Latest

ಕೋವಿಡ್​ ನಿಂದಾಗಿ ಮನುಷ್ಯರಲ್ಲಿ ವಯಸ್ಸಾಗುವಿಕೆ ವೇಗ ಹೆಚ್ಚಾಗಿದೆ : ಅಧ್ಯಯನ

ಎರಡೂವರೆ ವರ್ಷಗಳ ಕೋವಿಡ್​ 19 ಕುರಿತಾದ ಸಂಶೋಧನೆಗಳ ಪ್ರಕಾರ, ವಿಜ್ಞಾನಿಗಳು ಕೊರೊನಾ ವೈರಸ್​ ದೇಹದಲ್ಲಿನ ಅನೇಕ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತೆ ಎಂಬ ವಿಚಾರವನ್ನು ದೃಢೀಕರಿಸಿದ್ದಾರೆ. ಸೇಂಟ್​ ಲೂಯಿಸ್​ನಲ್ಲಿರುವ ವಾಷಿಂಗ್ಟನ್​ ವಿಶ್ವ ವಿದ್ಯಾಲಯದ ಕ್ಲಿನಿಕಲ್​ ಎಪಿಡೆಮಿಯಾಲಜಿ ಸೆಂಟರ್​ನ ನಿರ್ದೇಶಕ ಡಾ. ಜಿಯಾದ್​ ಅಲ್​ – ಅಲಿ ನೀಡಿರುವ ಮಾಹಿತಿಯ ಪ್ರಕಾರ ಕೋವಿಡ್​ 19 ಸೋಂಕಿಗೆ ಒಳಗಾದ ವ್ಯಕ್ತಿಯು ಬಹು ಬೇಗನೇ ವೃದ್ಧಾಪ್ಯವನ್ನು ಸಮೀಪಿಸುತ್ತಾನೆ ಎಂದು ತಿಳಿದು ಬಂದಿದೆ.
ವಿಜ್ಞಾನಿಗಳ ಅಧ್ಯಯನದ ಪ್ರಕಾರ ಮುಖ್ಯ ಸಂಶೋಧಕ, ಡಾ ಅಲ್​-ಅಲಿ ಯುನೈಟೆಡ್​ ಸ್ಟೇಟ್​ ಆಫ್​ ಅಮೆರಿಕಾದ್ಯಂತ ಲಕ್ಷಾಂತರ ಜನರನ್ನು ಸಮೀಕ್ಷೆ ಮಾಡಿದರು. ಸೋಂಕಿತ ರೋಗಿಗಳ ಮೂತ್ರಪಿಂಡಗಳು, ಹೃದಯಗಳು ಹಾಗೂ ಮೆದುಳುಗಳ ಮೇಲೆ ವೈರಸ್​​ನ ಪರಿಣಾಮವನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ನಾವು ಅಧ್ಯಯನದ ಸಂದರ್ಭದಲ್ಲಿ ಗಮನಿಸಿದ ವಿಚಾರ ಏನೆಂದರೆ ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯು ಮುಂದಿನ ದಿನಗಳಲ್ಲಿ ಮೂತ್ರಪಿಂಡ ಸಂಬಂಧಿ ಕಾಯಿಲೆಯನ್ನು ಅನುಭವಿಸುತ್ತಿದ್ದಾರೆ. ಇದು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ ಎಂದು ಅಲ್​ ಅಲಿ ಹೇಳಿದ್ದಾರೆ .ಡಾ.ಜಿಯಾದ್​ ಅಲ್​ ಅಲಿ ಪ್ರಸ್ತುತ ಯುಸಿಎಸ್​ಎಫ್​ನಲ್ಲಿ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕಲ್​ ಪೆಲುಸೊರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ಟಿಪ್ಪರ್ ಡಿಕ್ಕಿ, ನಂತರ ಗುಂಡಿನ ದಾಳಿ: ವಿಜಯಪುರದಲ್ಲಿ ಸಿನಿಮಾ ಶೈಲಿಯ ಹತ್ಯೆ ಪ್ರಕರಣ

ವಿಜಯಪುರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜು ಬಾಪು ಖರಿ (48) ಅವರನ್ನು…

6 hours ago

ವಿದೇಶಿ ಮಹಿಳೆ ಮೇಲೆ ದೌರ್ಜನ್ಯ ಆರೋಪ: ಕೊಡಗಿನಲ್ಲಿ ಹೋಂಸ್ಟೇ ಪರವಾನಗಿ ರದ್ದು

ಅಮೆರಿಕದ ಪ್ರಜೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದ್ದು, ಕುಟ್ಟಾ ಗ್ರಾಮದಲ್ಲಿರುವ…

6 hours ago

WFH ಕೇಳಿದ ಮಹಿಳೆಗೆ HR ಶಾಕ್: ‘ಸಿಇಒ ಮನೋಭಾವ ಬೇಕು’ ಹೇಳಿ ಕರೆ ಕಟ್!

ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಕೆಲಸದ ಸಮಯ, ದಿನಗಳು ಮತ್ತು ಸೌಲಭ್ಯಗಳ ಬಗ್ಗೆ ಪ್ರಶ್ನಿಸುವುದು ಸಾಮಾನ್ಯ. ಆದರೆ ಇಂತಹ ಸರಳ ಪ್ರಶ್ನೆಯೇ…

6 hours ago

ನಕಲಿ ದಾಖಲೆಗಳಿಂದ 9 ಎಕರೆ ಸರ್ಕಾರಿ ಜಮೀನು ಹಗರಣ: ನಿವೃತ್ತ ತಹಶೀಲ್ದಾರ್ ಸೇರಿ ನಾಲ್ವರ ವಿರುದ್ಧ ಪ್ರಕರಣ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಭಾರೀ ಭೂ ಹಗರಣೊಂದು ಬೆಳಕಿಗೆ ಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 9 ಎಕರೆ…

6 hours ago

₹300 ಲಂಚಕ್ಕೆ ‘ಪರೀಕ್ಷೆ ಮಾರಾಟ’: ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ, ಶಿಕ್ಷಣ ವ್ಯವಸ್ಥೆಗೆ ಕಳಂಕ

ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ಸರ್ವೋದಯ ಕಾಲೇಜಿನಲ್ಲಿ ನಡೆದ ಪರೀಕ್ಷಾ ಅಕ್ರಮವು ಶಿಕ್ಷಣ ವ್ಯವಸ್ಥೆಯ ನೈತಿಕತೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ. ಕವಿಕುಲಗುರು ಕಾಳಿದಾಸ…

6 hours ago

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಗನ ಹತ್ಯೆ: 60 ವರ್ಷದ ತಾಯಿ ಬಂಧನ

ಮೈಸೂರು ನಗರದ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ…

22 hours ago