Latest

ಅಂತರಿಕ್ಷ ತೇಲಾಟದ ನೋಟ: ಗಗನಯಾತ್ರಿ ಶುಭಾಂಶು ಶುಕ್ಲಾದಿಂದ ವಿಶಿಷ್ಟ ವಿಡಿಯೋ ಹಂಚಿಕೆ”

ದೆಹಲಿ, ಜುಲೈ 20: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 20 ದಿನಗಳ ಕಾಲ ಕಳೆದಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಭೂಮಿಗೆ ಹಿಂದಿರುಗಿದ ನಂತರ ತಮ್ಮ ಅಪರೂಪದ ಬಾಹ್ಯಾಕಾಶ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗುರುತ್ವಾಕರ್ಷಣೆಯಿಲ್ಲದ ಪರಿಸರದಲ್ಲಿ ತೇಲುತ್ತಿರುವ ತಮ್ಮ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದು, ಅದರ ಜೊತೆಗೆ ಬರೆದುಿಟ್ಟ ಮನೋವೀಕ್ಷಣಾತ್ಮಕ ಶಬ್ದಗಳು ನೆಟ್ಟಿಗರ ಮನ ಗೆದ್ದಿವೆ.

“ಐಎಸ್‌ಎಸ್‌ನಲ್ಲಿ ನಾವು ಸಮಯವನ್ನು ಹೇಗೆ ಉಪಯೋಗಿಸುತ್ತೇವೆ, ಸಂಶೋಧನೆಗಳನ್ನು ಹೇಗೆ ಮುನ್ನಡೆಸುತ್ತೇವೆ ಎಂಬುದರತ್ತ ಸಂಪೂರ್ಣ ಗಮನ ನೀಡಲಾಗುತ್ತಿತ್ತು. ಶುರುವಾದಾಗ ಗುರುತ್ವಾಕರ್ಷಣೆಯಿಲ್ಲದ ಈ ಪ್ರಪಂಚದಲ್ಲಿ ತೇಲುವುದು ಮತ್ತು ಚಲನೆ ನಿಯಂತ್ರಿಸುವುದು ಅಸಾಧಾರಣ ಸವಾಲಾಗಿತ್ತು. ಆದರೆ ಅನುಭವದಿಂದ ನಿಯಂತ್ರಣ ಕಲಿತೆ. ಈ ವಿಡಿಯೋದಲ್ಲಿ ನಾನು ಹಿಡಿದಕೊಂಡ ನಿಯಂತ್ರಣದ ನಂತರದ ಕ್ಷಣಗಳನ್ನು ನೀವು ನೋಡಬಹುದು” ಎಂದು ಶುಭಾಂಶು ಬರೆದುಕೊಂಡಿದ್ದಾರೆ.

ಅವರು ಬರೆದ ಮತ್ತೊಂದು ಪ್ರಮುಖ ಭಾಗದಲ್ಲಿ, “ಅಂತರಿಕ್ಷದಲ್ಲಿ ಸ್ವಲ್ಪ ಹೊಚ್ಚು ಎತ್ತಿದರೆ ದೇಹ ಚಲನೆಗೆ ಬರುತ್ತದೆ. ಆದ್ದರಿಂದ ನಿಶ್ಚಲವಾಗಿರುವುದು ದೊಡ್ಡ ಸವಾಲು. ಇದು ಭೂಮಿಯ ಮೇಲೆ ನಮ್ಮ ಮನಸ್ಸನ್ನು ಶಾಂತಪಡಿಸಬೇಕಾದ ಅಗತ್ಯದಂತೆ. ಕೆಲವೊಮ್ಮೆ ವೇಗದ ನಡುವೆ ನಿಲ್ಲುವುದು, ನಿಧಾನಗೊಳ್ಳುವುದು ಎಷ್ಟು ಅಗತ್ಯವೋ, ಅದೇ ರೀತಿಯಲ್ಲಿ ಇಲ್ಲಿ ನಿಶ್ಚಲತೆಯೂ ಕೌಶಲ್ಯವೇ ಆಗಿದೆ. ಗುರುತ್ವಾಕರ್ಷಣೆ ಇದ್ದರೂ ಇಲ್ಲದಿದ್ದರೂ, ಒಳಜಗತ್ತನ್ನು ಸಮತೋಲದಲ್ಲಿಟ್ಟುಕೊಳ್ಳುವುದು ದೊಡ್ಡ ಪಾಠ” ಎಂದು ಅವರು ಹಂಚಿಕೊಂಡಿದ್ದಾರೆ.

 

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

21 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

21 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

21 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

21 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

2 days ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

2 days ago