Latest

ಯಾರು ಇಲ್ಲದ ಸಮಯದಲ್ಲಿ ಪ್ರೇಯಸಿಯನ್ನು ನೋಡಲು ಹೋದ ಪ್ರೀಯತಮ: ನಡೆದೇ ಹೋಯಿತು ಆಘಾತಕಾರಿ ಘಟನೆ!

ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.

ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಅಪ್ರಾಪ್ತ ಯುವತಿ ಮತ್ತು ಅದೇ ಪಕ್ಕದ ಗ್ರಾಮದ ಗೋಣಸಗಿ ಗ್ರಾಮದ ಮಲ್ಲಿಕಾರ್ಜುನ ಜಮಖಂಡಿ ಅವರ ಪ್ರೇಮಾಂಕುರವಾಗಿತ್ತು. ಎರಡು ಜೋಡಿಗಳು ಪ್ರತಿನಿತ್ಯ ತಿಕೋಟಾದಿಂದ ವಿಜಯಪುರಕ್ಕೆ ಕಾಲೇಜಿಗೆ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ದಿನನಿತ್ಯ ಕಾಲೇಜಿಗೆ ಬಂದು ಹೋಗುತ್ತಿರುವ ಎರಡು ಜೋಡಿಗಳ ಪರಿಚಯ ಪ್ರೇಮಲೋಕಕ್ಕೆ ಧೂಡಿಕೊಂಡು ಹೋಗಿತ್ತು.

ತಮ್ಮ ಕಾಲೇಜಿನ ಬಿಡುವಿನ ಸಮಯದಲ್ಲ ಈ ಎರಡು ಜೋಡಿಗಳು ಪ್ರೀತಿ-ಪ್ರೇಮ ಗಾರ್ಡನ್ನು,ಸಿನಿಮಾ,ಶಾಪಿಂಗ್ ಅಂತ ಸಿಟಿ ಸುತ್ತಾಡುತ್ತಿದ್ದರು. ಇವರಿಬ್ಬರ ಪ್ರೇಮದಾಟವು ಮನೆಯ ಹಿರಿಯರಿಗೂ ಗೊತ್ತಾಗುತ್ತಿದ್ದಂತೆ ಎರಡು ಕಡೆಯವರು ತಮ್ಮ ಮಗ ಮಗಳಿಗೆ ಬುದ್ಧಿವಾದ ಹೇಳಿದ್ದರು. ಯುವಕ ಮಲ್ಲಿಕಾರ್ಜುನನ್ನು ಅವರ ತಂದೆ ವಿಜಯಪುರ ಕಾಲೇಜನ್ನು ಬಿಡಿಸಿ ಬನಹಟ್ಟಿಯ ಸೈನಿಕ ಶಾಲೆಗೆ ಸೇರಿಸಿದ್ದ ಆದರೂ ಕೂಡ ದಿನನಿತ್ಯ ಇಬ್ಬರು ಕೂಡ ಮೊಬೈಲಿನಲ್ಲಿ ತಾಸುಗಟ್ಟಲೆ ಮಾತನಾಡುತ್ತಿದ್ದರು. ಅದೇ ರೀತಿ ಮುಂದುವರೆದ ಅವರ ಪ್ರೇಮ ಮಧುರ ಮುಂದೊಂದು ದಿನ ಅಂದರೆ ಇದೇ ಸೆಪ್ಟೆಂಬರ್ 22ನೇ ತಾರೀಕಿನಂದು ಯುವಕ ಮಲ್ಲಿಕಾರ್ಜುನನಿಗೆ ಕರೆ ಮಾಡಿದ ಯುವತಿ ನಮ್ಮ ಮನೆಯಲ್ಲಿ ಯಾರು ಇಲ್ಲ ನೀನು ಮನೆಗೆ ಬಾ ಅಂತ ಕರೆಸಿಕೊಂಡಕೊಂಡಿದ್ದಳು.

ಮನೆಯಲ್ಲಿ ಕಂಡ ಮಲ್ಲಿಕಾರ್ಜುನನ್ನು ಯುವತಿಯ ತಂದೆ ಗುರಪ್ಪ ನೋಡಿ ಕೆಂಡಮಂಡಲಾಗಿದ್ದ. ತಕ್ಷಣ ಮಗಳನ್ನು ಯಾರು ಇವನು ಯಾಕೆ ಇವನ ಜೊತೆ ನಿನ್ನೆ ನಿನ್ನ ಒಡನಾಟ ಬಿಡು ಸರಿಯಲ್ಲ ಎಂಬ ಬುದ್ಧಿವಾದ ಹೇಳಿದ್ದ. ತಂದೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಿತಗೊಂಡ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಮತ್ತಷ್ಟು ಕೋಪಿತಕೊಂಡ ತಂದೆ ಗುರಪ್ಪ ನನ್ನ ಮಗಳ ಸಾವಿಗೆ ಆ ಮಲ್ಲಿಕಾರ್ಜುನನೇ ಕಾರಣವೆಂಬ ಆತುರದಿಂದ ಅದೇ ವಿಷವನ್ನು ಆ ಮಲ್ಲಿಕಾರ್ಜುನನಿಗೆ ಸೇವಿಸಿ.
ಯುವತಿಯ ತಂದೆ ಗುರಪ್ಪ ಮತ್ತು ಅಳಿಯ ಅಜಿತ ಸೇರಿಕೊಂಡು ಮಲ್ಲಿಕಾರ್ಜುನನ ಕೈಕಾಲು ಕಟ್ಟಿ ಗೋಣಿಚೀಲದಲ್ಲಿ ಹಾಕಿಕೊಂಡು ಹೋಗಿ ಬೀಳಗಿ ಹತ್ತಿರ ಕೃಷ್ಣಾ ನದಿಗೆ ಎಸೆದು ಬಂದಿರುತ್ತಾನೆ..

ಮಲ್ಲಿಕಾರ್ಜುನನ ತಂದೆಯ ದೂರಿನನ್ವಯ ಹುಡುಕಾಟ ನಡೆಸಿದ ಪೊಲೀಸರಿಗೆ ಏನು ಬೀಳಗಿಯ ಕೃಷ್ಣಾ ನದಿಯ ದಡದಲ್ಲಿ ಮಲ್ಲಿಕಾರ್ಜುನನ ಶವ ಪತ್ತೆಯಾಗಿದೆ..
ಮಲ್ಲಿಕಾರ್ಜುನನ್ನು ಯುವತಿಯ ತಂದೆ ಗುರಪ್ಪ ಮತ್ತು ಅಳಿಯಯ ಅಜಿತ್ ಅವರು ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆದಿದ್ದಾರೆ ಎಂಬುದು ಪೊಲೀಸ್ ತನಿಕೆಯಿಂದ ಹೊರಬಂದಿದೆ ಸದ್ಯ ಆರೋಪಿ ಯುವತಿಯ ತಂದೆ ಗುರಪ್ಪ ಹಾಗೂ ಅಳಿಯ ಅಜಿತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ಬೆಂಗಳೂರು ಡ್ರಗ್ಸ್ ಜಾಲದ ಮೇಲೆ ಭಾರೀ ದಾಳಿ: ₹36 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, 16 ಮಂದಿ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…

3 hours ago

ಕೊಡಗು ಜೈಲಿನಲ್ಲಿ ವಿಚಾರಣಾಧೀನ ಕೈದಿಯ ಸಾವು: ‘ಹನಿಟ್ರ್ಯಾಪ್‌, ಸುಳ್ಳು ಪ್ರಕರಣ’ ಆರೋಪಗಳಿಂದ ಪ್ರಕರಣಕ್ಕೆ ಹೊಸ ತಿರುವು

ಕೊಡಗು ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 68 ವರ್ಷದ ಚೆಂಗಪ್ಪ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 20…

3 hours ago

ಶಿವಾಜಿನಗರ ಬೌರಿಂಗ್ ಆಸ್ಪತ್ರೆ ದುರಂತ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ

ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದ ಗೋಡೆ ಕುಸಿತದಿಂದ ಸಂಭವಿಸಿದ ಭೀಕರ ದುರಂತದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,…

3 hours ago

ಭ್ರೂಣಲಿಂಗ ಪತ್ತೆ–ಅಕ್ರಮ ಸ್ಕ್ಯಾನಿಂಗ್ ದಂಧೆ ಭಂಡಾಫೋಡ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಬಂಧನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…

19 hours ago

₹15 ಲಕ್ಷ ಲಂಚ ಸ್ವೀಕರಿಸುವ ವೇಳೆ ಕೆಎಎಸ್ ಅಧಿಕಾರಿ ಬಲೆಗೆ; ಚಾಲಕನೊಂದಿಗೆ ಬಂಧನ

ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…

19 hours ago

ಪತ್ನಿಯ ದ್ರೋಹ ಗೊತ್ತಿದ್ದರೂ ಮಕ್ಕಳಿಗಾಗಿ ಸಹನೆ; ವಿಚ್ಛೇದನವೇ? ಹೊಸ ಬದುಕೇ? ಪತಿಯ ಪ್ರಶ್ನೆ ವೈರಲ್

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…

21 hours ago