Categories: CrimeLatest

ಹಾಸನದಲ್ಲಿ ಹಣ ಕೇಳಿದ್ದಕ್ಕೆ ದಾಳಿ: ಬೇಕರಿ ಮಾಲೀಕನ ಮೇಲೆ ಮರಣಾಂತಿಕ ಹಲ್ಲೆ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ..!

ಹಾಸನ: ತಿಂಡಿ ಖರೀದಿಸಿ ಹಣ ನೀಡದೆ ತೆರಳುತ್ತಿದ್ದವರನ್ನು ಪ್ರಶ್ನಿಸಿದ ಕಾರಣಕ್ಕೆ ಬೇಕರಿ ಮಾಲೀಕನ ಮೇಲೆ ದಾಳಿಯ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಮಧ್ಯಾಹ್ನವೇ ಮದ್ಯದ ಅಮಲಿನಲ್ಲಿ ಇದ್ದ ಯುವಕರ ಗುಂಪೊಂದು ಬೇಕರಿಗೆ ನುಗ್ಗಿ ಮಾಲೀಕ ಹಾಗೂ ಮತ್ತೋರ್ವ ವ್ಯಕ್ತಿಗೆ ಹಲ್ಲೆ ನಡೆಸಿದ ಘಟನೆ ಆತಂಕ ಮೂಡಿಸಿದೆ.

ಹಳ್ಳಿಮೈಸೂರು ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 373 ಸಮೀಪದ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಕೆಲ ಯುವಕರು ತಿಂಡಿ ಖರೀದಿಸಿ ಹಣ ಕೊಡದೇ ಹೋಗುತ್ತಿದ್ದನ್ನು ಪ್ರಶ್ನಿಸಿದ ವೇಳೆ ಗಲಾಟೆ ಆರಂಭವಾಗಿದೆ. ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಹಲ್ಲೆಗೆ ತಿರುಗಿದ್ದು, ಮೂವರು ಸೇರಿ ಬೇಕರಿ ಮಾಲೀಕ ಹಾಗೂ ಪ್ರಶ್ನಿಸಿದ ಮತ್ತೋರ್ವ ವ್ಯಕ್ತಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ಕೃತ್ಯ ಸಂಪೂರ್ಣವಾಗಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ನಿರ್ದಯ ವರ್ತನೆ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಘಟನೆ ಬಳಿಕ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪ್ರಕರಣ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದಾಳಿಗಳು ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎಬ್ಬಿಸಿದೆ.

ಭ್ರಷ್ಟರ ಬೇಟೆ

Recent Posts

ಒಂದು ಅನುಮಾನ… ಚಿನ್ನದಂತ ಸಂಸಾರವೇ ಚೂರುಚೂರು: ಪತ್ನಿಯನ್ನು ಕೊಂದು ಸಿಮೆಂಟ್‌ನಲ್ಲಿ ಮುಚ್ಚಿದ ಗಂಡ!

ಸೂರತ್ (ಗುಜರಾತ್): ಒಂದು ಸಣ್ಣ ಅನುಮಾನ ಹೇಗೆ ವರ್ಷಗಳ ಕಾಲ ಸುಖವಾಗಿದ್ದ ಸಂಸಾರವನ್ನೇ ನಾಶಮಾಡಬಹುದು ಎಂಬುದಕ್ಕೆ ಗುಜರಾತ್‌ನ ಸೂರತ್‌ನಲ್ಲಿ ನಡೆದ…

6 minutes ago

“ಜಾಗಿಂಗ್ ಡ್ರೆಸ್ ಕೂಡ ಪ್ರಚೋದನೆನಾ?”: ಹೈದರಾಬಾದ್‌ನಲ್ಲಿ ಯುವತಿಗೆ ಸಾರ್ವಜನಿಕ ಲೈಂಗಿಕ ಕಿರುಕುಳ, ಭದ್ರತೆ ಬಗ್ಗೆ ಆಕ್ರೋಶ

ಹೈದರಾಬಾದ್: ನಗರದಲ್ಲಿ ಮಹಿಳೆಯರ ಭದ್ರತೆ ಪ್ರಶ್ನೆಯಾಗಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಜನನಿಬಿಡ ಪ್ರದೇಶದಲ್ಲೇ ಜಾಗಿಂಗ್ ಮಾಡುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ…

7 minutes ago

11 ಲಕ್ಷ ಮೌಲ್ಯದ ಚಿನ್ನ ಹಿಂದಿರುಗಿಸಿದ ಆಟೋ ಚಾಲಕ: ಭಟ್ಕಳದಲ್ಲಿ ಪ್ರಾಮಾಣಿಕತೆ ಮಿನುಗು

ಭಟ್ಕಳ: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಅಪರೂಪವಾಗುತ್ತಿದೆ ಎನ್ನುವ ಮಾತಿನ ನಡುವೆ, ಭಟ್ಕಳದ ಆಟೋರಿಕ್ಷಾ ಚಾಲಕರೊಬ್ಬರು ತಮ್ಮ ನಿಸ್ವಾರ್ಥ ನಡೆ ಮೂಲಕ…

4 hours ago

ಬೆಂಗಳೂರು ಶಾಕ್: ಒಂಟಿ ಯುವತಿ ಮನೆಯಿಂದ ದುರ್ವಾಸನೆ, ನಗ್ನ ಸ್ಥಿತಿಯಲ್ಲಿ ಯುವತಿ ಶವ ಪತ್ತೆ: ನಿಗೂಢ ಯುವಕನ ಸುಳಿವು

ಬೆಂಗಳೂರು: ನಗರದಲ್ಲಿ ಮತ್ತೊಂದು ಶಾಕ್ ಮೂಡಿಸುವ ಘಟನೆ ಬೆಳಕಿಗೆ ಬಂದಿದ್ದು, ಆಡುಗೋಡಿ ಪ್ರದೇಶದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು…

5 hours ago

ಕೇಕ್ ಹಚ್ಚಿದ ಗಲಾಟೆ ರಕ್ತಪಾತಕ್ಕೆ: ಹುಟ್ಟುಹಬ್ಬದ ಪಾರ್ಟಿ ಮೂರು ಯುವಕರ ಸಾವಿನಲ್ಲಿ ಅಂತ್ಯ

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹುಟ್ಟುಹಬ್ಬದ ಸಂಭ್ರಮವೇ ಭೀಕರ ದುರಂತಕ್ಕೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಸ್ನೇಹಿತರ ನಡುವೆ ನಡೆದ ಸಣ್ಣ…

23 hours ago

ಮಧ್ಯಪ್ರದೇಶದಲ್ಲಿ ಅಧಿಕಾರ ದರ್ಪ: ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ – ಸಚಿವನ ಸಹೋದರ ವಿರುದ್ಧ ಗಂಭೀರ ಆರೋಪ

ಮಧ್ಯಪ್ರದೇಶದಲ್ಲಿ ಜನಪ್ರತಿನಿಧಿಗಳ ವರ್ತನೆ ಕುರಿತ ವಿವಾದಗಳು ತಣಿಯುವ ಮುನ್ನವೇ ಮತ್ತೊಂದು ಅಧಿಕಾರದ ದರ್ಪದ ಘಟನೆ ಬೆಳಕಿಗೆ ಬಂದಿದೆ. ರಾಜ್ಯ ವಿಧಾನಸಭೆಯ…

23 hours ago