Latest

40 ಕೋಟಿ ರೂ, ವಂಚನೆ ಮಾಡಿಕೊಂಡು ದಂಪತಿ ಪರಾರಿ : ಬೆಂಗಳೂರು ನಿವಾಸಿಗಳು ಶಾಕ್!

ಬೆಂಗಳೂರು, ಜುಲೈ 6 – ಚೀಟಿ ಹಣದ ಆಸೆಗೆ ಬಿದ್ದು ಕೋಟ್ಯಾಂತರ ರೂಪಾಯಿಗಳನ್ನು ಹೋದವರು ಶತಾರು. ಇದೀಗ, ಬೆಂಗಳೂರಿನ ಜರಗನಹಳ್ಳಿಯಲ್ಲಿ ದೊಡ್ಡ ಪ್ರಮಾಣದ ಚೀಟಿ ವಂಚನೆಯ ಪ್ರಕರಣ ವರದಿಯಾಗಿದೆ. ಸುಮಾರು 40 ಕೋಟಿ ರೂ. ವಂಚನೆ ಮಾಡಿದ ದಂಪತಿ ಈಗ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಆರೋಪಿಗಳು ಸುಧಾ ಮತ್ತು ಸಿದ್ದಾಚಾರಿ ಎಂಬ ದಂಪತಿ. ಇವರು ಕಳೆದ 20 ವರ್ಷಗಳಿಂದ ಜರಗನಹಳ್ಳಿಯಲ್ಲಿ ಚೀಟಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇದರಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು, ಕೆಲವರು 5 ಲಕ್ಷದಿಂದ 10 ಲಕ್ಷ ರೂಪಾಯಿವರೆಗೂ ಹಣ ಹೂಡಿಕೆ ಮಾಡಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಸುಧಾ ದಂಪತಿ ಚೀಟಿ ಹಣ ವಾಪಸ್ ಕೊಡದೇ ವಿಳಂಬ ಮಾಡುತ್ತಿದ್ದರು.

ಪರಾರಿ ಆಗಿರುವ ಘಟನೆ ಜೂನ್ 3ರಂದು ಮಧ್ಯರಾತ್ರಿ ನಡೆದಿದೆ. ತಮ್ಮ ಇಬ್ಬರು ಮಕ್ಕಳೊಂದಿಗೆ ದಂಪತಿ ಮನೆಯನ್ನೇ ಬಿಟ್ಟು ಓಡಿದ್ದಾರೆ. ಈ ಹಿಂದೆ ಬ್ಯಾಂಕ್‌ನಲ್ಲಿ ಇರುವ ಚಿನ್ನವಸ್ತುಗಳನ್ನು ತೆಗೆದು, ಮೊಬೈಲ್‌ಗಳನ್ನು ಮನೆಯಲ್ಲೇ ಬಿಟ್ಟು, ಬೇರೆ ವಸ್ತುಗಳೊಂದಿಗೆ ನಾಪತ್ತೆಯಾಗಿದ್ದಾರೆ.

ಅವರ ಮನೆಯವರು ಮರುದಿನವೇ ಪುಟ್ಟೇನಹಳ್ಳಿ ಠಾಣೆಗೆ ಕಾಣೆಯಾದ ದೂರು ನೀಡಿದ್ದು, ಬಳಿಕ ಹಣ ಕಳೆದುಕೊಂಡ ಸಾರ್ವಜನಿಕರೂ ಒಟ್ಟುಗೂಡಿ FIR ದಾಖಲಿಸಿದ್ದಾರೆ. ಇದೀಗ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಸುಧಾ ಮತ್ತು ಸಿದ್ದಾಚಾರಿ ಅವರು ಸುಳಿವು ಸಹ ಬಿಟ್ಟಿಲ್ಲ. ಮೊಬೈಲ್‌ ಬಳಸುವುದು ಇಲ್ಲ, ಸಂಬಂಧಿಕರಿಗೂ ಸಂಪರ್ಕವಿಲ್ಲ – ಇದರಿಂದಾಗಿ ಅವರು ಭೂಗತ ಜೀವನದತ್ತ ತಿರುಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವಂಚನೆಗೆ ಒಳಪಟ್ಟ ಸಾರ್ವಜನಿಕರು ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಿ, ನ್ಯಾಯ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.

ಈ ಪ್ರಕರಣವು ಮತ್ತೆ ಒಮ್ಮೆ ಖಾಸಗಿ ಚೀಟಿ ವ್ಯವಹಾರಗಳ ಅಪಾಯವನ್ನು ಸಾಬೀತು ಪಡಿಸಿದೆ. ಸಾರ್ವಜನಿಕರು ಈ ತರಹದ ಹೂಡಿಕೆಗಳಲ್ಲಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯನ್ನು ನೆನಪಿಸಿದೆ.

nazeer ahamad

Recent Posts

ಇಳಕಲ್: ಸಹೋದ್ಯೋಗಿಗೆ ಚಪ್ಪಲಿಯಿಂದ ಹೊಡೆದ ಶಿಕ್ಷಕಿ ಅಮಾನತು

ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದ ಅಲಂಪೂರಪೇಟೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕಿ ಅಮೀನಾ ಕೊಳೂರ ಅವರನ್ನು ಕರ್ತವ್ಯ…

4 hours ago

ಚಿಕಿತ್ಸೆ ವೇಳೆ ಎಡವಟ್ಟು: ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ. ಆಸ್ಪತ್ರೆ ಸಿಬ್ಬಂದಿಯ…

4 hours ago

ಧರ್ಮಸ್ಥಳದಲ್ಲಿ ಶವ ಪತ್ತೆ ಶೋಧನಾ ಕಾರ್ಯಾಚರಣೆ ವಿಳಂಬ: ಅಸ್ತಿಪಂಜರ ಪತ್ತೆಯಾಗದ ಹಿನ್ನೆಲೆ ಮುಂದೂಡಿದ ಎಸ್ಐಟಿ

ಧರ್ಮಸ್ಥಳ, ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ನೀಡಿದ ಅಹವಾಲಿನ ನಂತರ, "ನಾನು ಹಲವಾರು ಮೃತದೇಹಗಳನ್ನು ಹೂತುಹಾಕಿದ್ದೇನೆ" ಎಂಬ…

4 hours ago

10 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಕುಡುಕ ತಂದೆಯ ಪೈಶಾಚಿಕ ಕೃತ್ಯ

ನಾರಾಯಣಪೇಟೆ, ಜುಲೈ 29 – “ಅಪ್ಪಾ ಬೇಡಪ್ಪಾ, ನನ್ನ ಹತ್ತಿರ ಬರಬೇಡಿ” ಎಂದು ಕಿರುಚಿದರೂ, ತಂದೆಯ ಕರುಣೆ ಚಾಚಲಿಲ್ಲ. ಮದ್ಯದ…

5 hours ago

ಚಿನ್ನದ ನಾಣ್ಯ ದಂಧೆ: ಕಡಿಮೆ ಬೆಲೆಯಲ್ಲಿ ಕೊಳ್ಳಲು ಬಂದ ವ್ಯಕ್ತಿಗೆ ₹5 ಲಕ್ಷದ ನಷ್ಟ

ದಾವಣಗೆರೆ: ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಂದ ₹5 ಲಕ್ಷ ವಂಚಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹದಡಿ…

5 hours ago

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ಇಂದು ಮೊದಲ ತೀರ್ಪು ಪ್ರಕಟಣೆಗೆ ಸಜ್ಜು

ಬೆಂಗಳೂರು, ಜುಲೈ 30: ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕಿ ಕುಟುಂಬದ ಸದಸ್ಯನಾದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ…

6 hours ago