ಮಾಜಿ ಸಂಸದ ಡಿ.ಕೆ. ಸುರೆಶ್ ಅವರ ಸಹೋದರಿ ಎಂದು ದುಷ್ಕೃತ್ಯ ಮಾಡುತ್ತಿದ್ದ ಐಶ್ವರ್ಯ ಗೌಡ ಇದೀಗ ಮತ್ತೊಂದು ದೊಡ್ಡ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದಾಳೆ. ಆರ್.ಆರ್.ನಗರ ಠಾಣೆಯಲ್ಲಿ ಸಲ್ಲಿಸಿರುವ ದೂರುನಂತರ, ಈ ಬಾರಿ ಐಶ್ವರ್ಯ ಗೌಡ ಮತ್ತು ಅವಳ ಪತಿ ಹರೀಶ್ ಕೆ.ಎನ್. ಎಂಬವರ ವಿರುದ್ಧ 5.3 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬರುತ್ತಿದೆ.
ಐಶ್ವರ್ಯ ಗೌಡ, ಪ್ರತಿ ಸಮಯದಲ್ಲಿಯೂ ಶ್ರೀಮಂತರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದಳು. ಇದೀಗ, ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರ ಮೇಲೆ ಆಕೆಯು ಬಲವಂತವಾಗಿ ಹಣ ವಶಪಡಿಸಿಕೊಂಡಿರುವುದಾಗಿ ದೂರು ನೀಡಿದ್ದಾರೆ.
2022ರಿಂದ 2024 ರವರೆಗೆ ಐಶ್ವರ್ಯ ಗೌಡ ಮತ್ತು ಅವಳ ಪತಿ, ಇಬ್ಬರೂ ಸೇರಿ ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರನ್ನು ನಂಬಿಸಿದ್ದರೆಂದು ತಿಳಿದು ಬಂದಿದೆ. ಐಶ್ವರ್ಯವು ತನ್ನನ್ನು ಡಿ.ಕೆ. ಸುರೆಶ್ ಅವರ ತಂಗಿ ಎಂದು ಪರಿಚಯಿಸಿಕೊಂಡು, ರಿಯಲ್ ಎಸ್ಟೇಟ್, ಗೋಲ್ಡ್ ಬ್ಯುಸಿನೆಸ್ ಮತ್ತು ಕೆಸಿನೋ ವ್ಯಾಪಾರದ ಬಗ್ಗೆ ಅನೇಕ ಭರವಸೆಗಳನ್ನು ನೀಡಿದ್ದಾಳೆ.
ಹಾಗೆ ಹೂಡಿಕೆಗಳು ಮತ್ತು ಇನ್ನಿತರ ಕಾರಣಗಳನ್ನು ತಂದು, 2.52 ಕೋಟಿ ರೂ. ಹಣ ಮತ್ತು 2.50 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ 350 ಗ್ರಾಂ ಚಿನ್ನಾಭರಣಗಳನ್ನು ಪಡೆದಿದ್ದಳು. ಆದರೆ, ನಂತರ ಆಕೆಯು ಹಣವನ್ನು ಹಿಂದಿರುಗಿಸದೆ “ಹಣದ ಬಗ್ಗೆ ದೂರು ಅಥವಾ ಸಾಕ್ಷಿ ಏನಾದರೂ ಹೇಳಿದ್ರೆ ಅಷ್ಟೆ ಗೊತ್ತಲ್ಲಾ? ನಾನು ಡಿಕೆ ಸುರೇಶ್ ತಂಗಿ ನಿನ್ನ ಹಣ ವಾಪಸ್ ಕೊಡುವುದಿಲ್ಲ” ಎಂದು ಬೆದರಿಕೆ ಹಾಕಿದಳು.
ಈ ಪ್ರಕರಣ ಬೆಳಕಿಗೆ ಬರುವುದರೊಂದಿಗೆ, ವೈದ್ಯೆ ಡಾ. ಮಂಜುಳಾ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಐಶ್ವರ್ಯ ಗೌಡ, ಅವಳ ಪತಿ ಹಾಗೂ ಮತ್ತಿತರರು ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್ಐಆರ್…