Latest

ಮಗಳು ಯುವಕನ ಜೊತೆ ಪರಾರಿ: ಪೊಲೀಸರ ನಿರ್ಲಕ್ಷ್ಯದಿಂದ ಠಾಣೆ ಎದುರೇ ತಂದೆ ವಿಷ ಸೇವನೆ.!

ಚಿತ್ರದುರ್ಗ, ಜುಲೈ 22 – ಹೊಳಲ್ಕೆರೆ ಪೊಲೀಸ್ ಠಾಣೆಯ ನಿರ್ಲಕ್ಷ್ಯದಿಂದ ತೀವ್ರ ಮಾನಸಿಕ ಅಳಿವಿಗೆ ಒಳಗಾಗಿದ್ದ ಒಬ್ಬ ತಂದೆ, ಅಂತಿಮವಾಗಿ ಠಾಣೆಯೇ ಸಾವಿನ ವೇದಿಕೆಯಾಗುವಂತಾಗಿದ್ದ ದುರ್ಘಟನೆ ನಡೆದಿದೆ. ಮಗಳ ಬಗ್ಗೆ ಕಾತರದಿಂದ ಬಂದಿದ್ದು, ಒಂದು ಮಾತುಕತೆಗಾದರೂ ಅವಕಾಶ ನೀಡುವಂತೆ ಪ್ರಾರ್ಥಿಸಿದ್ದ ಆ ತಂದೆ, ಆಗಾಗೆ ನಿರ್ಲಕ್ಷ್ಯ ಮತ್ತು ಅವಮಾನ ಎದುರಿಸಿ, ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದಂತಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗಿಲ್ಕೇನಹಳ್ಳಿ ನಿವಾಸಿ ಅಜ್ಜಯ್ಯ (51) ಮೃತಪಟ್ಟವರು. ಕಾರ್ಮಿಕವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದ ಅಜ್ಜಯ್ಯನ ಮಗಳು ಸುಮಾರು ಒಂದು ವಾರದ ಹಿಂದೆ ರಘು ಎಂಬ ಯುವಕನ ಜತೆ ಮನೆ ಬಿಟ್ಟು ಹೋಗಿದ್ದಾಳೆ. ಮಗಳು ವಯಸ್ಕಳಲ್ಲ ಎಂಬ ಮಾಹಿತಿ ಹಾಗೂ ಜನ್ಮ ಪ್ರಮಾಣಪತ್ರವಿರುವುದನ್ನು ತಿಳಿಸಿದರೂ ಕೂಡ, ಅಜ್ಜಯ್ಯನ ಅಳಲು ಅಧಿಕಾರಿಗಳ ಹೃದಯ ತಲುಪಿಲ್ಲ.

ಒಂದೇ ಮನವಿಗೆ ಹಲವಾರು ಬಾರಿ ಪೊಲೀಸ್ ಠಾಣೆ ಪ್ರದೇಕ್ಷೆ

ಮಗಳು ಯಾರು ಜತೆ ಹೋಗಿದ್ದಾಳೆ, ಏನು ನಡೆಯುತ್ತಿದೆ ಎನ್ನುವುದಾದರೂ ತಿಳಿದುಕೊಳ್ಳಬೇಕೆಂಬ ತೀವ್ರ ಆಳದ ಕಾಳಜಿಯಿಂದ, ಅಜ್ಜಯ್ಯ ಅವರು ಹಲವು ದಿನಗಳಿಂದ ಹೊಳಲ್ಕೆರೆ ಪೊಲೀಸ್ ಠಾಣೆಯ ಬಾಗಿಲು ತಟ್ಟುತ್ತಿದ್ದರು. ಆದರೆ ಠಾಣೆಯ ಸಿಪಿಐ ಚಿಕ್ಕಣ್ಣವರ್ ಮತ್ತು ಪಿಎಸ್ಐ ಸಚಿನ್, “ಇನ್ನೆ ಬನ್ನಿ, ನಾಳೆ ಬನ್ನಿ” ಎಂಬ ನೆಪ ಹೇಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಆರೋಪವಿದೆ. ಸಂಬಂಧಿಕರ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳಿಂದ ಅವಮಾನಕಾರಿಯಾದ ಮಾತುಗಳನ್ನೂ ಅಜ್ಜಯ್ಯ ಕೇಳಬೇಕಾಯಿತು.

ಕಡೇ ಎಚ್ಚರಿಕೆ: ವಿಷ ಸೇವನೆಯ ಮುನ್ನ ಫೋನ್ ಕರೆ

ಭಾನುವಾರ ಸಂಜೆ, ತೀವ್ರ ನೊಂದ ಅಜ್ಜಯ್ಯ ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿದರು. ಅದಕ್ಕೂ ಅರ್ಧಗಂಟೆ ಮೊದಲು ಅವರು ತಮ್ಮ ಸಂಬಂಧಿ ಪ್ರಶಾಂತ್‌ಗೆ ಕರೆ ಮಾಡಿ, “ಪೋಲೀಸರು ನ್ಯಾಯ ನೀಡಲ್ಲ. ನಾನು ಬಾಳಲ್ಲ. ವಿಷ ಕುಡಿದು ಕೊನೆಗೊಳಿಸುತ್ತೇನೆ” ಎಂದು ಹೇಳಿದ್ದರು ಎನ್ನಲಾಗಿದೆ. ಪ್ರಶಾಂತ್ ಸಮಾಧಾನಪಡಿಸಿದ್ದರೂ ಅಜ್ಜಯ್ಯನು ತಮ್ಮ ನಿರ್ಧಾರದಿಂದ ಹಿಂದೆ ಸರಲಿಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಸ್ಥಳೀಯರ ಆಕ್ರೋಶ, ಲಾಠಿಚಾರ್ಜ್

ಅಜ್ಜಯ್ಯನ ಮೃತದೇಹವನ್ನು ಹೊಳಲ್ಕೆರೆ ಠಾಣೆ ಎದುರು ಇಟ್ಟು ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಗಟ್ಟಿದಂತೆ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಹತ್ತಿಕ್ಕಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.

ನ್ಯಾಯದ ಕೂಗು: ತನಿಖೆ ಹಾಗೂ ಕ್ರಮಕ್ಕೆ ಆಗ್ರಹ

ಅಜ್ಜಯ್ಯನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು, “ಪೋಲೀಸರ ನಿರ್ಲಕ್ಷ್ಯದಿಂದಲೇ ಈ ಅನಾಹುತ ಸಂಭವಿಸಿದೆ. ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು,” ಎಂದು ಒತ್ತಾಯಿಸಿದ್ದಾರೆ.

ಈ ಘಟನೆ ಜಿಲ್ಲೆಯ ಪೊಲೀಸ್ ವ್ಯವಸ್ಥೆಯ ಗಂಭೀರತೆಗೆ ದೊಡ್ಡ ಪ್ರಶ್ನೆ ಚುಚ್ಚಿದ್ದು, ಅಜ್ಜಯ್ಯನ ಆತ್ಮಹತ್ಯೆ ಹಿಂದೆ ನ್ಯಾಯ ಹಕ್ಕು ಬಲವಾದ ನಿರ್ಲಕ್ಷ್ಯವಿದ್ದರೆ, ಇದು ಮಾನವೀಯತೆಯ ವಿರುದ್ಧದ ದುರ್ಘಟನೆ ಎನ್ನುವುದು ಸ್ಪಷ್ಟವಾಗಿದೆ.

nazeer ahamad

Recent Posts

ಮೊರಾರ್ಜಿ ವಸತಿ ಶಾಲೆಯ ಬಾಲಕಿ ಗರ್ಭಿಣಿ! ವರ್ಷಪೂರ್ತಿ ಅತ್ಯಾಚಾರ: ಕಾಮುಕನ ವಿರುದ್ಧ ಪೋಕ್ಸೋ ಕೇಸ್

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದ್ದು, ಮೊರಾರ್ಜಿ ವಸತಿ ಶಾಲೆಯಲ್ಲಿ…

3 hours ago

ಮನೆ ಮಾಲೀಕರಿಗೇ ಶಾಕ್ ಕೊಟ್ಟ ಬಾಡಿಗೆದಾರರು! ಮನೆ ಖಾಲಿ ಇದ್ದ ವೇಳೆ 45 ಗ್ರಾಂ ಚಿನ್ನ ದೋಚಿದ ದಂಪತಿ ಅರೆಸ್ಟ್

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೈಲುಕೊಪ್ಪ ಪೊಲೀಸರು ಭೇದಿಸಿದ್ದು,…

3 hours ago

ಅಸ್ಸಾಂಗೆ ಮಾಹಿತಿ ನೀಡದೆ ತೆರಳಿದ ಪ್ರಕರಣ: ಹುಳಿಯಾರು ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ. ವಂಚನೆ…

13 hours ago

ರಾಜಾಜಿನಗರದಲ್ಲಿ ಭೀಕರ ಅವಘಡ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರದ ಕೊಂಬೆ, ಸವಾರ ಕೋಮಾದಲ್ಲಿ

ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ನಿರ್ವಹಣೆಯ ಕೊರತೆಯಿಂದ ಮತ್ತೊಂದು ಗಂಭೀರ ಅವಘಡ ಸಂಭವಿಸಿದೆ. ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ…

13 hours ago

ವೈರಲ್ ವಿಡಿಯೋ ಕುರಿತು ಸ್ಪಷ್ಟನೆ: ಮಗುವಿಗೆ ಹೊಡೆದ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಅಲ್ಲ, ಮಗುವಿನ ತಾಯಿಯೇ ಎಂಬ ಮಾಹಿತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಮಗುವಿಗೆ ಮಹಿಳೆಯೊಬ್ಬರು ಕಾಲಿನಿಂದ ಒದ್ದಿರುವ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋವನ್ನು…

14 hours ago

ವೃದ್ಧ ದೂರುದಾರನ ಎದುರು ಮೇಜಿನ ಮೇಲೆ ಕಾಲು: ಮಹಿಳಾ ಕಾನ್‌ಸ್ಟೇಬಲ್ ಅಮಾನತು, ವೈರಲ್ ಫೋಟೋಗೆ ಇಲಾಖೆ ಕಂಗಾಲು

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾಡ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೃದ್ಧ ದೂರುದಾರನ…

14 hours ago