ಬಿಹಾರದ ಬೆಟ್ಟಯ್ಯ ಪೊಲೀಸ್ ಲೈನ್ನಲ್ಲಿ ಶನಿವಾರ ರಾತ್ರಿ ಎಡವಟ್ಟಾದ ಒಂದು ವೈಯಕ್ತಿಕ ಜಗಳ ದುರ್ಘಟನೆಗೆ ಕಾರಣವಾಯಿತು. ಗಸ್ತಿನಲ್ಲಿ ಇದ್ದ ಇಬ್ಬರು ಕಾನ್ಸ್ಟೇಬಲ್ಗಳ ನಡುವೆ ಉಂಟಾದ ಮಾತಿನ ಚಕಮಕಿ ಕೊನೆಗೆ ಗುಂಡು ಹಾರಿಕೆಯಿಂದ ಒಬ್ಬ ಕಾನ್ಸ್ಟೇಬಲ್ ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ.
ಸುದ್ದಿಯ ಪ್ರಕಾರ, ರಾತ್ರಿ 10.30ರ ವೇಳೆಗೆ ಕಾನ್ಸ್ಟೇಬಲ್ ಸರ್ವಜೀತ್ ಕುಮಾರ್ ಹಾಗೂ ಸೋನು ಕುಮಾರ್ ನಡುವೆ ಮಾತಿಗೆ ಮಾತು ಬೆಳೆದು, ಜಗಳ ತೀವ್ರಗೊಂಡಿತು. ಈ ನಡುವೆ ಸೋನು ಕುಮಾರ್ ಮಾತುಮಾತಿಗೆ ಹೋಗಿ ತಾಳ್ಮೆ ಕಳೆದುಕೊಂಡು ಹಲ್ಲೆಗೆ ಮುಂದಾದರು. ಮನಸ್ಥಿತಿ ಅಸ್ತವ್ಯಸ್ತಗೊಂಡ ಸೋನು ಕುಮಾರ್, ತಮ್ಮ ಸರ್ವಿಸ್ ರೈಫಲ್ ಬಳಸಿ ಸರ್ವಜೀತ್ ಕುಮಾರ್ ಮೇಲೆಗೆ ಗುಂಡು ಹಾರಿಸಿದರು.
ಸ್ಥಳದಲ್ಲೇ ಸರ್ವಜೀತ್ ಕುಮಾರ್ ಮೃತಪಟ್ಟಿದ್ದು, ಘಟನೆಯ ತೀವ್ರತೆಯನ್ನು ಮನಗಂಡ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದರು. ಪರಿಶೀಲನೆ ವೇಳೆ 11 ಗುಂಡು ಶೆಲ್ಸ್ಗಳು ಮತ್ತು ಒಂದು ಜೀವಂತ ಬುಲೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಘಟನೆ ಬೆಟ್ಟಯ್ಯ ಪೊಲೀಸ್ ಲೈನ್ನಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಸಿಬ್ಬಂದಿಯ ಮಾನಸಿಕ ಸ್ಥಿತಿಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಹತ್ಯೆಗೆ ಕಾರಣವಾದ ನಿಖರವಾದ ಕಾರಣ ಅನಾವರಣಗೊಳಿಸುವ ಪ್ರಯತ್ನ ನಡೆಯುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…
ಕೊಡಗು ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 68 ವರ್ಷದ ಚೆಂಗಪ್ಪ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 20…
ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದ ಗೋಡೆ ಕುಸಿತದಿಂದ ಸಂಭವಿಸಿದ ಭೀಕರ ದುರಂತದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,…
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…
ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…
ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…