ಮೈಸೂರು ನಗರ, ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಂಭೀರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಲು ಪೊಲೀಸರಿಗೆ ಯಶಸ್ಸು ಲಭಿಸಿದೆ.
ಪ್ರಕರಣದ ಸಂಕ್ಷಿಪ್ತ ವಿವರ:
ಪಿರ್ಯಾದಿದಾರರಾದ ಎಂ.ಎನ್. ಗಿರೀಶ್ ಬಿನ್ ನಾಗಶೆಟ್ಟಿ (44 ವರ್ಷ), ಎಲೆಕ್ಟ್ರಿಕಲ್ ಕೆಲಸಗಾರರು, ಎಸ್.ವಿ.ಪಿ. ನಗರ, ಮೈಸೂರು, ದಿನಾಂಕ: 13/03/2025 ರಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, “ರಾತ್ರಿ ಸುಮಾರು 9-00 ಗಂಟೆಗೆ ನಾಲ್ಕು ಮಂದಿ ದರೋಡೆಕೋರರು, ಎರಡು ಬೈಕ್ಗಳಲ್ಲಿ ಬಂದು, ಲಾಂಗ್, ಮಚ್ಚು, ಡ್ರಾಗನ್, ರಾಡುಗಳನ್ನು ತೋರಿಸಿ, ನನ್ನ ಹೆಂಡತಿ ಮತ್ತು ಮಕ್ಕಳಿಗೆ ಬೆದರಿಕೆ ಮಾಡಿ, ಮಚ್ಚುಗಳಿಂದ ಗಾಯಗೊಳಿಸಿ, ನನ್ನ 23 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ. ಈ ದೂರಿನ ಮೇಲೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊ.ನಂ: 23/2025, ಕಲಂ: 309(6), 329(4), 310(2) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.
ಪೊಲೀಸರಿಂದ ಕೈಗೊಳ್ಳಲಾದ ಕಾರ್ಯಾಚರಣೆ:
ಮಾನ್ಯ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಐ.ಪಿ.ಎಸ್. ರವರ ನಿರ್ದೇಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ) ಶ್ರೀಮತಿ ಜಾಹ್ನವಿ.ಎಸ್., ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ದೇವರಾಜ ವಿಭಾಗದ ಎ.ಸಿ.ಪಿ. ಶ್ರೀ ರಾಜೇಂದ್ರ ನೇತೃತ್ವದಲ್ಲಿ, ಆಲನಹಳ್ಳಿ ಠಾಣೆಯ ಪಿ.ಐ. ಶ್ರೀಮತಿ ಸ್ವರ್ಣ.ಜಿ.ಎಸ್., ಎಸ್.ಐ. ಗಂಗಾಧರ್ ಹಾಗೂ ಸಿಬ್ಬಂದಿಗಳಾದ ಚೇತನ, ಕಿರಣ್ ರಾಥೋಡ್, ಲಿಂಗರಾಜಪ್ಪ, ಮಂಜುನಾಥ್ ಗದಗೈಗೋಳ, ಮಲ್ಲಿಕಾರ್ಜುನ, ಸಂತೋಷ್ ಕುಮಾರ್, ಶಾಜಿಯಾ ಬಾನು, ಅಭಿಷೇಕ್ ಮತ್ತು ಆಟೋಮಿಷನ್ ಸೆಂಟರ್ನ ಎಸ್.ಐ. ಚಂದ್ರಶೇಖರ್ ರಾವ್, ಸಿಬ್ಬಂದಿಗಳಾದ ಪ್ರದೀಪ್, ಶಿವಕುಮಾರ್ ಹಾಗೂ ಸಿ.ಡಿ.ಆರ್ ವಿಭಾಗದ ಕುಮಾರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಬಂಧಿತ ಆರೋಪಿಗಳು:
1. ಯೋಗಾನಂದ @ ಯೋಗ @ ಆನಂದ @ ದಡಿಯಾ @ ಉಪೇಂದ್ರ ಬಿನ್ ಕೃಷ್ಣಗೌಡ (34 ವರ್ಷ), ಆಟೋ ಚಾಲಕ, ಮಾರಸಿಂಗನಹಳ್ಳಿ, ಮದ್ದೂರು, ಮಂಡ್ಯ ಜಿಲ್ಲೆ.
2. ಅಭಿಷೇಕ್ @ ಬ್ಯಾಡ್ರಾಯನಪುರ ಅಭಿ, ಆಟೋ ಚಾಲಕ, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಂಗಳೂರು.
3. ಮನು ಕುಮಾರ್ ಬಿನ್ ವೀರಯ್ಯ (27 ವರ್ಷ), ಬಿತ್ತರಿ ನೀರಿನ ಕ್ಯಾನ್ ಡಿಲಿವರಿ ಕೆಲಸ, ಕಣ್ಣೂರು, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ.
4. ಆಕಾಶ್ ಬಿನ್ ನಾಗರಾಜು (26 ವರ್ಷ), ಟ್ಯಾಟೂ ಕಲಾವಿದ, ಕಣ್ಣೂರು, ಕೊಳ್ಳೆಗಾಲ, ಚಾಮರಾಜನಗರ.
5. ವೆಂಕಟೇಶ್.ಎಸ್ @ ಗಜ ಬಿನ್ ಶಿವಣ್ಣ (26 ವರ್ಷ), ಕಾರು ಚಾಲಕ, ಗುಂಡಶೆಟ್ಟಿಹಳ್ಳಿ, ಚನ್ನರಾಯಪಟ್ಟಣ, ಹಾಸನ.
ವಶಪಡಿಸಿದ ಮಾಲುಗಳು:
23 ಗ್ರಾಂ ತೂಕದ ಚಿನ್ನದ ಸರ
2 ಮಚ್ಚುಗಳು
2 ಡ್ರಾಗನ್ಗಳು
2 ರಾಡುಗಳು
ಮಾಸ್ಕ್, ಕೈಕವಚಗಳು, ಹೆಲ್ಮೆಟ್ಗಳು
ಬಜಾಜ್ ಪಲ್ಸರ್ 125 ಮತ್ತು ಬಜಾಜ್ ಪಲ್ಸರ್ 150 ಬೈಕ್ಗಳು
ಒಟ್ಟು ಮೌಲ್ಯ: ₹4,00,000
ಆರೋಪಿಗಳು ಬಳಸಿದ ವಾಹನಗಳ ವಿವರ:
ಈ ದರೋಡೆಕೋರರು ಬಳಸಿದ ಬೈಕ್ಗಳು ಮೈಸೂರಿನ ಘಟನೆಗೆ ಮೊದಲೇ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೋಷಿತ ಪ್ರಕರಣಗಳಾಗಿ ದಾಖಲಾಗಿವೆ:
1. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 23/2025, ಕಲಂ 303(2) ಬಿ.ಎನ್.ಎಸ್.
2. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 57/2025, ಕಲಂ 303(2) ಬಿ.ಎನ್.ಎಸ್.
ಆಲನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಶ್ರಮದ ಫಲವಾಗಿ ಪ್ರಕರಣ ಬೆರಿಸಿದ್ದು. ಮಾನ್ಯ ಪೊಲೀಸ್ ಆಯುಕ್ತರು ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ವರದಿ: ಬಸವಣ್ಣ
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…