Latest

ಪತ್ನಿಯನ್ನು ಹತ್ಯೆ ಮಾಡಲು ಹಾವು ಬಳಸಿದ ಕಾನ್ಸ್ಟೆಬಲ್!

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಂಬಲಾಗದ ರೀತಿಯ ಕ್ರೌರ್ಯದ ಘಟನೆ ಬೆಳಕಿಗೆ ಬಂದಿದೆ. ಕಾನ್ಸ್ಟೆಬಲ್ ಅನುಜ್ ತನ್ನ ಪತ್ನಿ ಅಂಶಿಕಾಳನ್ನು ಹತ್ಯೆ ಮಾಡಲು ನಿಗೂಢ ಮಾದರಿಯ ಯತ್ನ ನಡೆಸಿದ, ಆದರೆ ಆಕೆ ಅದೃಷ್ಟವಶಾತ್ ಬದುಕುಳಿದ ಘಟನೆ ಆತಂಕ ಸೃಷ್ಟಿಸಿದೆ.

ಅತ್ಯಾಚಾರದಿಂದ ಪ್ರಾರಂಭವಾದ ವಿವಾಹ

ನಾಲ್ಕು ವರ್ಷಗಳ ಹಿಂದೆ ಅನುಜ್, ಅಂಶಿಕಾಳ ಮೇಲೆ ಅತ್ಯಾಚಾರವೆಸಗಿ, ಅನಿವಾರ್ಯವಾಗಿ ಮದುವೆಯಾಗಿದ್ದ. ಇದು ಒತ್ತಡದ ಸಂಬಂಧವಾಗಿದ್ದು, ಪ್ರಾರಂಭದಿಂದಲೂ ಅಂಶಿಕಾಳಿಗೆ ತೊಂದರೆ ನೀಡಲು ಕಾರಣವಾಯಿತು. ಕಾನೂನಿನಿಂದ ತಪ್ಪಿಸಿಕೊಳ್ಳಲು, ಅನುಜ್ ಒಂದು ದೇವಾಲಯಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಆರಂಭದಲ್ಲಿ ತನ್ನ ಸಹೋದರಿಯ ಮನೆಯಲ್ಲಿ ಆಕೆಯನ್ನು ಇರಿಸಿದ್ದನು. ನಂತರ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರುವಂತೆ ಆಗ, ಪತ್ನಿಯನ್ನಾಗಿ ಒಪ್ಪಿಕೊಳ್ಳಲು ನಿರಾಕರಿಸಿದ್ದ.

ಅಂಶಿಕಾಳ ದೂರು ನೀಡಿದ ನಂತರ, ಅನುಜ್ ಮನೆಯಿಂದ ಕರೆದುಕೊಂಡು ಹೋಗಿದ್ದರೂ, ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ. ಹೀಗಿರುವಾಗಲೇ, ಆಕೆಯನ್ನು ಮುಗಿಸಲು ಆತನ ಮನಸ್ಸು ಕಲಕು ತೊಡಗಿದ.

ಹತ್ಯೆಗೆ ಹಾವು ಬಳಕೆ – ಪತ್ತೆದಾರನ ಯತ್ನ ವಿಫಲ

ಫೆಬ್ರವರಿ 19 ರಂದು, ಅನುಜ್ ಇಬ್ಬರು ಹಾವಾಡಿಗರನ್ನು ನಿಯೋಜಿಸಿ, ಹಾವು ಕಚ್ಚಿಸುವ ಮೂಲಕ ಪತ್ನಿಯನ್ನು ಹತ್ಯೆ ಮಾಡುವ ಪ್ಲಾನ್ ಹಾಕಿಕೊಂಡ. ಹಾವು ಆಕೆಯನ್ನು ಕಚ್ಚಿದರೂ, ಆಕೆ ತಕ್ಷಣವೇ ಮೃತಪಟ್ಟಿಲ್ಲ. ಪ್ರಜ್ಞೆ ತಪ್ಪಿದ್ದಳೆಂದು ಭಾವಿಸಿ ಅನುಜ್ ಅಲ್ಲಿಂದ ಕಿಂಚಿತ್ ಸಹ ಕಾಳಜಿ ತೋರದೆ ಹೊರಟಿದ್ದ.

ಆದರೆ ಕೆಲವು ಗಂಟೆಗಳ ಬಳಿಕ ಅಂಶಿಕಾಗೆ ಪ್ರಜ್ಞೆ ಮರಳಿ, ಆತಂಕದಿಂದ ತಕ್ಷಣವೇ ತನ್ನ ಹೆತ್ತವರ ಮನೆಗೆ ಓಡಿಹೋದಳು. ಆದರೆ ಪೊಲೀಸರು ಮೊದಲು ದೂರು ದಾಖಲಿಸಲು ನಿರಾಕರಿಸಿದ್ದರು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

ಕಾನೂನಿನ ಮುಂದಾಳುವರಿ

ಆಸ್ಪತ್ರೆಗೆ ದಾಖಲಾಗಿದ್ದ ಅಂಶಿಕಾ, ಬಿಡುಗಡೆಯ ನಂತರ ತನ್ನ ತಂದೆಯೊಂದಿಗೆ ಕಾನ್ಪುರದ ಉಪ ಪೊಲೀಸ್ ಆಯುಕ್ತರನ್ನು (ಡಿಸಿಪಿ) ಸಂಪರ್ಕಿಸಿದರು. ಘಟನೆಯ ಗಂಭೀರತೆಯನ್ನು ಅರಿತು, ಡಿಸಿಪಿ ಕೂಡಲೇ ಎಫ್‌ಐಆರ್ ದಾಖಲಿಸಲು ಆದೇಶಿಸಿದರು.

ಈ ಘಟನೆ ಮತ್ತೊಮ್ಮೆ ಮಹಿಳೆಯರ ಸುರಕ್ಷತೆಯ ಕುರಿತ ಭೀತಿಯನ್ನು ಎತ್ತಿಹಿಡಿದಿದೆ. ಪೊಲೀಸ್ ಇಲಾಖೆಯ ಒಬ್ಬ ಸದಸ್ಯನೇ ಈ ರೀತಿಯ ಪ್ಲಾನ್ ಹೂಡಿರುವುದು, ಕಾನೂನು ಮತ್ತು ನ್ಯಾಯವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಪ್ರಶ್ನೆಗೊಳಿಸುತ್ತಿದೆ. ಈಗ, ಪ್ರಕರಣದ ಮುಂದಿನ ಹಂತದಲ್ಲಿ ಅನುಜ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

nazeer ahamad

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

10 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

15 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

15 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

15 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

15 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

20 hours ago