Latest

ಖೋಟಾ ನೋಟು ದಂಧೆ ಬಯಲಿಗೆ:₹3.75 ಲಕ್ಷ ನಕಲಿ ನೋಟು ವಶ

ದಾವಣಗೆರೆ, ಜು.25 – ಖೋಟಾ ನೋಟು ಚಲಾವಣೆಯ ದೊಡ್ಡ ಜಾಲವೊಂದನ್ನು ದಾವಣಗೆರೆ ಜಿಲ್ಲೆ ಬಸವಾಪಟ್ಟಣ ಪೊಲೀಸರು ಪತ್ತೆಹಚ್ಚಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ₹3.75 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರು ಹೂವಿನಹಡಗಲಿ ತಾಲೂಕಿನ ನಡುವಿನ ತಾಂಡದ ಸಂತೋಷಕುಮಾರ (32), ಕೊಟ್ಟೂರು ತಾಲ್ಲೂಕಿನ ಬೇವೂರು ಗ್ರಾಮದ ವಿರೇಶ (37), ದಾವಣಗೆರೆ ತಾಲೂಕಿನ ಕುಕ್ಕವಾಡದ ಕುಬೇರಪ್ಪ (60) ಮತ್ತು ಅದೇ ಬೇವೂರಿನ ಹನುಮಂತಪ್ಪ (75) ಎನ್ನಲಾಗಿದೆ.

ಚಿರಡೋಣಿಯಲ್ಲಿ ಖಚಿತ ಮಾಹಿತಿ, ದಾಳಿಗೆ ಚಾಲನೆ

ಚಿರಡೋಣಿ ಗ್ರಾಮದ ದೊಡ್ಡಘಟ್ಟ ರಸ್ತೆಯ ಶಾಂತಿವನದ ಬಳಿಯಲ್ಲಿ ಖೋಟಾ ನೋಟು ಚಲಾವಣೆ ನಡೆಯುತ್ತಿದೆ ಎಂಬ ಗುಪ್ತ ಮಾಹಿತಿ ಹಿನ್ನೆಲೆಯಲ್ಲಿ, ಚನ್ನಗಿರಿ ಉಪವಿಭಾಗದ ಎಎಸ್‌ಪಿ ಮಾರ್ಗದರ್ಶನದಲ್ಲಿ ಹಾಗೂ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ, ಬಸವಾಪಟ್ಟಣ ಠಾಣೆ ಪಿಎಸ್‌ಐ ಇಮ್ತಿಯಾಜ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಸಂತೋಷಕುಮಾರ ಹಾಗೂ ರಾಮಪ್ಪ ಎಂಬ ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಅವರ ಬಳಿ ₹500 ಮುಖಬೆಲೆಯ ₹2 ಲಕ್ಷ ನಕಲಿ ನೋಟು ಪತ್ತೆಯಾಯಿತು. ಜೊತೆಗೆ ಬಳಸಿದ ಬೈಕ್‌ ಸಹ ವಶಪಡಿಸಿಕೊಳ್ಳಲಾಯಿತು.

ಹಳೆ ಆರೋಪಿ ಕಣ್ಗೂಡಿಸಿದ ಕುಬೇರಪ್ಪ ಸಿಕ್ಕಿಬಿದ್ದಿದ್ದು ಹೇಗೆ?

ಆರೋಪಿಗಳ ವಿಚಾರಣೆ ವೇಳೆ ಈ ದಂಧೆಗೆ ಹಿಂದೆಯೂ ಸೇರ್ಪಡೆ ಹೊಂದಿದ್ದ ಕುಬೇರಪ್ಪ ಎಂಬಾತ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ ಎಂಬುದು ಬೆಳಕಿಗೆ ಬಂತು. ತಕ್ಷಣವೇ ಪೊಲೀಸರು ಆತನ ಅಡಗಿರುವ ಸ್ಥಳದ ಮೇಲೆ ದಾಳಿ ನಡೆಸಿದಾಗ, ಆತ ಹಾಗೂ ಅವನ ಸಹಚರ ಹನುಮಂತಪ್ಪನಿಂದ ₹500 ಮುಖಬೆಲೆಯ ₹28,000 ಹಾಗೂ ₹200 ಮುಖಬೆಲೆಯ ₹47,400 ನಕಲಿ ನೋಟು ಪತ್ತೆಯಾಯಿತು.

ಮತ್ತೆ ನಡೆದ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಆರೋಪಿಯ ಬಳಿ ₹500 ಮತ್ತು ₹200 ಮುಖಬೆಲೆಯ ₹1 ಲಕ್ಷ ನಕಲಿ ನೋಟು ಪತ್ತೆಯಾಗಿ, ಒಟ್ಟು ₹3,75,400 ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಖೋಟಾ ನೋಟುಗಳ ದಂಧೆ ತೀವ್ರಗೊಂಡಿರುವ ಹಿನ್ನೆಲೆ, ಪೊಲೀಸರು ದಾವಣಗೆರೆಯಲ್ಲಿಯೂ ಇದೇ ಮಾದರಿಯ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದ ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರು ಮೈಸೂರು, ತುಮಕೂರು ಸೇರಿ ಹಲವು ಕಡೆ ಖೋಟಾ ನೋಟು ಚಲಾಯಿಸಿದ್ದರ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಈ ಸಂಬಂಧ ಇನ್ನಷ್ಟು ಮಾಹಿತಿಗಾಗಿ ವಿಸ್ತೃತ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

nazeer ahamad

Recent Posts

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

4 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

11 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

11 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

1 day ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

2 days ago