Latest

ಅಂತರಿಕ್ಷ ತೇಲಾಟದ ನೋಟ: ಗಗನಯಾತ್ರಿ ಶುಭಾಂಶು ಶುಕ್ಲಾದಿಂದ ವಿಶಿಷ್ಟ ವಿಡಿಯೋ ಹಂಚಿಕೆ”

ದೆಹಲಿ, ಜುಲೈ 20: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 20 ದಿನಗಳ ಕಾಲ ಕಳೆದಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಭೂಮಿಗೆ ಹಿಂದಿರುಗಿದ ನಂತರ ತಮ್ಮ ಅಪರೂಪದ ಬಾಹ್ಯಾಕಾಶ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗುರುತ್ವಾಕರ್ಷಣೆಯಿಲ್ಲದ ಪರಿಸರದಲ್ಲಿ ತೇಲುತ್ತಿರುವ ತಮ್ಮ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದು, ಅದರ ಜೊತೆಗೆ ಬರೆದುಿಟ್ಟ ಮನೋವೀಕ್ಷಣಾತ್ಮಕ ಶಬ್ದಗಳು ನೆಟ್ಟಿಗರ ಮನ ಗೆದ್ದಿವೆ.

“ಐಎಸ್‌ಎಸ್‌ನಲ್ಲಿ ನಾವು ಸಮಯವನ್ನು ಹೇಗೆ ಉಪಯೋಗಿಸುತ್ತೇವೆ, ಸಂಶೋಧನೆಗಳನ್ನು ಹೇಗೆ ಮುನ್ನಡೆಸುತ್ತೇವೆ ಎಂಬುದರತ್ತ ಸಂಪೂರ್ಣ ಗಮನ ನೀಡಲಾಗುತ್ತಿತ್ತು. ಶುರುವಾದಾಗ ಗುರುತ್ವಾಕರ್ಷಣೆಯಿಲ್ಲದ ಈ ಪ್ರಪಂಚದಲ್ಲಿ ತೇಲುವುದು ಮತ್ತು ಚಲನೆ ನಿಯಂತ್ರಿಸುವುದು ಅಸಾಧಾರಣ ಸವಾಲಾಗಿತ್ತು. ಆದರೆ ಅನುಭವದಿಂದ ನಿಯಂತ್ರಣ ಕಲಿತೆ. ಈ ವಿಡಿಯೋದಲ್ಲಿ ನಾನು ಹಿಡಿದಕೊಂಡ ನಿಯಂತ್ರಣದ ನಂತರದ ಕ್ಷಣಗಳನ್ನು ನೀವು ನೋಡಬಹುದು” ಎಂದು ಶುಭಾಂಶು ಬರೆದುಕೊಂಡಿದ್ದಾರೆ.

ಅವರು ಬರೆದ ಮತ್ತೊಂದು ಪ್ರಮುಖ ಭಾಗದಲ್ಲಿ, “ಅಂತರಿಕ್ಷದಲ್ಲಿ ಸ್ವಲ್ಪ ಹೊಚ್ಚು ಎತ್ತಿದರೆ ದೇಹ ಚಲನೆಗೆ ಬರುತ್ತದೆ. ಆದ್ದರಿಂದ ನಿಶ್ಚಲವಾಗಿರುವುದು ದೊಡ್ಡ ಸವಾಲು. ಇದು ಭೂಮಿಯ ಮೇಲೆ ನಮ್ಮ ಮನಸ್ಸನ್ನು ಶಾಂತಪಡಿಸಬೇಕಾದ ಅಗತ್ಯದಂತೆ. ಕೆಲವೊಮ್ಮೆ ವೇಗದ ನಡುವೆ ನಿಲ್ಲುವುದು, ನಿಧಾನಗೊಳ್ಳುವುದು ಎಷ್ಟು ಅಗತ್ಯವೋ, ಅದೇ ರೀತಿಯಲ್ಲಿ ಇಲ್ಲಿ ನಿಶ್ಚಲತೆಯೂ ಕೌಶಲ್ಯವೇ ಆಗಿದೆ. ಗುರುತ್ವಾಕರ್ಷಣೆ ಇದ್ದರೂ ಇಲ್ಲದಿದ್ದರೂ, ಒಳಜಗತ್ತನ್ನು ಸಮತೋಲದಲ್ಲಿಟ್ಟುಕೊಳ್ಳುವುದು ದೊಡ್ಡ ಪಾಠ” ಎಂದು ಅವರು ಹಂಚಿಕೊಂಡಿದ್ದಾರೆ.

 

nazeer ahamad

Recent Posts

ಮದರಸಾದಿಂದ 24 ಮಕ್ಕಳು ಪರಾರಿ! ತುಮಕೂರಿನಲ್ಲಿ ಬಯಲಾಯ್ತು ಅಮಾನವೀಯ ಹಿಂಸೆ

ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…

8 hours ago

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

23 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

1 day ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

1 day ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

2 days ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

2 days ago