Latest

ಮಗಳು ಯುವಕನ ಜೊತೆ ಪರಾರಿ: ಪೊಲೀಸರ ನಿರ್ಲಕ್ಷ್ಯದಿಂದ ಠಾಣೆ ಎದುರೇ ತಂದೆ ವಿಷ ಸೇವನೆ.!

ಚಿತ್ರದುರ್ಗ, ಜುಲೈ 22 – ಹೊಳಲ್ಕೆರೆ ಪೊಲೀಸ್ ಠಾಣೆಯ ನಿರ್ಲಕ್ಷ್ಯದಿಂದ ತೀವ್ರ ಮಾನಸಿಕ ಅಳಿವಿಗೆ ಒಳಗಾಗಿದ್ದ ಒಬ್ಬ ತಂದೆ, ಅಂತಿಮವಾಗಿ ಠಾಣೆಯೇ ಸಾವಿನ ವೇದಿಕೆಯಾಗುವಂತಾಗಿದ್ದ ದುರ್ಘಟನೆ ನಡೆದಿದೆ. ಮಗಳ ಬಗ್ಗೆ ಕಾತರದಿಂದ ಬಂದಿದ್ದು, ಒಂದು ಮಾತುಕತೆಗಾದರೂ ಅವಕಾಶ ನೀಡುವಂತೆ ಪ್ರಾರ್ಥಿಸಿದ್ದ ಆ ತಂದೆ, ಆಗಾಗೆ ನಿರ್ಲಕ್ಷ್ಯ ಮತ್ತು ಅವಮಾನ ಎದುರಿಸಿ, ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದಂತಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗಿಲ್ಕೇನಹಳ್ಳಿ ನಿವಾಸಿ ಅಜ್ಜಯ್ಯ (51) ಮೃತಪಟ್ಟವರು. ಕಾರ್ಮಿಕವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದ ಅಜ್ಜಯ್ಯನ ಮಗಳು ಸುಮಾರು ಒಂದು ವಾರದ ಹಿಂದೆ ರಘು ಎಂಬ ಯುವಕನ ಜತೆ ಮನೆ ಬಿಟ್ಟು ಹೋಗಿದ್ದಾಳೆ. ಮಗಳು ವಯಸ್ಕಳಲ್ಲ ಎಂಬ ಮಾಹಿತಿ ಹಾಗೂ ಜನ್ಮ ಪ್ರಮಾಣಪತ್ರವಿರುವುದನ್ನು ತಿಳಿಸಿದರೂ ಕೂಡ, ಅಜ್ಜಯ್ಯನ ಅಳಲು ಅಧಿಕಾರಿಗಳ ಹೃದಯ ತಲುಪಿಲ್ಲ.

ಒಂದೇ ಮನವಿಗೆ ಹಲವಾರು ಬಾರಿ ಪೊಲೀಸ್ ಠಾಣೆ ಪ್ರದೇಕ್ಷೆ

ಮಗಳು ಯಾರು ಜತೆ ಹೋಗಿದ್ದಾಳೆ, ಏನು ನಡೆಯುತ್ತಿದೆ ಎನ್ನುವುದಾದರೂ ತಿಳಿದುಕೊಳ್ಳಬೇಕೆಂಬ ತೀವ್ರ ಆಳದ ಕಾಳಜಿಯಿಂದ, ಅಜ್ಜಯ್ಯ ಅವರು ಹಲವು ದಿನಗಳಿಂದ ಹೊಳಲ್ಕೆರೆ ಪೊಲೀಸ್ ಠಾಣೆಯ ಬಾಗಿಲು ತಟ್ಟುತ್ತಿದ್ದರು. ಆದರೆ ಠಾಣೆಯ ಸಿಪಿಐ ಚಿಕ್ಕಣ್ಣವರ್ ಮತ್ತು ಪಿಎಸ್ಐ ಸಚಿನ್, “ಇನ್ನೆ ಬನ್ನಿ, ನಾಳೆ ಬನ್ನಿ” ಎಂಬ ನೆಪ ಹೇಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಆರೋಪವಿದೆ. ಸಂಬಂಧಿಕರ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳಿಂದ ಅವಮಾನಕಾರಿಯಾದ ಮಾತುಗಳನ್ನೂ ಅಜ್ಜಯ್ಯ ಕೇಳಬೇಕಾಯಿತು.

ಕಡೇ ಎಚ್ಚರಿಕೆ: ವಿಷ ಸೇವನೆಯ ಮುನ್ನ ಫೋನ್ ಕರೆ

ಭಾನುವಾರ ಸಂಜೆ, ತೀವ್ರ ನೊಂದ ಅಜ್ಜಯ್ಯ ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿದರು. ಅದಕ್ಕೂ ಅರ್ಧಗಂಟೆ ಮೊದಲು ಅವರು ತಮ್ಮ ಸಂಬಂಧಿ ಪ್ರಶಾಂತ್‌ಗೆ ಕರೆ ಮಾಡಿ, “ಪೋಲೀಸರು ನ್ಯಾಯ ನೀಡಲ್ಲ. ನಾನು ಬಾಳಲ್ಲ. ವಿಷ ಕುಡಿದು ಕೊನೆಗೊಳಿಸುತ್ತೇನೆ” ಎಂದು ಹೇಳಿದ್ದರು ಎನ್ನಲಾಗಿದೆ. ಪ್ರಶಾಂತ್ ಸಮಾಧಾನಪಡಿಸಿದ್ದರೂ ಅಜ್ಜಯ್ಯನು ತಮ್ಮ ನಿರ್ಧಾರದಿಂದ ಹಿಂದೆ ಸರಲಿಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಸ್ಥಳೀಯರ ಆಕ್ರೋಶ, ಲಾಠಿಚಾರ್ಜ್

ಅಜ್ಜಯ್ಯನ ಮೃತದೇಹವನ್ನು ಹೊಳಲ್ಕೆರೆ ಠಾಣೆ ಎದುರು ಇಟ್ಟು ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಗಟ್ಟಿದಂತೆ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಹತ್ತಿಕ್ಕಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.

ನ್ಯಾಯದ ಕೂಗು: ತನಿಖೆ ಹಾಗೂ ಕ್ರಮಕ್ಕೆ ಆಗ್ರಹ

ಅಜ್ಜಯ್ಯನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು, “ಪೋಲೀಸರ ನಿರ್ಲಕ್ಷ್ಯದಿಂದಲೇ ಈ ಅನಾಹುತ ಸಂಭವಿಸಿದೆ. ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು,” ಎಂದು ಒತ್ತಾಯಿಸಿದ್ದಾರೆ.

ಈ ಘಟನೆ ಜಿಲ್ಲೆಯ ಪೊಲೀಸ್ ವ್ಯವಸ್ಥೆಯ ಗಂಭೀರತೆಗೆ ದೊಡ್ಡ ಪ್ರಶ್ನೆ ಚುಚ್ಚಿದ್ದು, ಅಜ್ಜಯ್ಯನ ಆತ್ಮಹತ್ಯೆ ಹಿಂದೆ ನ್ಯಾಯ ಹಕ್ಕು ಬಲವಾದ ನಿರ್ಲಕ್ಷ್ಯವಿದ್ದರೆ, ಇದು ಮಾನವೀಯತೆಯ ವಿರುದ್ಧದ ದುರ್ಘಟನೆ ಎನ್ನುವುದು ಸ್ಪಷ್ಟವಾಗಿದೆ.

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

13 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

13 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

13 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

13 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

2 days ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

2 days ago