು: ಮಧ್ಯಪ್ರದೇಶದಲ್ಲಿ ಬೆಚ್ಚಿಬೀಳಿಸುವ ಪ್ರಕರಣ

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಅತೀವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳ ಮೇಲೆ ಗಂಡ ದೌರ್ಜನ್ಯ ಎಸಗುತ್ತಿದ್ದಾಗ, ಪತ್ನಿಯೇ ಹೊರಗೆ…

3 hours ago

ಪತ್ನಿಯ ಮೇಲೆ ಸಂಶಯ: ನಡುರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಪ್ರಕರಣಕ್ಕೆ 495 ಪುಟಗಳ ಚಾರ್ಜ್‌ಶೀಟ್

ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಬ್ಯಾಂಕ್ ಉದ್ಯೋಗಿ ಭುವನೇಶ್ವರಿ (39) ಹತ್ಯೆ ಪ್ರಕರಣದಲ್ಲಿ ಮಾಗಡಿ ಠಾಣೆ ಪೊಲೀಸರು ತನಿಖೆ ಪೂರ್ಣಗೊಳಿಸಿ, ಏಳು…

3 hours ago

ತುಮಕೂರಿನಲ್ಲಿ ಅಣ್ಣನಿಂದ ತಮ್ಮನ ಕೊಲೆ, ತಂದೆಯೂ ಸಾತ್; ಅತ್ತಿಗೆ ಜೊತೆ ಆಕ್ರಮ ಸಂಬಂಧವೇ ಕಾರಣ.

ತುಮಕೂರು ನಗರದ ಬನಶಂಕರಿ ಪ್ರದೇಶದಲ್ಲಿ ಕೌಟುಂಬಿಕ ಕಲಹ ಭೀಕರ ರೂಪ ತಾಳಿದ್ದು, ಯುವಕನೊಬ್ಬ ಅಣ್ಣನ ಕೈಯಲ್ಲಿ ಕೊಲೆಯಾಗಿರುವ ಘಟನೆ ಬೆಳಕಿಗೆ…

4 hours ago

‘ನೇಹಾ ಹಿರೇಮಠ್‌ಗೆ ಆದ ಗತಿಯೇ ನಿನಗೂ ಆಗುತ್ತದೆ’ ಪೋಕ್ಸೋ ಆರೋಪಿ ಜೈಲಿನಿಂದಲೇ ವಿಡಿಯೋ ಕಾಲ್ ಬೆದರಿಕೆ

ಜೈಲುಗಳಲ್ಲಿ ಕೈದಿಗಳು ಐಶಾರಾಮಿ ಜೀವನ ನಡೆಸುತ್ತಿರುವ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಧಾರವಾಡ ಕೇಂದ್ರ ಕಾರಾಗೃಹದಿಂದಲೇ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ…

4 hours ago