ದೆಹಲಿ, ಜುಲೈ 20: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 20 ದಿನಗಳ ಕಾಲ ಕಳೆದಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಭೂಮಿಗೆ ಹಿಂದಿರುಗಿದ ನಂತರ ತಮ್ಮ ಅಪರೂಪದ ಬಾಹ್ಯಾಕಾಶ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗುರುತ್ವಾಕರ್ಷಣೆಯಿಲ್ಲದ ಪರಿಸರದಲ್ಲಿ ತೇಲುತ್ತಿರುವ ತಮ್ಮ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದು, ಅದರ ಜೊತೆಗೆ ಬರೆದುಿಟ್ಟ ಮನೋವೀಕ್ಷಣಾತ್ಮಕ ಶಬ್ದಗಳು ನೆಟ್ಟಿಗರ ಮನ ಗೆದ್ದಿವೆ.
“ಐಎಸ್ಎಸ್ನಲ್ಲಿ ನಾವು ಸಮಯವನ್ನು ಹೇಗೆ ಉಪಯೋಗಿಸುತ್ತೇವೆ, ಸಂಶೋಧನೆಗಳನ್ನು ಹೇಗೆ ಮುನ್ನಡೆಸುತ್ತೇವೆ ಎಂಬುದರತ್ತ ಸಂಪೂರ್ಣ ಗಮನ ನೀಡಲಾಗುತ್ತಿತ್ತು. ಶುರುವಾದಾಗ ಗುರುತ್ವಾಕರ್ಷಣೆಯಿಲ್ಲದ ಈ ಪ್ರಪಂಚದಲ್ಲಿ ತೇಲುವುದು ಮತ್ತು ಚಲನೆ ನಿಯಂತ್ರಿಸುವುದು ಅಸಾಧಾರಣ ಸವಾಲಾಗಿತ್ತು. ಆದರೆ ಅನುಭವದಿಂದ ನಿಯಂತ್ರಣ ಕಲಿತೆ. ಈ ವಿಡಿಯೋದಲ್ಲಿ ನಾನು ಹಿಡಿದಕೊಂಡ ನಿಯಂತ್ರಣದ ನಂತರದ ಕ್ಷಣಗಳನ್ನು ನೀವು ನೋಡಬಹುದು” ಎಂದು ಶುಭಾಂಶು ಬರೆದುಕೊಂಡಿದ್ದಾರೆ.
ಅವರು ಬರೆದ ಮತ್ತೊಂದು ಪ್ರಮುಖ ಭಾಗದಲ್ಲಿ, “ಅಂತರಿಕ್ಷದಲ್ಲಿ ಸ್ವಲ್ಪ ಹೊಚ್ಚು ಎತ್ತಿದರೆ ದೇಹ ಚಲನೆಗೆ ಬರುತ್ತದೆ. ಆದ್ದರಿಂದ ನಿಶ್ಚಲವಾಗಿರುವುದು ದೊಡ್ಡ ಸವಾಲು. ಇದು ಭೂಮಿಯ ಮೇಲೆ ನಮ್ಮ ಮನಸ್ಸನ್ನು ಶಾಂತಪಡಿಸಬೇಕಾದ ಅಗತ್ಯದಂತೆ. ಕೆಲವೊಮ್ಮೆ ವೇಗದ ನಡುವೆ ನಿಲ್ಲುವುದು, ನಿಧಾನಗೊಳ್ಳುವುದು ಎಷ್ಟು ಅಗತ್ಯವೋ, ಅದೇ ರೀತಿಯಲ್ಲಿ ಇಲ್ಲಿ ನಿಶ್ಚಲತೆಯೂ ಕೌಶಲ್ಯವೇ ಆಗಿದೆ. ಗುರುತ್ವಾಕರ್ಷಣೆ ಇದ್ದರೂ ಇಲ್ಲದಿದ್ದರೂ, ಒಳಜಗತ್ತನ್ನು ಸಮತೋಲದಲ್ಲಿಟ್ಟುಕೊಳ್ಳುವುದು ದೊಡ್ಡ ಪಾಠ” ಎಂದು ಅವರು ಹಂಚಿಕೊಂಡಿದ್ದಾರೆ.
ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಹಳ್ಳಿಯಲ್ಲಿ ಹಾವು ಕಚ್ಚಿದ ಪರಿಣಾಮ ಬಾಲಕ ಮೃತಪಟ್ಟ ಘಟನೆ ದುಃಖಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ಪತ್ರೆಯ…
ಭಟ್ಕಳ: ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ…
ತುಮಕೂರು: ಪ್ರೇಮಿಗಳ ನಡುವಿನ ಮನಸ್ತಾಪ ಭೀಕರ ತಿರುವು ಪಡೆದುಕೊಂಡ ಪರಿಣಾಮ, ಯುವಕನೊಬ್ಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಕಾರಿನಲ್ಲೇ…
ಧಾರವಾಡ: ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಪತಿಗೆ ಧಾರವಾಡದ ನಾಲ್ಕನೇ…
ಮುಂಬೈ: ಮುಹರಂ ಮೆರವಣಿಗೆಯ ವೇಳೆ ಸಾರ್ವಜನಿಕರಿಗೆ ವಿಷಪ್ರಾಶನ ಮಾಡಿಸಲು ಸಂಚು ರೂಪಿಸಲಾಗಿದೆ ಎಂಬ ಶಂಕೆಯ ಮೇರೆಗೆ ಮುಂಬೈ ಪೊಲೀಸರು ಭಾರೀ…
ಬೆಂಗಳೂರು: ನಗರದ ಜೆ.ಪಿ. ನಗರದಲ್ಲಿ ಭಾನುವಾರ ಸಂಜೆ ರೌಡಿಶೀಟರ್ ರಾಜುಬಾಯ್ ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಸಾರ್ವಜನಿಕರ ಕಣ್ಣೆದುರೇ ಅಟ್ಟಾಡಿಸಿ ಭೀಕರವಾಗಿ…