ಬೆಳಗಾವಿ ಜಿಲ್ಲೆ ಮುತಗಾ ಗ್ರಾಮದಲ್ಲಿ ವೃದ್ಧೆಯೊಬ್ಬರನ್ನು ಮೋಸಗೊಳಿಸಿ ಬಂಗಾರದ ಆಭರಣ ದೋಚಿದ ಘಟನೆ ನಡೆದಿದೆ. 75 ವರ್ಷದ ಉಮಕ್ಕ ರಾಮು ಕೇದಾರಿ ಎಂಬವರು ಈ ವಂಚನೆಯ ಬಲಿಯಾದವರು.
ಸೌತೆಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಉಮಕ್ಕ ಅವರ ಬಳಿ ಅಪರಿಚಿತನೊಬ್ಬ ಬಂದು, “ಅಂಚೆ ಕಚೇರಿಯಲ್ಲಿ ವಯೋವೃದ್ಧರಿಗೆ 6 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ನೀವು ಹೋಗಿ ಹಣ ಪಡೆಯಿರಿ” ಎಂದು ಮಾತನಾಡಿದ್ದಾನೆ. ತನ್ನನ್ನು ಪರಿಚಿತನಂತೆ ತೋರಿಸಿಕೊಂಡಿದ್ದ ಈ ವ್ಯಕ್ತಿ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ.
ನಂತರ ಒಂದು ಕಟ್ಟಡದ ಬಳಿ ತಂದು, “ಬಂಗಾರದ ಆಭರಣ ಧರಿಸಿ ಒಳಗೆ ಹೋದರೆ ಹಣ ಕೊಡಲ್ಲ. ಅವುಗಳನ್ನು ತೆಗೆದು ಕೊಡಿರಿ” ಎಂದು ಹೇಳಿ, ಉಮಕ್ಕ ಅವರ ಓಲೆ ಮತ್ತು ಬಳೆಗಳನ್ನು ತೆಗೆದುಕೊಂಡಿದ್ದಾನೆ. ವೃದ್ಧೆ ಆತನ ಮಾತು ನಂಬಿ ತನ್ನ ಆಭರಣಗಳನ್ನು ನೀಡಿದ ನಂತರ ಒಳಗೆ ಹೋಗುತ್ತಿದ್ದಂತೆ, ವಂಚಕ ಅಲ್ಲಿಂದ ನಾಪತ್ತೆಯಾಗಿದ್ದಾನೆ.
ತಕ್ಷಣವೇ ಎಚ್ಚೆತ್ತುಕೊಂಡ ಉಮಕ್ಕ ಅವರು ಮಾರಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಸಾರ್ವಜನಿಕರಲ್ಲಿ ಎಚ್ಚರಿಕೆ ವಹಿಸಲು ಪೊಲೀಸರ ಮನವಿ ಮಾಡಿದ್ದಾರೆ.
ಬೆಂಗಳೂರು, ಮೇ 3: ತಂತ್ರಜ್ಞಾನ ನಗರಿ ಬೆಂಗಳೂರಿಗೆ ಇದೀಗ ಕ್ರೈಂ ಸಿಟಿ ಎಂಬ ಬಿರುದೂ ಜೋಡಿಸುತ್ತಿರುವಂತಾಗಿದೆ. ನೈಸ್ ರಸ್ತೆಯ ಸಮೀಪ…
ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ 9ನೇ ಮುಖ್ಯ ರಸ್ತೆಯಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಬ್ರೇಕ್ ಫೇಲ್ ಆದ ಆಯಂಬುಲೆನ್ಸ್ವೊಂದು ತರಕಾರಿ…
ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ತಲವಾರು ತೋರಿಸಿ ಇಬ್ಬರು ನಾಗರಿಕರನ್ನು ಬೆದರಿಸಿರುವ ಘಟನೆ ವರದಿಯಾಗಿದೆ. ಸಂಘಪರಿವಾರದ ಕಾರ್ಯಕರ್ತ…
ಬೆಂಗಳೂರು: ನಗರದ ಟಿ. ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ನಡು ರಸ್ತೆಯಲ್ಲೇ ಯುವತಿಯೊಬ್ಬರ ಕೈ ಹಿಡಿದು ಕಿರುಕುಳ ನೀಡಿದ ಯುವಕನ ವಿರುದ್ದ…
ರಾಯಚೂರು: ಇತ್ತೀಚೆಗೆ ಉದ್ಘಾಟನೆಯಾದ ನೂತನ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಬಂದಿದೆ ಎಂಬ ಇಮೇಲ್ ಸಂದೇಶ one ಆತಂಕದ ವಾತಾವರಣ…
ಉಡುಪಿ: ಅಕ್ರಮ ಮರಳು ಸಾಗಣೆಯನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್…