Categories: Latest

ಗರುಡಾ ಗ್ಯಾಂಗ್’ನ ಕ್ಯಾಪ್ಟನ್ ಸಹಿತ ಮೂವರನ್ನು ಅರೆಸ್ಟ್ ಮಾಡಿದ ಭಟ್ಕಳ ಪೊಲೀಸರು

ಭಟ್ಕಳ: ರಸ್ತೆಯಲ್ಲಿ ದರೋಡೆಮಾಡುವ ‘ಗರುಡಾ ಗ್ಯಾಂಗ್’ಗೆ ಭಟ್ಕಳ ಪೊಲೀಸರು ತೀವ್ರ ಪಾಠ ಕಲಿಸಿದ್ದಾರೆ. ಬೆಳಗಿನ ಜಾವ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಗ್ಯಾಂಗ್‌ನ ಕ್ಯಾಪ್ಟನ್ ಸೇರಿ ಮೂವರನ್ನು ಬಂಧಿಸಲಾಗಿದೆ, ಇನ್ನಿಬ್ಬರು ಪರಾರಿಯಾಗಿದ್ದಾರೆ.

ಮೇ 28ರ ನಸುಕಿನ 3 ಗಂಟೆ. ಭಟ್ಕಳದ ಸಾಗರ ರಸ್ತೆಯ ಬಿಲಾಲ್‌ಖಂಡ ಬಳಿ ಐವರು ಯುವಕರು ಮಂಕಿ ಟೋಪಿ ಹಾಕಿಕೊಂಡು ಕಾರಿನಲ್ಲಿ ಕಾವಲು ಹಿಡಿದಿದ್ದರು. ದರೋಡೆ ಸಂಚು ಸ್ಪಷ್ಟ. ಅವರ ಬಳಿ ಚಾಕು, ಕಾರಪುಡಿ, ಬೆಲ್ಟ್, ಮೊಬೈಲ್, ಹಣ ಎಲ್ಲವೂ ಸಿದ್ದ.

ಸಂದೇಹಕ್ಕೆ ಸ್ಥಳಕ್ಕೆ ಬಂದ ಪಿಎಸ್‌ಐ ರನ್ನಗೌಡ ಪಾಟೀಲ್ ಅವರನ್ನು ಕಂಡ ತಕ್ಷಣ ಗ್ಯಾಂಗ್ ಓಡಲು ಯತ್ನಿಸಿತು. ಇನೋವಾ ಕಾರು ಹಿಮ್ಮುಖವಾಗಿ ಓಡಿಸಲು ಯತ್ನಿಸಿದಾಗ ಗಟಾರಕ್ಕೆ ಬಿದ್ದಿತು. ಈ ದರ್ಬಾರದಲ್ಲಿ ಇಬ್ಬರು ಆರೋಪಿಗಳು – ಭಟ್ಕಳದ ಜಿಶಾನ್ ಮತ್ತು ನಬೀಲ್ ಪರಾರಿಯಾಗಿದರು.

ಮೂವರನ್ನು ಹಿಡಿಯಲು ಪಿಎಸ್‌ಐ ರನ್ನಗೌಡ ಪಾಟೀಲ್ ನೇತೃತ್ವದ ತಂಡ ನಿರಂತರ ಹೋರಾಟ ನಡೆಸಿತು. ಕೊನೆಗೆ ಮೂರು ಬೇಟೆ! ಬಂಧಿತರು: ಮಂಗಳೂರಿನ ಜಲೀಲ್ ಹುಸೈನ್ (11 ಅಪರಾಧ ಪ್ರಕರಣಗಳ ಆರೋಪಿ), ಭಟ್ಕಳದ ನಾಶೀರ್ ಹಕಿಂ (2 ಪ್ರಕರಣ), ಮತ್ತು ಒಬ್ಬ ಅಪ್ರಾಪ್ತ.

ಪೊಲೀಸರು ಕಾರು, 1500 ರೂ. ನಗದು, ಮೊಬೈಲ್, ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾದವರಿಗಾಗಿ ವಿಶೇಷ ತಂಡ ರಚನೆಯಾಗಿದೆ. ಈ ಕಾರ್ಯಾಚರಣೆಗೆ ಎಸ್ಪಿ ಎಂ. ನಾರಾಯಣ, ಎಡ್ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಮಹೇಶ್ ಎಂ.ಕೆ ಬೆನ್ನೆಲುಬಾಗಿ ನಿಂತಿದ್ದರು.

ವರದಿ: ಕುಮಾರ್ ನಾಯಕ್

nazeer ahamad

Recent Posts

ಮೊರಾರ್ಜಿ ವಸತಿ ಶಾಲೆಯ ಬಾಲಕಿ ಗರ್ಭಿಣಿ! ವರ್ಷಪೂರ್ತಿ ಅತ್ಯಾಚಾರ: ಕಾಮುಕನ ವಿರುದ್ಧ ಪೋಕ್ಸೋ ಕೇಸ್

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದ್ದು, ಮೊರಾರ್ಜಿ ವಸತಿ ಶಾಲೆಯಲ್ಲಿ…

4 hours ago

ಮನೆ ಮಾಲೀಕರಿಗೇ ಶಾಕ್ ಕೊಟ್ಟ ಬಾಡಿಗೆದಾರರು! ಮನೆ ಖಾಲಿ ಇದ್ದ ವೇಳೆ 45 ಗ್ರಾಂ ಚಿನ್ನ ದೋಚಿದ ದಂಪತಿ ಅರೆಸ್ಟ್

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೈಲುಕೊಪ್ಪ ಪೊಲೀಸರು ಭೇದಿಸಿದ್ದು,…

4 hours ago

ಅಸ್ಸಾಂಗೆ ಮಾಹಿತಿ ನೀಡದೆ ತೆರಳಿದ ಪ್ರಕರಣ: ಹುಳಿಯಾರು ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ. ವಂಚನೆ…

14 hours ago

ರಾಜಾಜಿನಗರದಲ್ಲಿ ಭೀಕರ ಅವಘಡ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರದ ಕೊಂಬೆ, ಸವಾರ ಕೋಮಾದಲ್ಲಿ

ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ನಿರ್ವಹಣೆಯ ಕೊರತೆಯಿಂದ ಮತ್ತೊಂದು ಗಂಭೀರ ಅವಘಡ ಸಂಭವಿಸಿದೆ. ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ…

14 hours ago

ವೈರಲ್ ವಿಡಿಯೋ ಕುರಿತು ಸ್ಪಷ್ಟನೆ: ಮಗುವಿಗೆ ಹೊಡೆದ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಅಲ್ಲ, ಮಗುವಿನ ತಾಯಿಯೇ ಎಂಬ ಮಾಹಿತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಮಗುವಿಗೆ ಮಹಿಳೆಯೊಬ್ಬರು ಕಾಲಿನಿಂದ ಒದ್ದಿರುವ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋವನ್ನು…

14 hours ago

ವೃದ್ಧ ದೂರುದಾರನ ಎದುರು ಮೇಜಿನ ಮೇಲೆ ಕಾಲು: ಮಹಿಳಾ ಕಾನ್‌ಸ್ಟೇಬಲ್ ಅಮಾನತು, ವೈರಲ್ ಫೋಟೋಗೆ ಇಲಾಖೆ ಕಂಗಾಲು

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾಡ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೃದ್ಧ ದೂರುದಾರನ…

14 hours ago