ಮಾಜಿ ಸಂಸದ ಡಿ.ಕೆ. ಸುರೆಶ್ ಅವರ ಸಹೋದರಿ ಎಂದು ದುಷ್ಕೃತ್ಯ ಮಾಡುತ್ತಿದ್ದ ಐಶ್ವರ್ಯ ಗೌಡ ಇದೀಗ ಮತ್ತೊಂದು ದೊಡ್ಡ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದಾಳೆ. ಆರ್.ಆರ್.ನಗರ ಠಾಣೆಯಲ್ಲಿ ಸಲ್ಲಿಸಿರುವ ದೂರುನಂತರ, ಈ ಬಾರಿ ಐಶ್ವರ್ಯ ಗೌಡ ಮತ್ತು ಅವಳ ಪತಿ ಹರೀಶ್ ಕೆ.ಎನ್. ಎಂಬವರ ವಿರುದ್ಧ 5.3 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬರುತ್ತಿದೆ.
ಐಶ್ವರ್ಯ ಗೌಡ, ಪ್ರತಿ ಸಮಯದಲ್ಲಿಯೂ ಶ್ರೀಮಂತರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದಳು. ಇದೀಗ, ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರ ಮೇಲೆ ಆಕೆಯು ಬಲವಂತವಾಗಿ ಹಣ ವಶಪಡಿಸಿಕೊಂಡಿರುವುದಾಗಿ ದೂರು ನೀಡಿದ್ದಾರೆ.
2022ರಿಂದ 2024 ರವರೆಗೆ ಐಶ್ವರ್ಯ ಗೌಡ ಮತ್ತು ಅವಳ ಪತಿ, ಇಬ್ಬರೂ ಸೇರಿ ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರನ್ನು ನಂಬಿಸಿದ್ದರೆಂದು ತಿಳಿದು ಬಂದಿದೆ. ಐಶ್ವರ್ಯವು ತನ್ನನ್ನು ಡಿ.ಕೆ. ಸುರೆಶ್ ಅವರ ತಂಗಿ ಎಂದು ಪರಿಚಯಿಸಿಕೊಂಡು, ರಿಯಲ್ ಎಸ್ಟೇಟ್, ಗೋಲ್ಡ್ ಬ್ಯುಸಿನೆಸ್ ಮತ್ತು ಕೆಸಿನೋ ವ್ಯಾಪಾರದ ಬಗ್ಗೆ ಅನೇಕ ಭರವಸೆಗಳನ್ನು ನೀಡಿದ್ದಾಳೆ.
ಹಾಗೆ ಹೂಡಿಕೆಗಳು ಮತ್ತು ಇನ್ನಿತರ ಕಾರಣಗಳನ್ನು ತಂದು, 2.52 ಕೋಟಿ ರೂ. ಹಣ ಮತ್ತು 2.50 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ 350 ಗ್ರಾಂ ಚಿನ್ನಾಭರಣಗಳನ್ನು ಪಡೆದಿದ್ದಳು. ಆದರೆ, ನಂತರ ಆಕೆಯು ಹಣವನ್ನು ಹಿಂದಿರುಗಿಸದೆ “ಹಣದ ಬಗ್ಗೆ ದೂರು ಅಥವಾ ಸಾಕ್ಷಿ ಏನಾದರೂ ಹೇಳಿದ್ರೆ ಅಷ್ಟೆ ಗೊತ್ತಲ್ಲಾ? ನಾನು ಡಿಕೆ ಸುರೇಶ್ ತಂಗಿ ನಿನ್ನ ಹಣ ವಾಪಸ್ ಕೊಡುವುದಿಲ್ಲ” ಎಂದು ಬೆದರಿಕೆ ಹಾಕಿದಳು.
ಈ ಪ್ರಕರಣ ಬೆಳಕಿಗೆ ಬರುವುದರೊಂದಿಗೆ, ವೈದ್ಯೆ ಡಾ. ಮಂಜುಳಾ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಐಶ್ವರ್ಯ ಗೌಡ, ಅವಳ ಪತಿ ಹಾಗೂ ಮತ್ತಿತರರು ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…
ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…
ಹಾವೇರಿ: ಹಾನಗಲ್ ಸರ್ಕಲ್ ಇನ್ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…