ಈ ಕಾಲದಲ್ಲಿ ಪ್ರತಿಭೆ ಮತ್ತು ಕ್ರಿಯೇಟಿವಿಟಿಗೆ ಯಾವುದೇ ವಿದ್ಯಾರ್ಹತೆ ಅಥವಾ ದೊಡ್ಡ ಹುದ್ದೆಗಳ ಅಗತ್ಯವಿಲ್ಲ ಎಂಬುದನ್ನು ಹಾಸನ ಜಿಲ್ಲೆಯ ಅರಸೀಕೆರೆಯ ಮೆಕ್ಯಾನಿಕ್ ಮೊಹಮ್ಮದ್ ಆರಿಫ್ ತಮ್ಮ ಅದ್ಭುತ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಕೇವಲ 4ನೇ ತರಗತಿ ಶಿಕ್ಷಣ ಪಡೆದಿರುವ ಆರಿಫ್, ಸಾಮಾನ್ಯ ಮಧ್ಯಮ ವರ್ಗದ ಜನರ ನೆಚ್ಚಿನ ಮಾರುತಿ 800 ಕಾರನ್ನು ಐಷಾರಾಮಿ ಲ್ಯಾಂಬೋರ್ಗಿನಿ ಮಾದರಿಯ ಸ್ಪೋರ್ಟ್ಸ್ ಕಾರಿನಂತೆ ಪರಿವರ್ತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯ ಹಳೇಬೀಡು ರಸ್ತೆಯ ನಿವಾಸಿಯಾಗಿರುವ ಮೊಹಮ್ಮದ್ ಆರಿಫ್ ಬಾಲ್ಯದಿಂದಲೇ ವಾಹನಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದರೂ, ಗ್ಯಾರೇಜ್ನಲ್ಲಿ ಮೆಕ್ಯಾನಿಕ್ ಕೆಲಸ ಕಲಿತು ತಮ್ಮ ಜೀವನವನ್ನು ಕಟ್ಟಿಕೊಂಡರು.
ವರ್ಷಗಳ ಅನುಭವದಿಂದ ಕಾರುಗಳ ತಾಂತ್ರಿಕ ಜ್ಞಾನವನ್ನು ಸಂಪಾದಿಸಿದ ಆರಿಫ್, ದುಬಾರಿ ವಿದೇಶಿ ಸ್ಪೋರ್ಟ್ಸ್ ಕಾರುಗಳನ್ನು ನೋಡಿ ಪ್ರೇರಿತರಾದರು. “ನಮ್ಮ ಕೈಯಾರೆ ಇಂತಹ ಕಾರನ್ನು ನಿರ್ಮಿಸಬಹುದಲ್ಲವೇ?” ಎಂಬ ಆಲೋಚನೆ ಅವರಲ್ಲಿ ಮೂಡಿತು. ಆದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾರು ಖರೀದಿಸುವ ಸಾಮರ್ಥ್ಯ ಇಲ್ಲದ ಕಾರಣ, ಕಡಿಮೆ ಬೆಲೆಯ ಹಳೆಯ ಮಾರುತಿ 800 ಕಾರನ್ನು ಖರೀದಿಸಿ ಅದನ್ನೇ ತಮ್ಮ ಕನಸಿನ ಪ್ರಾಜೆಕ್ಟ್ಗೆ ಆಯ್ಕೆ ಮಾಡಿಕೊಂಡರು.
ತಮ್ಮ ಗ್ಯಾರೇಜ್ನಲ್ಲೇ ಹಗಲು-ರಾತ್ರಿ ಶ್ರಮಿಸಿ, ಯಾವುದೇ ಆಧುನಿಕ ತಂತ್ರಜ್ಞಾನ ಅಥವಾ ದುಬಾರಿ ಯಂತ್ರೋಪಕರಣಗಳ ನೆರವಿಲ್ಲದೆ ಕಾರಿನ ಸಂಪೂರ್ಣ ಹೊರ ವಿನ್ಯಾಸವನ್ನು ಬದಲಾಯಿಸಿದರು. ಲ್ಯಾಂಬೋರ್ಗಿನಿ ಕಾರಿನ ವಿಶೇಷ ಆಕರ್ಷಣೆಯಾಗಿರುವ ಮೇಲಕ್ಕೆ ತೆರೆದುಕೊಳ್ಳುವ ಸಿಸರ್ ಡೋರ್ಸ್, ಆಕರ್ಷಕ ಮುಂಭಾಗದ ವಿನ್ಯಾಸ, ಸ್ಪೋರ್ಟಿ ಸ್ಪಾಯ್ಲರ್ ಹಾಗೂ ಆಧುನಿಕ ಎಲ್ಇಡಿ ಲೈಟ್ಗಳನ್ನು ಅಳವಡಿಸಿ ಕಾರಿಗೆ ಹೊಸ ರೂಪ ನೀಡಿದರು.
ಮಾರುತಿ 800 ಕಾರಿನ ಮೂಲ ಇಂಜಿನ್ನ್ನೇ ಉಳಿಸಿಕೊಂಡು, ಅದರ ಬಾಡಿ ಮತ್ತು ಇಂಟೀರಿಯರ್ ಅನ್ನು ಐಷಾರಾಮಿ ಸ್ಪೋರ್ಟ್ಸ್ ಕಾರಿನಂತೆ ಮರು ವಿನ್ಯಾಸಗೊಳಿಸಿದರು. ಈ ಸಂಪೂರ್ಣ ಪ್ರಾಜೆಕ್ಟ್ಗೆ ಸುಮಾರು 2 ರಿಂದ 3 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಹಲವು ತಿಂಗಳ ನಿರಂತರ ಪರಿಶ್ರಮದ ಫಲವಾಗಿ ಕಾರು ಸಿದ್ಧವಾಯಿತು.
ಈ ಕಾರು ರಸ್ತೆಗಿಳಿದಾಗ ಜನರ ಗಮನ ಸೆಳೆಯತೊಡಗಿತು. ಆರಿಫ್ ಅವರ ‘ದೇಶಿ ಲ್ಯಾಂಬೋರ್ಗಿನಿ’ಯನ್ನು ನೋಡಲು ಜನರು ಮುಗಿಬೀಳುತ್ತಿದ್ದು, ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರಿನ ವಿಡಿಯೋಗಳು ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಆರಿಫ್ ಅವರ ಪ್ರತಿಭೆಯನ್ನು ಮೆಚ್ಚುತ್ತಿದ್ದಾರೆ.
ಮೊಹಮ್ಮದ್ ಆರಿಫ್ ಅವರ ಈ ಸಾಧನೆ, ಕನಸು ಕಾಣುವವರಿಗೆ ವಿದ್ಯಾರ್ಹತೆ ಅಥವಾ ಹಣವೇ ಮುಖ್ಯವಲ್ಲ; ಪ್ರತಿಭೆ, ಪರಿಶ್ರಮ ಮತ್ತು ದೃಢ ಸಂಕಲ್ಪ ಇದ್ದರೆ ಅಸಾಧ್ಯವೆಂಬುದೇ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇಂತಹ ಪ್ರತಿಭಾವಂತರಿಗೆ ಸರ್ಕಾರ ಹಾಗೂ ಆಟೋಮೊಬೈಲ್ ಕ್ಷೇತ್ರದ ಪ್ರಮುಖ ಸಂಸ್ಥೆಗಳು ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ನೀಡಿದರೆ, ಜಾಗತಿಕ ಮಟ್ಟದ ಸಾಧನೆಗಳು ಇನ್ನಷ್ಟು ಮೂಡಿ ಬರಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…