World

ಅನಾರೋಗ್ಯದ ಸ್ಥಿತಿಯಲ್ಲಿದ್ದ ಮರಿಯನ್ನು ಬಾಯಲ್ಲಿ ಹಿಡಿದು ವೈದ್ಯರ ಬಳಿ ಕೊಂಡೊಯ್ದ ನಾಯಿ..!

ತಾಯಿ ನಾಯಿ ತನ್ನ ಪ್ರಜ್ಞಾಹೀನ ಮರಿಯನ್ನು ತನ್ನ ಬಾಯಲ್ಲಿ ಹಿಡಿದು ಸಮೀಪದ ಪಶುವೈದ್ಯಾಲಯಕ್ಕೆ ಕರೆದೊಯ್ದ ಘಟನೆಯ ವಿಡಿಯೋ ಡಾಕ್ಟರ್‌ಗಳನ್ನೂ ಹಾಗೂ ಜನರನ್ನು ಅಚ್ಚರಿಗೊಳಿಸಿದೆ. ವೀಡಿಯೋದಲ್ಲಿ ನಾಯಿ ತನ್ನ ಮರಿಯನ್ನು ಬಾಯಲ್ಲಿ ಹಿಡಿದು ನೇರವಾಗಿ ಆರೋಗ್ಯ ಕೇಂದ್ರಕ್ಕೆ ಹೋಗುವ ದೃಶ್ಯವಿದೆ.

ಈ ಘಟನೆ ಜನವರಿ 13ರಂದು ಟರ್ಕಿಯಲ್ಲಿನ ಬೇಯ್ಲಿಕ್‌ಡುಸು ಆಲ್ಫಾ ವೆಟರಿನರಿ ಕ್ಲಿನಿಕ್‌ನಲ್ಲಿ ನಡೆದಿದೆ. ತಾಯಿ ನಾಯಿ ತನ್ನ ಮರಿಯನ್ನು ಬಾಯಲ್ಲಿ ಹಿಡಿದು ಆತುರದಿಂದ ವೈದ್ಯರ ಸಹಾಯಕ್ಕಾಗಿ ಕ್ಲಿನಿಕ್‌ಗೆ ಕರೆದೊಯ್ದಿದೆ.

ವೀಡಿಯೋದಲ್ಲಿ ಏನಿದೆ?
ವೀಡಿಯೋವು ನಾಯಿ ತನ್ನ ಮರಿಯೊಂದಿಗೆ ಕ್ಲಿನಿಕ್‌ಗೆ ಹೋಗುತ್ತಿರುವ ದೃಶ್ಯದಿಂದ ಆರಂಭವಾಗುತ್ತದೆ. ತಾಯಿ ನಾಯಿ ತನ್ನ ಮರಿಯ ಜೀವವನ್ನು ರಕ್ಷಿಸಲು ಅಗತ್ಯ ವೈದ್ಯಕೀಯ ಸಹಾಯವನ್ನು ಪಡೆಯಲು ಸಮಯ ವೃಥಾ ಮಾಡದೆ, ಬಾಯಲ್ಲಿ ಹಿಡಿದು ಕ್ಲಿನಿಕ್ ಬಾಗಿಲಿಗೆ ತಲುಪಿದೆ.

ಮರಿ ಬದುಕಿ ಉಳಿಯಿತು
ತಾಯಿಯ ಪ್ರಯತ್ನ ವ್ಯರ್ಥವಾಗಿಲ್ಲ. ವೈದ್ಯರು ಮರಿಯನ್ನು ಪುನಜೀವ ನೀಡಲು ಯಶಸ್ವಿಯಾದರು. ಮರಿಯು ಪ್ರಜ್ಞಾಹೀನ ಮತ್ತು ತಾಪಮಾನ ಕಡಿಮೆಯಾದ ಸ್ಥಿತಿಯಲ್ಲಿ ಕ್ಲಿನಿಕ್‌ಗೆ ತಲುಪಿತ್ತು. ವರದಿಗಳ ಪ್ರಕಾರ, ಈ ಮರಿ ತನ್ನ ಸಹೋದರನೊಂದಿಗೆ ಈಗ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ತಾಯಿ ನಾಯಿ ಮತ್ತು ಈ ಎರಡು ಮರಿಗಳು ಈಗ ವೈದ್ಯಕೀಯ ತಪಾಸಣೆಯಡಿಯಲ್ಲಿ ಸಾಕಲ್ಪಡುತ್ತಿವೆ.

ವೈದ್ಯರ ಮಾತು
ಹೆಲ್ತ್‌ಕೇರ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿರುವ ಸ್ಟಾಫ್ ಸದಸ್ಯರೊಬ್ಬರು ನಾಯಿ ಬಾಗಿಲಲ್ಲಿ ನಿಂತಿರುವುದನ್ನು ನೋಡಿ ತಕ್ಷಣ ಬಾಗಿಲು ತೆರೆಯುತ್ತಾರಂತೆ. “ನಾಯಿ ತನ್ನ ಬಾಯಲ್ಲಿ ಮರಿ ಹಿಡಿದು ಬಂದು, ಮರಿಯನ್ನು ನೆಲಕ್ಕೆ ಇಡುತ್ತಿರುವುದನ್ನು ನೋಡಿದಾಗ ತಕ್ಷಣ ಪರಿಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ವೆಟರಿನರಿಯನ್ ಬತುರಾಲ್‌ಪ್ ಡೊಗನ್ ತಿಳಿಸಿದ್ದಾರೆ.

ಮರಿ “ಹಿಮದಂತೆ ಶೀತವಾಗಿತ್ತು” ಮತ್ತು ಚಲನೆ ಇಲ್ಲದೆ ಇತ್ತು. ಪ್ರಾರಂಭದಲ್ಲಿ ಡೊಗನ್ ಮತ್ತು ಅವರ ಸಹಚರ ಎಮಿರ್, ಮರಿ ಮೃತಪಟ್ಟಿರಬಹುದು ಎಂದು ಭಾವಿಸಿದ್ದರು. ಆದರೆ, ಮರಿ ಹೃದಯ ಚಟುವಟಿಕೆ ಎಷ್ಟು ನಿಧಾನವಾಗಿದ್ದರೂ ಅದು ಇನ್ನೂ ಬದುಕಿರುವುದು ದೃಢಪಟ್ಟಿತು.

“ಹೃದಯದ ಸ್ಪಂದನೆ ಇಷ್ಟು ನಿಧಾನವಾಗಿತ್ತು, ನಾನು ನನ್ನ ಸ್ಟೆಥಸ್ಕೋಪ್ ಮೂಲಕ ಅದನ್ನು ಕೇಳಲು ಸಾಧ್ಯವಾಗಲಿಲ್ಲ. ಆದರೆ, ಸೂಜಿಯಿಂದ ಪರಿಶೀಲಿಸಿದಾಗ ಹೃದಯ ನಿಧಾನವಾಗಿ ಬಡಿತ ಹೊಡೆಯುತ್ತಿರುವುದು ಗಮನಕ್ಕೆ ಬಂತು,” ಎಂದು ಡೊಗನ್ ಹೇಳಿದರು. ಈ ಸಣ್ಣ ಸುಳಿವಿನಿಂದ ಅವರು ಮರಿಯ ಜೀವ ಉಳಿಸಲು ಪ್ರಯತ್ನ ನಡೆಸಿದರು. ತಾಯಿ ನಾಯಿ ತನ್ನ ಮರಿಯು ಬದುಕುವ ನಿರೀಕ್ಷೆಯೊಂದಿಗೆ ಡಾಕ್ಟರ್‌ಗಳ ಬಾಗಿಲಿಗೆ ಕರೆದೊಯ್ದ ಉತ್ಸಾಹವು ಅರ್ಥಪೂರ್ಣವಾಯಿತು.

ಭ್ರಷ್ಟರ ಬೇಟೆ

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

8 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

13 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

13 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

13 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

13 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

18 hours ago