Latest

ಬೇಕರಿ ತಿನಸು ಪ್ರಿಯರೇ ಎಚ್ಚರ; ಅಯ್ಯಂಗಾರ್ ಬೇಕರಿಯಲ್ಲಿ ಬೂಸ್ಟ್ ಬಂದ ಬ್ರೆಡ್ಡಿನಿಂದ ಕೇಕ್.

ಧಾರವಾಡ : ಜಿಲ್ಲೆಯ ತಾಲೂಕಿನಾದ್ಯಂತ ಹಳ್ಳಿ_ಹಳ್ಳಿಗಳಲ್ಲಿ ತಲೆ ಎತ್ತಿರುವ ಬೆಂಗಳೂರು ಅಯ್ಯಂಗಾರ್ ಬೇಕರಿ ಎಂಬ ತಿನಸಿನ ಉಗ್ರಾಣ… ಇಲ್ಲಿ ಬ್ರೆಡ್, ಕರಿದ ತಿನಸಿನ ಖಾದ್ಯ ಪದಾರ್ಥಗಳು, ಕಲಬೆರಕೆ ಕ್ರೀಮ್ ಬಳಿಸಿದ ಡಿಸೈನ್ ಕೇಕ್, ಒಂದಿಷ್ಟು ಆರೊಗ್ಯಕ್ಕೆ ಮಾದಕವಾದ ರಾಸಾಯನಿಕ ಮಿಶ್ರಿತ ತಂಪಾದ ಪಾಣಿಯಗಳು, ಈ ತರಹದ ತಿನಿಸುಗಳಿಂದ ರಂಗುರಂಗಿನ ಲೈಟ್‌ ಬೆಳಕಿನಿಂದ ಕೂಡಿದ ಉಗ್ರಾಣ.

ಆರೋಗ್ಯ ಇಲಾಖೆಗಳು ಎಷ್ಟೆ ಹೇಳಿದರು ಕೇಳದ ಜನ. ಇದನ್ನೆ ಬಂಡವಾಳ ಮಾಡಿಕೊಂಡ ಇವರುಗಳು ಮನಸ್ಸಿಗೆ ಬಂದಂತೆ ಬೇಜವಾಬ್ದಾರಿತನದಿಂದ ತಯಾರಿಸಿದ ಖಾದ್ಯ ಪದಾರ್ಥಗಳು, ಇದನ್ನು ಉಪಯೋಸುವುದರಿಂದ ಆರೋಗ್ಯದ ಮೇಲೆ ಬಾರಿ ಪ್ರಮಾಣದ ಹಾನಿಕಾರಕ. ಗೊತ್ತಿದ್ದೊ ಗೊತ್ತಿಲ್ಲದೊ ಸಾರ್ವಜನಿಕರು ಮೊರೆಹೊಗಿರುವುದು ಬೆಸರದ ಸಂಗತಿ. ಹಿಗೊಂದು ತಿನಸಿನ ಉಗ್ರಾಣ ವಿಶೇಷವಾಗಿ ಕಂಡಿದ್ದು ಧಾರವಾಡ ಜಿಲ್ಲೆಯ ಹೇಬ್ಬಳ್ಳಿ ಗ್ರಾಮದಲ್ಲಿ ಗ್ರಾಮಪಂಚಾಯತ ಎದರುಗಡೆ ಇರುವ ಕಾಂಪ್ಲೆಕ್ಸ್ ನಲ್ಲಿ ಬೆಂಗಳೂರು ಅಯ್ಯಂಗಾರ್ ಬೆಕರಿ ಕೆಕ್ ಪ್ಯಾಲೆಸ್ ಅಂತಾ ಬೋರ್ಡ ತಗಲಾಕೊಂಡು ಸಾರ್ವಜನಿಕರಿಗೆ ಹಾಡು ಹಗಲಿನಲೆ ವಿಷ ತಿನಸುತ್ತಿದ್ದಾರೆ . ಕಲಬೆರಕೆ ಮಿಶ್ರಿತ ಕ್ರೀಮ್ ಬಳಸಿದ ಕೇಕ್ ಶಿಲ್ಕು ಉಳಿದ ಕೆಟ್ಟ ಬ್ರೇಡ್‌ ಬಳಸಿ ಕೇಕ್ ತಯಾರಿಸಿ ರಾತ್ರಿ ಹೊತ್ತು ಒಯ್ಯುವ ಗ್ರಾಹಕರಿಗೆ ಮೋಸ ಮಾಡುವುದು ಇವರಿಗೆ ಹೊಸದೆನ್ನಲ್ಲ .

ಸಾಮಾನ್ಯವಾಗಿ ರಾತ್ರಿ ಸಮಯದಲ್ಲೆ ಜನ್ಮ ದಿನ ಆಚರಿಸುವುದು. ಹಳ್ಳಿ ಜನ ಜೀವನದ ಶೈಲಿ . ಅದರಂತೆ ದಿನಾಂಕ 16/ 02 / 2023 ರಂದು ಎಲ್ಲರಿಗೂ ತಿಳಿದಿರುವಂತೆ “ಡಿ .ಬಾಸ್ . ದರ್ಶನ ರವರ ಜನ್ಮದಿನವಿದ್ದು ಶಾಲಾ ಮಕ್ಕಳು ಇವರ ಅಂಗಡಿಯಲ್ಲಿ ಕೇಕ್ ಖರಿದಿಸಿದ್ದು ತಂದು ಡಿ ಬಾಸ್ ರವರ ಹುಟ್ಟುಹಬ್ಬವನ್ನು ಆಚರಿಸಿ ಕೇಕ್ ತಿಂದು ಸಂಬ್ರಮಿಸಿದ್ದು ಮರುದಿನ ಇ‌ನ್ನೂಳಿದ ಕೇಕ್ ಬೆಳಕಿನಲ್ಲಿ ನೋಡಿ ಮಕ್ಕಳು ಮುಜಗೂರಗೊಂಡು ವಾಂತಿ ಬೆದಿ ಮಾಡಿಕೊಂಡಿರುತ್ತಾರೆ. ಕೇಕ್ ಮಾಡುವುದಕ್ಕೆ ಬಳಸಿರುವ ಬ್ರೆಡ್ ಒಳಗೆಲ್ಲ ಬೂಸ್ಟ್ ಬಂದು ಕಪ್ಪಾಗಿರುತ್ತದೆ. ರಾತ್ರಿಯ ಸಮಯದಲ್ಲಿ ಮಕ್ಕಳು ಇದನ್ನು ಕ್ರೀಮ್ ಎಂದು ಭಾವಿಸಿ ತಿಂದಿರುತ್ತಾರೆ ಬೆಳಗ್ಗೆ ಎದ್ದು ನೋಡಿದ ಮೇಲೆ ಇವರಿಗೆ ಗೊತ್ತಾಗಿರುವುದು ಕೇಕಿನ ಒಳಗೆಲ್ಲ ಬೂಸ್ಟ್ ಬಂದಿದೆ ಎಂದು.

ಸದ್ಯ ಮಕ್ಕಳಿಗೆ ಯಾವುದೇ ರೀತಿಯ ಆರೊಗ್ಯದಲ್ಲಿ ತೊಂದರೆಯಾಗಿಲ್ಲ. ಈ ವಿಚಾರವನ್ನು ಸ್ಥಳೀಯರು ಪ್ರಶ್ನಿಸಲು ಅಂಗಡಿಯವರ ಬಳಿಗೆ ಹೋದರೆ ಅದಕ್ಕೂ ಇವರಿಗೂ ಸಂಬಂಧವೇ ಇಲ್ಲದವರ ಹಾಗೆ ಅಂಗಡಿಯವರ ವರ್ತಿಸಿದ್ದಾರೆ. ಮುಗ್ದ ಜನರ ಆರೋಗ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಫುಡ್ ಇನ್ಸ್ಪೆಕ್ಟರ್ ಇಂತಹ ಬೇಜವಾಬ್ದಾರಿ ಅಂಗಡಿ ಮಾಲಕರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ವರದಿ : ಚರಂತಯ್ಯ ಹಿರೇಮಠ

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

17 hours ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

17 hours ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

17 hours ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

17 hours ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

17 hours ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

17 hours ago