Latest

ದುಡ್ಡು ಮಾಡಿದ್ದ ಆಂಟಿಯನ್ನು ಪಟಾಯಿಸಿಕೊಂಡು ಓಡಿ ಹೋದ 3 ಮಕ್ಕಳ ತಂದೆ; ಸಿಕ್ಕಿಬಿದ್ದಾಗ ನಡು ಬೀದಿಯಲ್ಲೇ ಶುರುವಾಯಿತು ಜಗಳ.

ಬೆಳಗಾವಿ ಜಿಲ್ಲೆಯ ಮಾರಿಹಾಳದಲ್ಲಿ ಅಚ್ಚರಿ ಮೂಡಿಸುವ ಘಟನೆಯೊಂದು ನಡೆದಿದ್ದು, ಬಸವರಾಜ್ ಸೀತಿಮನಿ ಎಂಬ ವ್ಯಕ್ತಿ ತನ್ನ ಸ್ನೇಹಿತ ಆಸೀಫ್ ಪತ್ನಿ ಮಾಸಾಬಿ ಜತೆಗೆ ಪರಾರಿಯಾಗಿದ್ದ. ಈ ಘಟನೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ, ಈ ಜೋಡಿ ಈಗ ಬೆಳಗಾವಿಗೆ ಮರಳಿದ್ದು, ಬಸವರಾಜನ ಪತ್ನಿ ವಾಣಿಶ್ರೀ ಅವರ ಕಣ್ಣಿಗೆ ಬಿದ್ದಿದ್ದಾರೆ.

ನಡುಬೀದಿಯಲ್ಲಿ ಜಗಳ, ಹೊಡೆದಾಟ

ಬೆಳಗಾವಿಯ ಕೊಲ್ಲಾಪುರ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಸವರಾಜ್ ಮತ್ತು ಮಾಸಾಬಿಯನ್ನು ಕಂಡ ವಾಣಿಶ್ರೀ, ಕೋಪೋದ್ರಿಕ್ತಳಾಗಿ ನೇರವಾಗಿ ಮಾಸಾಬಿಯ ಮುಂದೆ ಹೋಗಿ ತಮ್ಮ ಗಂಡನನ್ನು ಮತ್ತು ಮಕ್ಕಳನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಮಾತಿನ ಚಕಮಕಿ ಹೆಚ್ಚಾಗಿ, ಅದು ವಾಗ್ವಾದಕ್ಕೆ ತಿರುಗಿ, ಕೊನೆಗೆ ಇಬ್ಬರು ಮಹಿಳೆಯರು ಬೀದಿಯಲ್ಲೇ ಜಡೆ ಹಿಡಿದು ಹೊಡೆದಾಡಲು ಶುರುವಿಟ್ಟಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಾರ್ವಜನಿಕರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಅವರನ್ನು ತಮ್ಮ ತಮ್ಮ ಮನೆಗಳಿಗೆ ಕಳುಹಿಸಿದ್ದಾರೆ.

ಘಟನೆ ಹಿನ್ನಲೆ

ಬಸವರಾಜ್ ಸೀತಿಮನಿ, ಮದುವೆಯಾದ ವ್ಯಕ್ತಿಯಾಗಿದ್ದು, ಮೂವರು ಮಕ್ಕಳ ತಂದೆಯಾಗಿದ್ದ. ಆದರೆ, ಅವನು ತನ್ನ ಸ್ನೇಹಿತ ಆಸೀಫ್ ಪತ್ನಿ ಮಾಸಾಬಿ ಜತೆಗೆ ಪರಾರಿಯಾಗಿದ್ದ. ಮಾಸಾಬಿ ತನ್ನ ಎರಡು ಮಕ್ಕಳನ್ನು ಕೊಂಡೊಯ್ಯುವುದರ ಜೊತೆಗೆ, 60 ಗ್ರಾಂ ಚಿನ್ನ, ಐದು ಲಕ್ಷ ರೂಪಾಯಿ ನಗದು, ಸೈಟ್ ದಾಖಲೆಗಳು, ಕಾರು ಹಾಗೂ ಮನೆಗೆ ಸೇರಿದ ಹಲವು ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಳು. ಬಸವರಾಜ್ ತನ್ನೊಬ್ಬ ಮಗನನ್ನು ಕರೆದುಕೊಂಡು ಹೋಗಿರುತ್ತಾನೆ.

ಆಕೆಯ ಗಂಡ ಆಸೀಫ್, ತನ್ನ ಆಸ್ತಿ ಕಳೆದುಕೊಂಡು ಕಂಗಾಲಾಗಿದ್ದನು. ಆತ ತನ್ನ ಪತ್ನಿಯನ್ನು ಹುಡುಕಲು ಜನವರಿ 2ರಂದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದ.

ಮತ್ತೊಂದೆಡೆ, ವಾಣಿಶ್ರೀ ಹಲವು ವರ್ಷಗಳಿಂದ ಪತಿಯ ಹಿಂಸೆ ಅನುಭವಿಸುತ್ತಾ ಇದ್ದರೂ, ಗಂಡನ ಈ ವರ್ತನೆಯಿಂದ ಆತಂಕಗೊಂಡು, ತನ್ನ ಇಬ್ಬರು ಮಕ್ಕಳೊಂದಿಗೆ ಬೀದಿಪಾಲಾಗಿದ್ದಳು.

ಈಗ, ಈ ಜೋಡಿ ಮತ್ತೆ ಬೆಳಗಾವಿಗೆ ಮರಳಿರುವ ಕಾರಣ, ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಈ ಪ್ರಕರಣಕ್ಕೆ ಮುಂದೆ ಯಾವ ತಿರುವು ಸಿಗಲಿದೆ ಎಂಬುದು ನೋಡಬೇಕಾಗಿದೆ.

nazeer ahamad

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

14 hours ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

14 hours ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

14 hours ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

14 hours ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

15 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

1 day ago