Categories: Latest

ಬೆಂಗಳೂರು: ಮೂರು ತಿಂಗಳಲ್ಲೇ ವಾಲಿದ 18 ಮಹಡಿ ಅಪಾರ್ಟ್‌ಮೆಂಟ್; ನೆಲಸಮ ಮಾಡಲು ನಿರ್ಧಾರ..!

ಬೆಂಗಳೂರು: ಹೊಸೂರು ರಸ್ತೆಯ ಕೂಡ್ಲು ಗೇಟ್ ಸಮೀಪ ಇರುವ ಎಸ್‌ಎನ್‌ಎನ್‌ ರಾಜ್ ಎಟರ್ನಿಯಾ ಅಪಾರ್ಟ್‌ಮೆಂಟ್ ಸಮುಚ್ಚಯದ 18 ಮಹಡಿಗಳ ಟವರ್‌ ಒಂದು ವಾಸಯೋಗ್ಯ ಪ್ರಮಾಣಪತ್ರ (Occupancy Certificate) ಪಡೆದ ಕೇವಲ ಮೂರು ತಿಂಗಳಲ್ಲೇ ಒಂದು ಬದಿಗೆ ವಾಲಿರುವುದು ಆತಂಕಕ್ಕೆ ಕಾರಣವಾಗಿದೆ. ನಿವಾಸಿಗಳು ಇನ್ನೂ ಗೃಹಪ್ರವೇಶ ಮಾಡುವ ಮುನ್ನವೇ ಸಮಸ್ಯೆ ಬೆಳಕಿಗೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಮರುನಿರ್ಮಾಣ ಮಾಡಲು ಬಿಲ್ಡರ್ ನಿರ್ಧರಿಸಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಕಾಲ ನಿರ್ಮಾಣಗೊಂಡ ಈ ಟವರ್‌ನಲ್ಲಿ ಒಟ್ಟು 49 ಫ್ಲ್ಯಾಟ್‌ಗಳಿವೆ. ಇಡೀ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ 15 ಟವರ್‌ಗಳಿದ್ದು, ಒಟ್ಟು 972 ಫ್ಲ್ಯಾಟ್‌ಗಳಲ್ಲಿ ಈಗಾಗಲೇ 822 ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಸಮಸ್ಯೆ ಕಾಣಿಸಿಕೊಂಡಿರುವುದು ಕೇವಲ ಒಂದು ಟವರ್‌ನಲ್ಲಿ ಮಾತ್ರವಾಗಿದ್ದು, ಉಳಿದ 14 ಟವರ್‌ಗಳು ಸುರಕ್ಷಿತವಾಗಿವೆ ಎಂದು ಬಿಲ್ಡರ್ ಸ್ಪಷ್ಟಪಡಿಸಿದ್ದಾರೆ.

ಆರು ತಿಂಗಳಲ್ಲಿ ನೆಲಸಮ, ಎರಡು ವರ್ಷಗಳಲ್ಲಿ ಹೊಸ ಟವರ್

ವಾಲಿರುವ ಟವರ್ ಅನ್ನು ಮುಂದಿನ ಆರು ತಿಂಗಳಲ್ಲಿ ಹಂತ ಹಂತವಾಗಿ ತೆರವುಗೊಳಿಸಿ, ಎರಡು ವರ್ಷಗಳೊಳಗೆ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಿ ಫ್ಲ್ಯಾಟ್‌ ಮಾಲೀಕರಿಗೆ ಹಸ್ತಾಂತರಿಸುವುದಾಗಿ ಬಿಲ್ಡರ್ ಭರವಸೆ ನೀಡಿದ್ದಾರೆ.

ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಬಿಲ್ಡರ್, ಕಟ್ಟಡವನ್ನು ನೆಲಸಮ ಮಾಡಲು ಅನುಮತಿ ನೀಡುವಂತೆ ಹಾಗೂ ಈ ಟವರ್‌ಗೆ ನೀಡಲಾಗಿದ್ದ ವಾಸಯೋಗ್ಯ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಕಟ್ಟಡ ವಾಲಲು ಕಾರಣವೇನು?

ಪ್ರಾಥಮಿಕ ಮಾಹಿತಿ ಪ್ರಕಾರ, ನಿರ್ಮಾಣಕ್ಕೂ ಮುನ್ನ ನಡೆಸಲಾಗಿದ್ದ ಮಣ್ಣಿನ ಪರೀಕ್ಷೆಯ ವರದಿಯಲ್ಲಿ ಉಂಟಾದ ಗಂಭೀರ ದೋಷವೇ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಹಸ್ತಾಂತರಕ್ಕೂ ಮುನ್ನ ಬಿಲ್ಡರ್ ನಡೆಸಿದ ವಾಟರ್ ಲೋಡ್ ಪರೀಕ್ಷೆಯ ವೇಳೆ ಕಟ್ಟಡ ಒಂದು ಬದಿಗೆ ವಾಲುತ್ತಿರುವುದು ಹಾಗೂ ಅಡಿಪಾಯ ಭಾಗದಲ್ಲಿ ಕುಸಿತದ ಲಕ್ಷಣಗಳು ಕಂಡುಬಂದಿವೆ.

ಪ್ರಸ್ತುತ ಕಟ್ಟಡ ಹೊರನೋಟಕ್ಕೆ ಸುರಕ್ಷಿತವಾಗಿ ಕಂಡರೂ, ಮುಂದಿನ 10 ರಿಂದ 15 ವರ್ಷಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ಬೆಳವಣಿಗೆ ಫ್ಲ್ಯಾಟ್ ಖರೀದಿದಾರರಲ್ಲಿ ಆತಂಕ ಮೂಡಿಸಿದ್ದು, ನಿರ್ಮಾಣ ಗುಣಮಟ್ಟ ಮತ್ತು ಮಣ್ಣಿನ ಪರೀಕ್ಷೆಯ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಬಿಲ್ಡರ್ ಮಾತ್ರ, ನಿವಾಸಿಗಳ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಹೇಳಿದ್ದು, ಹೊಸ ಕಟ್ಟಡವನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಅಕ್ಕನ ಗಂಡನಿಗಾಗಿ ಭಾವಿ ಪತಿಯನ್ನೇ ಕಾಡಿಗೆ ಕರೆಸಿ ಕೊಲೆ! ಮದುವೆಗೂ ಮುನ್ನ ಬಯಲಾಯ್ತು ಭಯಾನಕ ಸಂಚು

ಝಾರ್ಖಂಡ್‌ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮದುವೆಗೆ ನಿಶ್ಚಯವಾಗಿದ್ದ ಯುವಕನನ್ನು ಕಾಡಿಗೆ ಕರೆಸಿ ಹತ್ಯೆಗೈದ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತನ್ನ…

8 hours ago

ಗದಗ RDPR ವಿಶ್ವವಿದ್ಯಾಲಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಸಮಗ್ರ ತನಿಖೆಗೆ ಪೋಷಕರ ಆಗ್ರಹ

ಗದಗ: ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್‌ನಲ್ಲಿ ಮೃತಪಟ್ಟಿರುವ ಘಟನೆ ಹಲವು…

8 hours ago

SIR ಕರ್ತವ್ಯದ ಒತ್ತಡವೇ ಜೀವಕ್ಕೆ ಕಂಟಕವೇ? ಕರ್ತವ್ಯದಲ್ಲೇ ಶಿಕ್ಷಕಿ ಹೃದಯಾಘಾತದಿಂದ ಸಾವು, ಕುಟುಂಬಸ್ಥರ ಗಂಭೀರ ಆರೋಪ

ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ (SIR) ಕಾರ್ಯದ ಒತ್ತಡದ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಬೆಂಗಳೂರಿನ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ…

8 hours ago

ಭೀಕರ ರಸ್ತೆ ಅಪಘಾತ: ಗೂಡ್ಸ್ ಆಟೋ ಡಿಕ್ಕಿಗೆ ಬೈಕ್ ಸವಾರರಿಬ್ಬರ ದುರ್ಮರಣ, ಇಬ್ಬರಿಗೆ ಗಂಭೀರ ಗಾಯ

ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ಗೂಡ್ಸ್ ಆಟೋದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ…

8 hours ago

ಲಂಡನ್ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರನ ನಿಗೂಢ ಸಾವು; ಮದ್ಯ-ಡ್ರಗ್ಸ್‌ ಮಿತಿಮೀರಿದ ಸೇವನೆಯಿಂದ ಹೃದಯ ಸ್ತಂಭನ ಎಂದು ತನಿಖೆ

ಲಂಡನ್: ಬ್ರಿಟನ್‌ನ ಲಂಡನ್ ನಗರದಲ್ಲಿರುವ ಐಷಾರಾಮಿ ಕೆನ್ಸಿಂಗ್ಟನ್ ಪ್ರದೇಶದ ಮ್ಯಾರಿಯಟ್ ಹೋಟೆಲ್‌ನಲ್ಲಿ ಸಾವನ್ನಪ್ಪಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾ ಬಿನ್…

9 hours ago

NEET ವಿವಾದದ ಕೇಂದ್ರಬಿಂದುವಾದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್; ಶಿಕ್ಷಣ, ಆಸ್ತಿ ವಿವರ ಇಲ್ಲಿದೆ

ನವದೆಹಲಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ (Paper Leak) ವಿವಾದ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ…

9 hours ago