ಭಟ್ಕಳ, ಜುಲೈ 30 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸಮೀಪದ ಸಮುದ್ರದಲ್ಲಿ ಭೀಕರ ದುರಂತ ಸಂಭವಿಸಿದ್ದು, ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸಮುದ್ರದ ಅಳಿವೆ ಅಂಚಿನಲ್ಲಿ ಮುಳುಗಿ, ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.
ಈ ದುರಂತದಲ್ಲಿ ಇದ್ದ ಆರು ಮಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ತಕ್ಷಣವೇ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದ ನಾಲ್ವರನ್ನು ಹುಡುಕಲು ಕರಾವಳಿ ಕಾವಲು ಪಡೆ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಅಲೆಗಳ ಅಬ್ಬರಕ್ಕೆ ದೋಣಿ ಬಲಿಯಾದಂತಾಗಿದೆ
ಮೆಲುಕು ಹಾಕಿದ ವರದಿಯಂತೆ, ಭಟ್ಕಳದ ಮೀನುಗಾರರೊಬ್ಬರ ದೋಣಿ ಬೆಳಿಗ್ಗೆ ಸಮುದ್ರದೊಳಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ತೀವ್ರ ಅಲೆಗಳ ಅಬ್ಬರಕ್ಕೆ ದೋಣಿ ಸಮತೋಲ ತಪ್ಪಿಸಿ ಮುಳುಗಿದೆ. ಪರಿಣಾಮ, ನಾಲ್ವರು ಸಮುದ್ರದೊಳಗೆ ಕೊಚ್ಚಿ ಹೋಗಿದ್ದಾರೆ.
ರಕ್ಷಿಸಲ್ಪಟ್ಟವರು:
ಮನೋಹರ ಈರಯ್ಯ ಮೊಗೇರ (31), ಭಟ್ಕಳದ ಬೆಳೆ ಬಂದರ್ ನಿವಾಸಿ
ಜಾಲಿ ರಾಮ ಮಾಸ್ತಿ ಖಾರ್ವಿ (43), ಜಾಲಿ ಕೋಡಿಯ ನಿವಾಸಿ
ನಾಪತ್ತೆಯಾದವರು:
ರಾಮಕೃಷ್ಣ ಮಂಜು ಮೊಗೇರ (40), ಜಾಲಿ ಕೊಡಿ
ಸತೀಶ್ ತಿಮ್ಮಪ್ಪ ಮೊಗೇರ (26), ಅಳ್ವೆಕೋಡಿa
ಗಣೇಶ್ ಮಂಜುನಾಥ ಮೊಗೇರ (27), ಅಳ್ವೇಕೋಡಿ ಮುಗ್ರಿ ಮನೆ
ನಿಶ್ಚಿತ ಮೊಗೇರ (30), ಅಳ್ವೇಕೋಡಿಯ ಕನ್ನಡ ಶಾಲೆಯ ಬಳಿ ನಿವಾಸಿ
ಘಟನಾ ಸ್ಥಳದಲ್ಲಿ ಭಾರಿ ಜನ ಸೇರಿಕೆ
ದೋಣಿ ಮುಳುಗಿದ ಸುದ್ದಿ ಸ್ಥಳೀಯವಾಗಿ ಹರಡುತ್ತಿದ್ದಂತೆ, ಭಟ್ಕಳದ ದಡಪ್ರದೇಶದಲ್ಲಿ ಸಾವಿರಾರು ಜನರು ಸೇರಿ ಆತಂಕ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾದ ಮೀನುಗಾರರ ಬಂಧುಗಳು ಹಾಗೂ ಸಹಮೀರರು ಆಘಾತದಲ್ಲಿದ್ದಾರೆ.
ಇದೇ ವೇಳೆ ಪಕ್ಕದ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಇಂತಹದ್ದೇ ದುರ್ಘಟನೆ ಇನ್ನೂ ಮಾಸಿಲ್ಲದೇ ಇತ್ತ ಭಟ್ಕಳದಲ್ಲಿ ಸಂಭವಿಸಿದ ಈ ದುರಂತ ಸ್ಥಳೀಯ ಸಮುದಾಯದಲ್ಲಿ ಭಾರೀ ದುಃಖ ಮತ್ತು ಭೀತಿಯನ್ನು ಉಂಟುಮಾಡಿದೆ.
ಶೋಧ ಕಾರ್ಯಾಚರಣೆ ಭಾರೀ ಗತಿ ಪಡೆದು ಮುಂದುವರಿದಿದೆ.
***
“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392
ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…