ಲಕ್ನೋ: ದೇಶದ ಇತಿಹಾಸದಲ್ಲಿಯೇ ಅತಿಭಯಾನಕ ಮತ್ತು ವಿಕೃತ ಮನಸ್ಥಿತಿಯ ಸರಣಿ ಕೊಲೆಗಾರನೊಬ್ಬನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಈ ಪ್ರಕರಣ ಮತ್ತೊಂದು ನೈಜ ಜೀವಂತ ರಕ್ತಚಂಡ ಕಥೆಯಂತೆ ಓದುಗರನು ಅಲುಗಿಸಿದೆ.
ನರಭಕ್ಷಕ ಎಂಬ ಕರಾಳ ಹೆಸರು ಪಡೆದ ರಾಮ್ ನಿರಂಜನ್ ಅಲಿಯಾಸ್ ರಾಜಾ ಕೊಲಂದರ್ ಮತ್ತು ಆತನ ಸಹಚರ ವಾಚ್ ರಾಜ್ ಎಂಬವರಿಗೆ ಲಕ್ನೋ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಘೋಷಿಸಿದೆ.
ರಾಜಾ ಕೊಲಂದರ್ 14 ಜನರನ್ನು ನಿಷ್ಠುರವಾಗಿ ಕೊಂದು, ಅವರ ದೇಹ ಭಾಗಗಳನ್ನು ಕಡಿಯುತ್ತಿದ್ದ, ತಲೆಯನ್ನು ಕತ್ತರಿಸಿ ಅದರಿಂದ ಸೂಪ್ ತಯಾರಿಸಿ ಕುಡಿಯುತ್ತಿದ್ದನು ಎಂಬ ಮಾಹಿತಿ ನ್ಯಾಯಾಲಯದ ಮುಂದಿಟ್ಟಾಗ ಅದು ಭಯಾನಕ ಸತ್ಯವಾಗಿ ಹೊರಬಂದಿತು. ತನಗೆ ಮಾನವರ ತಲೆಯ ಸೂಪ್ ಕುಡಿದರೆ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಎಂಬ ವಿಕೃತ ನಂಬಿಕೆಯಲ್ಲಿ ಈತ ಈ ಕೃತ್ಯಗಳನ್ನು ಎಸಗುತ್ತಿದ್ದನೆಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದ್ದಾಗ ಕೂಡಾ, ರಾಜಾ ಕೊಲಂದರ್ ಯಾವುದೇ ಪಶ್ಚಾತಾಪವಿಲ್ಲದೆ, ನಿರ್ಲಕ್ಷ್ಯಭಾವದಿಂದ ಮಂದಹಾಸ ಬೀರುತ್ತಿದ್ದನೆಂಬುದು ಸಂತ್ರಸ್ತ ಕುಟುಂಬಗಳಿಗೆ ಇನ್ನಷ್ಟು ನೋವು ತಂದಿದೆ.
ಅತಿಕೃೂರ ಹಾಗೂ ಮಾನವೀಯತೆಯ ಎಲ್ಲ ಮಿತಿ ದಾಟಿದ ಈ ಕೊಲೆ ಪ್ರಕರಣದಲ್ಲಿ ರಾಜಾ ಕೊಲಂದರ್ಗಿಂತಲೂ ದೊಡ್ಡ ಪಾತ್ರ ವಾಚ್ ರಾಜ್ ಎಂಬಾತನದ್ದು ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಈತನ ಸಹಾಯದಿಂದಲೇ ರಾಜಾ ಹಲವು ಜನರನ್ನು ಅಪಹರಿಸಿ, ಕೊಂದು, ಅವರ ದೇಹವನ್ನು ಭಕ್ಷಿಸುತ್ತಿದ್ದ
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…