ಭಟ್ಕಳ: ರಸ್ತೆಯಲ್ಲಿ ದರೋಡೆಮಾಡುವ ‘ಗರುಡಾ ಗ್ಯಾಂಗ್’ಗೆ ಭಟ್ಕಳ ಪೊಲೀಸರು ತೀವ್ರ ಪಾಠ ಕಲಿಸಿದ್ದಾರೆ. ಬೆಳಗಿನ ಜಾವ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಗ್ಯಾಂಗ್ನ ಕ್ಯಾಪ್ಟನ್ ಸೇರಿ ಮೂವರನ್ನು ಬಂಧಿಸಲಾಗಿದೆ, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಮೇ 28ರ ನಸುಕಿನ 3 ಗಂಟೆ. ಭಟ್ಕಳದ ಸಾಗರ ರಸ್ತೆಯ ಬಿಲಾಲ್ಖಂಡ ಬಳಿ ಐವರು ಯುವಕರು ಮಂಕಿ ಟೋಪಿ ಹಾಕಿಕೊಂಡು ಕಾರಿನಲ್ಲಿ ಕಾವಲು ಹಿಡಿದಿದ್ದರು. ದರೋಡೆ ಸಂಚು ಸ್ಪಷ್ಟ. ಅವರ ಬಳಿ ಚಾಕು, ಕಾರಪುಡಿ, ಬೆಲ್ಟ್, ಮೊಬೈಲ್, ಹಣ ಎಲ್ಲವೂ ಸಿದ್ದ.
ಸಂದೇಹಕ್ಕೆ ಸ್ಥಳಕ್ಕೆ ಬಂದ ಪಿಎಸ್ಐ ರನ್ನಗೌಡ ಪಾಟೀಲ್ ಅವರನ್ನು ಕಂಡ ತಕ್ಷಣ ಗ್ಯಾಂಗ್ ಓಡಲು ಯತ್ನಿಸಿತು. ಇನೋವಾ ಕಾರು ಹಿಮ್ಮುಖವಾಗಿ ಓಡಿಸಲು ಯತ್ನಿಸಿದಾಗ ಗಟಾರಕ್ಕೆ ಬಿದ್ದಿತು. ಈ ದರ್ಬಾರದಲ್ಲಿ ಇಬ್ಬರು ಆರೋಪಿಗಳು – ಭಟ್ಕಳದ ಜಿಶಾನ್ ಮತ್ತು ನಬೀಲ್ ಪರಾರಿಯಾಗಿದರು.
ಮೂವರನ್ನು ಹಿಡಿಯಲು ಪಿಎಸ್ಐ ರನ್ನಗೌಡ ಪಾಟೀಲ್ ನೇತೃತ್ವದ ತಂಡ ನಿರಂತರ ಹೋರಾಟ ನಡೆಸಿತು. ಕೊನೆಗೆ ಮೂರು ಬೇಟೆ! ಬಂಧಿತರು: ಮಂಗಳೂರಿನ ಜಲೀಲ್ ಹುಸೈನ್ (11 ಅಪರಾಧ ಪ್ರಕರಣಗಳ ಆರೋಪಿ), ಭಟ್ಕಳದ ನಾಶೀರ್ ಹಕಿಂ (2 ಪ್ರಕರಣ), ಮತ್ತು ಒಬ್ಬ ಅಪ್ರಾಪ್ತ.
ಪೊಲೀಸರು ಕಾರು, 1500 ರೂ. ನಗದು, ಮೊಬೈಲ್, ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾದವರಿಗಾಗಿ ವಿಶೇಷ ತಂಡ ರಚನೆಯಾಗಿದೆ. ಈ ಕಾರ್ಯಾಚರಣೆಗೆ ಎಸ್ಪಿ ಎಂ. ನಾರಾಯಣ, ಎಡ್ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಮಹೇಶ್ ಎಂ.ಕೆ ಬೆನ್ನೆಲುಬಾಗಿ ನಿಂತಿದ್ದರು.
ವರದಿ: ಕುಮಾರ್ ನಾಯಕ್
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…