Latest

ಸಮಸ್ಯೆಗಳ ಆಗರವಾದ ಸಿ.ಎಂ ಸ್ವಕ್ಷೇತ್ರ ಶಿಗ್ಗಾವಿ..!

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಪುರಸಭೆಯ ವಾರ್ಡ್ ನಂ 21 ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ ಹಾಗಾಗಿ ಅಲ್ಲಿಯ ನಿವಾಸಿಗಳು ಸಮಸ್ಯೆಗಳ ಪರಿಹಾರಕ್ಕಾಗಿ ಪುರಸಭೆಯ ಅಧಿಕಾರಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ.
ಇದು ಬೇರೆ ಯಾವ ಕ್ಷೇತ್ರವು ಅಲ್ಲ, ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸ್ವಕ್ಷೇತ್ರ, ಈ ಕ್ಷೇತ್ರದ ಶಿಗ್ಗಾವಿಯ ಜಯನಗರದಲ್ಲಿ ಒಂದೆರಡು ಸಮಸ್ಯೆಗಳಿಲ್ಲ ಕಿತ್ತು ಹೋದ ರಸ್ತೆಗಳು, ಅಸ್ತವ್ಯಸ್ತಗೊಂಡಿರುವ ಚರಂಡಿ ವ್ಯವಸ್ಥೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲಗಳ ರಾಶಿಗಳು, ಕೊಳಚೆ ನೀರು ಹೀಗೆ ಪಟ್ಟಿಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಸಮಸ್ಯೆಗಳು.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಇತ್ತ ಕಡೆ ತಲೆ ಹಾಕಿಲ್ಲ, ಹಾಗಂತ ಸ್ಥಳೀಯ ನಿವಾಸಿಗಳು ಸುಮ್ಮನೆ ಕುಳಿತಿಲ್ಲ ಹಲವಾರು ಬಾರಿ ಮನವಿ ಪತ್ರ ಕೊಡುತ್ತಲೇ ಇದ್ದಾರೆ ಹಾಗಿದ್ದರೂ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ.
ಸಾರ್ವಜನಿಕರ ತೆರಿಗೆ ಹಣದಲ್ಲಿ ವೇತನ ಪಡೆದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ನೀವೆಂತಹ ಅಧಿಕಾರಿಗಳು ಸ್ವಾಮಿ?
ಇನ್ನೂ, ಜನಪ್ರತಿನಿಧಿಗಳ ಬಗ್ಗೆ ಹೇಳುವುದಾದರೆ ಚುನಾವಣೆ ಹತ್ತಿರ ಬಂದಾಗ ಮನೆ ಮನೆಗೆ ತೆರಳಿ ಕೈಕಾಲು ಹಿಡಿದು ಮತ ಪಡೆದು ಆಯ್ಕೆಯಾಗಿ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಕಚೇರಿಗೆ ಹೋಗಿ ಕುರ್ಚಿ ಮೇಲೆ ಕುಳಿತು ದರ್ಪ ತೋರಿ ಬರುತ್ತಿದ್ದಾರೆ ಅನಿಸುತ್ತಿದೆ ಯಾಕಂದ್ರೆ ಇಷ್ಟೊಂದು ಸಮಸ್ಯೆಗಳ ಆಗರವೇ ಇದ್ರೂ ತಮ್ಮನ್ನು ಆಯ್ಕೆ ಮಾಡಿದ ಮತದಾರರು ಏನೆಂದಾರು ಅನ್ನುವ ಕಿಂಚಿತ್ತು ಪರಿಜ್ಞಾನವು ಇಲ್ಲದಂತೆ ಸುಮ್ಮನಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-04 ರ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಈ ರಸ್ತೆಗೆ ಹೊಂದಿಕೊಂಡಿರುವ ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನಿಂತು ರಸ್ತೆಗಳು ಹಾಳಾಗುತ್ತಿವೆ ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಪ್ರತಿದಿನ ದೂಳಿನಲ್ಲಿಯೇ ವಾಸಿಸಬೇಕಾದ ಪ್ರಸಂಗ ಒದಗಿ ಬಂದಿದೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ.
ವರದಿ :ಮಂಜುನಾಥ ಹರಿಜನ

ಭ್ರಷ್ಟರ ಬೇಟೆ

Recent Posts

“ಮೋದಿ ಟೆರೆರಿಸ್ಟ್” ಹೇಳಿಕೆ ಸಿಡಿಲು: ಖರ್ಗೆ ಮಾತಿಗೆ ಬಿಜೆಪಿ ಕಿಡಿ, ರಾಜಕೀಯ ಕಾವೇರಿದ ತಮಿಳುನಾಡು ಚುನಾವಣೆ

ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ಚರ್ಚೆಗಳು ಜೋರಾಗಿದ್ದರೂ, ಈ ಬಾರಿ ಆ ರಾಜ್ಯಕ್ಕಿಂತ ಹೆಚ್ಚು ಸದ್ದು ಮಾಡುತ್ತಿರುವುದು ಕರ್ನಾಟಕದ…

10 hours ago

37ರ ಆಂಟಿ–22ರ ಯುವಕನೊಂದಿಗೆ ಪರಾರಿ: ಮಗನನ್ನು ಬಿಟ್ಟು ಓಡಿಹೋದ ತಾಯಿ, ಈಗ ಜೀವಭಯದಿಂದ ಪೊಲೀಸರ ಮೊರೆ..!

ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿಯಾಗುವುದಿಲ್ಲ ಎಂಬ ಮಾತು ಮತ್ತೊಮ್ಮೆ ಸತ್ಯವಾಗಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. 37 ವರ್ಷದ ಮಹಿಳೆ,…

10 hours ago

‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಿನಲ್ಲಿ ಪ್ರಿಯಕರನ ದಹನ! ಕಣ್ಣಿಗೆ ಬಟ್ಟೆ ಕಟ್ಟಿ, ಬೆಂಕಿ ಹಚ್ಚಿ ಮೊಬೈಲ್ ನಲ್ಲಿ ಚಿತ್ರೀಕರಣ.

ರಾಜ್ಯದಲ್ಲಿ ಪ್ರೀತಿ-ಪ್ರೇಮಗಳ ಹೆಸರಿನಲ್ಲಿ ನಡೆಯುತ್ತಿರುವ ಅವಾಂತರಗಳು ದಿನೇದಿನೇ ಆತಂಕ ಹುಟ್ಟಿಸುತ್ತಿವೆ. ನಂಬಿಕೆ ಕುಸಿದಾಗ ಸಂಬಂಧಗಳು ಹೇಗೆ ಕ್ರೌರ್ಯಕ್ಕೆ ತಿರುಗುತ್ತವೆ ಎಂಬುದಕ್ಕೆ…

10 hours ago

ಎಸ್‌ಎಸ್‌ಎಲ್‌ಸಿ ಹಿಂದಿಗೆ ಅಂಕ ಕಡ್ಡಾಯ: ಹೈಕೋರ್ಟ್‌ನಿಂದ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ ನೀಡಬೇಕು ಎಂದು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟ ಆದೇಶ ನೀಡಿದೆ.…

14 hours ago

DCREಯಲ್ಲೇ ದಲಿತ ಅಧಿಕಾರಿಗೆ ಕಿರುಕುಳ ಆರೋಪ: SP, DySP ವಿರುದ್ಧ ಇನ್ಸ್ಪೆಕ್ಟರ್ ದೂರು

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (DCRE)ದಲ್ಲಿಯೇ ದಲಿತ…

19 hours ago

ರೀಲ್ಸ್ ಹುಚ್ಚು ಜೀವ ಬಲಿ: ಸ್ಟಂಟ್ ವೇಳೆ ಬೈಕ್ ಟ್ರಕ್‌ಗೆ ಡಿಕ್ಕಿ, ಮೂವರು ಯುವಕರ ಸಾವು

ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಲು ಅಪಾಯಕಾರಿ ಸ್ಟಂಟ್‌ಗೆ ಮುಂದಾದ ಮೂವರು ಯುವಕರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.…

19 hours ago