Crime

ಮಸೀದಿಯಲ್ಲಿ 5 ವರ್ಷದ ಬಾಲಕಿಗೆ ಅತ್ಯಾಚಾರಕ್ಕೆ ಯತ್ನ: 2 ವರ್ಷಗಳ ನಂತರ ಬೆಳಕಿಗೆ !

ಬೆಳಗಾವಿ, ಆಗಸ್ಟ್ 6: ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಸೀದಿಯೊಂದರಲ್ಲಿ 5 ವರ್ಷದ ಬಾಲಕಿಯ ಮೇಲೆ ಮೌಲ್ವಿ ಅತ್ಯಾಚಾರಕ್ಕೆ ಯತ್ನಿಸಿದ ಘೋರ ಘಟನೆ ಎರಡು ವರ್ಷಗಳ ನಂತರ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಇದೀಗ ಕ್ರಮ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಈ ಅಪಘಾತ 2023ರ ಅಕ್ಟೋಬರ್ 5ರಂದು ಸಂಭವಿಸಿದ್ದು, ಆರೋಪಿಯಾಗಿರುವ ಮೌಲ್ವಿ ತುಫೇಲ್ ಅಹ್ಮದ್ ದಾದಾಫೀರ್ ವಿರುದ್ಧ ಇದೀಗ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, ಈ ಪ್ರಕರಣವು ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋವೊಂದರಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದರು. ಈ ಪೋಸ್ಟ್‌ನಲ್ಲಿ ಆಡಿಯೋ ಮತ್ತು ದೃಶ್ಯವೊಂದರ ಮೂಲಕ ಬಾಲಕಿಯ ಮೇಲೆ ವ್ಯಕ್ತಿಯೊಬ್ಬನು ದುಷ್ಟ ಕೃತ್ಯಕ್ಕೆ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಪೋಸ್ಟ್‌ ಲಭ್ಯವಾದ ಕೂಡಲೇ ಸಿಇಎನ್ ಪೊಲೀಸ್ ಇಲಾಖೆ ಮೂಲಕ ತನಿಖೆ ಆರಂಭಿಸಲಾಗಿದ್ದು, ವಿಡಿಯೋದಲ್ಲಿನ ಸ್ಥಳದ ವಿವರ ಆಧರಿಸಿ ಮುರಗೋಡ ಠಾಣೆಗೆ ಮಾಹಿತಿ ನೀಡಲಾಗಿತ್ತು. ಹೆಚ್ಚಿನ ತನಿಖೆಯಲ್ಲಿ ಪ್ರಕರಣ 2023ರ ಅಕ್ಟೋಬರ್ 5ರಂದು ನಡೆದಿರುವುದು ದೃಢಪಟ್ಟಿದೆ.

ಆರೋಪಿಯು ಮಹಾಲಿಂಗಪುರದಿಂದ ಆಗಮಿಸಿದ ಬಳಿಕ, ತನ್ನ ಸಂಬಂಧಿತ ಮಹಿಳೆಯ ಮನೆಯಲ್ಲಿ ವಾಸ್ತವ್ಯಕ್ಕೆ ಇರುತ್ತಿದ್ದ ವೇಳೆ ಈ ಜಘನ್ಯ ಕೃತ್ಯಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ತಕ್ಷಣ ಸ್ಥಳೀಯರು ಬಾಲಕಿಯ ತಂದೆಯನ್ನು ಕರೆಸಿ ವಿಚಾರಿಸಿದ್ದರೂ, ಮಗುವಿನ ಕುಟುಂಬ ಪೊಲೀಸರು ದೂರು ನೀಡದೆ ಬಿಟ್ಟಿದ್ದರು.

ವಿಡಿಯೋ ವೈರಲ್ ಆಗಿದ ನಂತರ ಜಿಲ್ಲಾಧಿಕಾರಿಗಳ ಮಕ್ಕಳ ರಕ್ಷಣಾ ಘಟಕ ಮಧ್ಯೆ ಪ್ರವೇಶಿಸಿ ಪ್ರಕರಣದ ಮಹತ್ವವನ್ನು ಮನವರಿಕೆ ಮಾಡಿಸಿದೆ. ಪೋಷಕರು ಮೊದಲಿಗೆ ಕೇಸ್ ದಾಖಲಿಸಲು ಸಮ್ಮತಿಸದ ಹಿನ್ನೆಲೆಯಲ್ಲಿ, ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯಡಿ ಸ್ವಯಂಪ್ರೇರಿತ ದೂರು ದಾಖಲಿಸಿ, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ತುಫೇಲ್ ಅಹ್ಮದ್ ದಾದಾಫೀರ್ ಮೂಲತಃ ವೇಲ್ಡಿಂಗ್ ಕೆಲಸ ಮಾಡುತ್ತಿದ್ದವನಾಗಿದ್ದು, ಸಮಯ ಸಿಕ್ಕಾಗ ಮಸೀದಿಗಳಲ್ಲಿ ಧಾರ್ಮಿಕ ಭಾಷಣಗಳನ್ನು ನೀಡುತ್ತಿದ್ದ ಎನ್ನಲಾಗಿದೆ.

ಈ ಪ್ರಕರಣವು ಮೌಲ್ವಿಯ ಭಯಾನಕ ಮುಖವೊಂದು ಸಾರ್ವಜನಿಕ ಮುಂದಿಡುವಂತಾಗಿದ್ದು, ಪೊಲೀಸರು ಇದರ ಕುರಿತು ಗಂಭೀರ ತನಿಖೆ ಮುಂದುವರೆಸಿದ್ದಾರೆ. ಜತೆಗೆ, ಈ ರೀತಿಯ ಘಟನೆಗಳು ಹೆಚ್ಚು ವರ್ಷಗಳ ನಂತರ ಬೆಳಕಿಗೆ ಬರುವುದು ಯಾಕೆ ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಬೇಕಾದ ಸಂದರ್ಭ ಉಂಟಾಗಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8088070392

nazeer ahamad

Recent Posts

ಮೊರಾರ್ಜಿ ವಸತಿ ಶಾಲೆಯ ಬಾಲಕಿ ಗರ್ಭಿಣಿ! ವರ್ಷಪೂರ್ತಿ ಅತ್ಯಾಚಾರ: ಕಾಮುಕನ ವಿರುದ್ಧ ಪೋಕ್ಸೋ ಕೇಸ್

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದ್ದು, ಮೊರಾರ್ಜಿ ವಸತಿ ಶಾಲೆಯಲ್ಲಿ…

29 minutes ago

ಮನೆ ಮಾಲೀಕರಿಗೇ ಶಾಕ್ ಕೊಟ್ಟ ಬಾಡಿಗೆದಾರರು! ಮನೆ ಖಾಲಿ ಇದ್ದ ವೇಳೆ 45 ಗ್ರಾಂ ಚಿನ್ನ ದೋಚಿದ ದಂಪತಿ ಅರೆಸ್ಟ್

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೈಲುಕೊಪ್ಪ ಪೊಲೀಸರು ಭೇದಿಸಿದ್ದು,…

31 minutes ago

ಅಸ್ಸಾಂಗೆ ಮಾಹಿತಿ ನೀಡದೆ ತೆರಳಿದ ಪ್ರಕರಣ: ಹುಳಿಯಾರು ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ. ವಂಚನೆ…

11 hours ago

ರಾಜಾಜಿನಗರದಲ್ಲಿ ಭೀಕರ ಅವಘಡ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರದ ಕೊಂಬೆ, ಸವಾರ ಕೋಮಾದಲ್ಲಿ

ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ನಿರ್ವಹಣೆಯ ಕೊರತೆಯಿಂದ ಮತ್ತೊಂದು ಗಂಭೀರ ಅವಘಡ ಸಂಭವಿಸಿದೆ. ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ…

11 hours ago

ವೈರಲ್ ವಿಡಿಯೋ ಕುರಿತು ಸ್ಪಷ್ಟನೆ: ಮಗುವಿಗೆ ಹೊಡೆದ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಅಲ್ಲ, ಮಗುವಿನ ತಾಯಿಯೇ ಎಂಬ ಮಾಹಿತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಮಗುವಿಗೆ ಮಹಿಳೆಯೊಬ್ಬರು ಕಾಲಿನಿಂದ ಒದ್ದಿರುವ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋವನ್ನು…

11 hours ago

ವೃದ್ಧ ದೂರುದಾರನ ಎದುರು ಮೇಜಿನ ಮೇಲೆ ಕಾಲು: ಮಹಿಳಾ ಕಾನ್‌ಸ್ಟೇಬಲ್ ಅಮಾನತು, ವೈರಲ್ ಫೋಟೋಗೆ ಇಲಾಖೆ ಕಂಗಾಲು

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾಡ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೃದ್ಧ ದೂರುದಾರನ…

11 hours ago