Latest

ಸರಕಾರಿ ಶಾಲೆಯ ಹಾಲಿನ ಪುಡಿ ಕಳ್ಳರ ಹೆಡೆಮುರಿ ಕಟ್ಟಿದ ಬಾಗಲಕೋಟೆ ಪೊಲೀಸ್

ಬಾಗಲಕೋಟೆ:ಇತ್ತೀಚೆಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಲ್ಲಿ ಉಚಿತವಾಗಿ ವಿತರಣೆ ಆಗುವ ಹಾಲಿನ ಪುಡಿ ಪಾಕೆಟ್ ಗಳನ್ನು ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಕಲಾದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1 ಪ್ರಕರಣ ಹೀಗೆ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದು. ಸದರ ಪ್ರಕರಣಗಳಲ್ಲಿ ಒಟ್ಟು 697 ಕೆಜಿ ಹಾಲಿನ ಪುಡಿ ಹಾಗೂ 50 ಕೆಜಿ ಒಳ್ಳೆನ್ನೆ 2.09.861 ರೂ ಗಳು ಕಳ್ಳತನ ವಾಗಿರುತ್ತದೆ.

ಆದ ಕಾರಣ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆ ಮಾಡಲು ಶ್ರೀ ಜಯಪ್ರಕಾಶ ಮಾನ್ಯ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಜಿಲ್ಲೆ.ಹಾಗೂ ಪ್ರಸನ್ನ ದೇಸಾಯಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಮತ್ತು ಪೊಲೀಸ್ ಉಪ ವಿಭಾಗಾಧಿಕಾರಿ ಗಳಾದ ಶ್ರೀ ಪ್ರಶಾಂತ ಮುನ್ನೊಳ್ಳಿ ಹಾಗೂ ಬೀ ಎಂ ಸೋರಿ ಸಿಪಿಐ ಬಾಗಲಕೋಟೆ ಗ್ರಾಮೀಣ ವೃತ್ತ ಅವರ ಮಾರ್ಗದರ್ಶನದಲ್ಲಿ ಶ್ರೀ ಜನಾರ್ಧನ ಭಟ್ರಳ್ಳಿ ಪಿಎಸ್ಐ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ರವರ ನೈತೃತ್ವದಲ್ಲಿ ತನಿಖಾ ಅಪರಾಧ ತಂಡವನ್ನು ರಚಿಸಲಾಗಿತ್ತು.

ಸದರಿ ಅಪರಾಧ ಪತ್ತೆ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಕೂಡಿಕೊಂಡು ಇದರ ಆರೋಪಿತರ ತಪಾಸಣೆಯಲ್ಲಿ ಇದ್ದಾಗ ದಿನಾಂಕ 05/02/2023 ರಂದು 03 ಘಂಟೆಗೆ ಗದ್ದನಕೆರಿ ಗ್ರಾಮದಲ್ಲಿ ಟಮ್ ಟಮ್ ವಾಹನದಲ್ಲಿ ಸಂಶಯಾಸ್ಪದ ವಾಗಿ ತಿರುಗಾಡುತ್ತಿದ್ದ ಆರೋಪಿತರು ಆದ 1) ಕಲ್ಮೇಶ್ ತಂದೆ ಈರಪ್ಪ ಗುಳನ್ನವರ 2)ಸುರೇಶ ಈರಪ್ಪ ಅಗಸರ 3)ಶಿವಾನಂದ ಸಿದ್ದಪ್ಪ ಡೊಳ್ಳಿನವರ ಎಲ್ಲರೂ ಸಾ //ಗಿರಿಸಾಗರ ತಾಲ್ಲೂಕು ಬೀಳಗಿ ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಸದರಿ ಆಸಾಮಿಗಳು ಈಗ ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ಗ್ರಾಮೀಣ ಹಾಗೂ ಶಹರ ಮತ್ತು ಕಲಾದಗಿ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯಲ್ಲಿ ಉಚಿತವಾಗಿ ಶಾಲಾ ಮಕ್ಕಳಿಗೆ ವಿತರಣೆ ಆಗುವ ಹಾಲಿನ ಪುಡಿ ಮತ್ತು ಒಳ್ಳೆನ್ನೇ ಪಾಕಿಟ್ ಗಳನ್ನೂ ಕಳ್ಳತನ ಮಾಡಿ ,ಕಳ್ಳತನ ಮಾಡಿದ್ದ ಹಾಲಿನ ಪುಡಿಯಿಂದ ಕವಾ ತಯಾರಿಸಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡು ತಮ್ಮ ಸ್ವ ಇಚ್ಛೆ ಹೇಳಿಕೆ ನೀಡಿದ್ದು ,ತನಿಖೆ ಕೈಗೊಂಡು ಆರೋಪಿತರಿಂದ 97 ಕೆಜಿ ಹಾಲಿನ ಪುಡಿಯಿಂದ ಕವಾ ತಯಾರಿಸಿ ಮಾರಾಟ ಮಾಡಿ ಬಂದ ಹಣ ಒಟ್ಟು 1,22.000 ರೂಪಾಯಿಗಳನ್ನು ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಒಂದು ಟಂ ಟಂ ಗೂಡ್ಸ್ ವಾಹನವನ್ನು ಜಪ್ತಿ ಮಾಡಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.

ಈ ಕಾರ್ಯದಲ್ಲಿ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ಯ ಪಿಸೈ ರವರಾದ ಶ್ರೀ ಜನಾರ್ಧನ ಬಿ.ಮತ್ತು ಎಸೈ ಡಿ.ಸಿ.ಗುಡ್ಡಳ್ಳಿ ಮತ್ತು ಸಿಬ್ಬಂದಿ ಜನರಾದ ಆರ್. ಬಿ.ಪದರಾ ,ಎಸ್ ಬಿ ಹಣಮಗೌಡ್ರ.ರಾಜಭಕ್ಷ ನಧಾಪ.ಪ್ರದೀಪ ಪಾಟೀಲ್.ಶ್ರೀಕಾಂತ ಸೊನ್ನದ .ಎನ್ ಎಂ ಗುರಾಣಿ .ವಾಹನ ಚಾಲಕರಾದ ರಾಮಸ್ವಾಮಿ ನಾಯಕ ಹಾಗೂ ಕಲಾದಗಿ ಪೊಲೀಸ್ ಠಾಣೆಯ ಚಿದಾನಂದ ಭಜಂತ್ರಿ ಇವರು ಭಾಗವಹಿಸಿದ್ದರು.ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಮಾನ್ಯ ಎಸ್ಪಿ ಸಾಹೇಬರು ಬಾಗಲಕೋಟೆ ಜಿಲ್ಲೆ ರವರು ಶ್ಲಾಘಿಸಿದ್ದಾರೆ.

ವರದಿ :ಸಂಗಪ್ಪ ಚಲವಾದಿ

ಭ್ರಷ್ಟರ ಬೇಟೆ

Recent Posts

ಲೆನ್ಸ್ಕಾರ್ಟ್ ಡ್ರೆಸ್ ಕೋಡ್ ವಿವಾದ: ತಿಲಕ-ಕುಂಕುಮ ನಿಷೇಧ ಆರೋಪ, ನಾಯಕಿ ನಾಜಿಯಾ ಖಾನ್ ಪ್ರತಿಭಟನೆ

ನಾಸಿಕ್‌ನ Tata Consultancy Services ನಲ್ಲಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, Lenskart…

10 hours ago

ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಭರ್ಜರಿ ಸ್ವಾಗತ: ಹಾಸನದಲ್ಲಿ ವಿಡಿಯೋ ವೈರಲ್

ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿಯಲ್ಲಿ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ ಆಗಮಿಸುತ್ತಿದ್ದಂತೆಯೇ ಯುವಕರ ಗುಂಪೊಂದು ಅದ್ದೂರಿ ಸ್ವಾಗತ ಕೋರಿರುವ…

10 hours ago

ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಲೋಕಾಯುಕ್ತ ಬಲೆಗೆ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಕಾನ್ಸ್ಟೇಬಲ್ ಸಂತೋಷ್…

10 hours ago

ಡಿಎನ್‌ಎ ಸತ್ಯ ಹೇಳಿತು: ಬಿಜೆಪಿ ಮುಖಂಡನ ಪುತ್ರನೇ ಮಗುವಿನ ತಂದೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪುತ್ತೂರು…

16 hours ago

ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ: ಯುದ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮುನ್ನೆಚ್ಚರಿಕಾ ಕ್ರಮ

ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಯುದ್ಧದ ಪರಿಣಾಮವಾಗಿ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಆಮದು ವ್ಯತ್ಯಯಗೊಳ್ಳುವ ಭೀತಿ…

16 hours ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆಗೆ ಸಂಚು: ಪತ್ನಿ ಸೇರಿ ಐವರ ಬಂಧನ

ಆಂಧ್ರ ಪ್ರದೇಶದ ಪ್ರೊದ್ದಟೂರು ತಾಲ್ಲೂಕಿನ ಲಿಂಗಾಪುರಂ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಭಾವಿಸಿದ…

16 hours ago