Latest

ಹುಲಸೂರ ಬಳಿ ಹೋರಿಗಳ ಸಾಗಣೆ ತಡೆ: ದಾಖಲೆ ಇಲ್ಲದಿದ್ದರೆ ಕಾನೂನು ಕ್ರಮ ಎಚ್ಚರಿಕೆ..!

ಬಸವಕಲ್ಯಾಣಕ್ಕೆ ಹೋರಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ಘಟನೆಯೊಂದು ಶನಿವಾರ ಹುಲಸೂರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಗಡಿಗೌಡಗಾಂವ ಗ್ರಾಮದ ರೈತನಿಗೆ ಸೇರಿದ ಎನ್ನಲಾದ ಎರಡು ಹೋರಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೇಲೂರು ಗ್ರಾಮದ ಯುವಕರು ಮಧ್ಯದಲ್ಲಿ ತಡೆದು, ಶಂಕಿತವಾಗಿ ಪರಿಶೀಲನೆ ನಡೆಸಿದರು.

ಪಶುಗಳ ಆರೋಗ್ಯ ಸ್ಥಿತಿ ತಿಳಿಯಲು ಅವರು ಹುಲಸೂರ ಪಶು ಚಿಕಿತ್ಸಾಲಯಕ್ಕೆ ಕರೆದೊಯ್ದು ವೈದ್ಯರ ಪರಿಶೀಲನೆಗೆ ಒಳಪಡಿಸಿದರು. ಬಳಿಕ ಪ್ರಕರಣವನ್ನು ಹುಲಸೂರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಿಎಸ್‌ಐ ಶಿವಪ್ಪ ಮೇಟಿ ಅವರು, “ವಾಹನ ಹಾಗೂ ಹೋರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ. ರೈತರು ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಜಾನುವಾರುಗಳನ್ನು ಮರಳಿ ನೀಡಲಾಗುತ್ತದೆ. ದಾಖಲೆಗಳ ಕೊರತೆಯಿದ್ದಲ್ಲಿ ಕಾನೂನು ಕ್ರಮ ಕೈಗೊಂಡು ಗೋ ಶಾಲೆಗೆ ಜಾನುವಾರುಗಳನ್ನು ವರ್ಗಾಯಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಈ ವೇಳೆ ತಡೆಪಡೆ ಕಾರ್ಯದಲ್ಲಿ ಭಾಗವಹಿಸಿದ್ದವರು – ಬೇಲೂರು ಗ್ರಾಮದ ಯುವಕರು ಆಕಾಶ ಬಿದ್ಮನೆ, ಪ್ರದೀಪ ಕವಳೆ, ಸಿದ್ದು ಪಾಟೀಲ್, ಮಲ್ಲಿಕಾರ್ಜುನ ಬರಗಲೆ, ರೇವಣಸಿದ್ದ ಬರಗಲೆ, ಶರಣು ತೋಗಲೂರೆ, ಜೊತೆಗೆ ಹುಲಸೂರ ಬಜರಂಗದಳ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಮಂಗಾ, ವಿಜಯಸ್ವಾಮಿ, ಬಸವರಾಜ ರಗಟ್ಟೆ, ಅಜಯ ಚಾಕೋತೆ, ಅವಿನಾಶ ಮೇತ್ರೆ, ಪ್ರಜ್ವಲ್ ಸಜ್ಜನ್, ನಾಗೇಶ ಭರಮಶೇಟೆ, ಬಾಬು ವತಾರೆ, ಚನ್ನವೀರಸ್ವಾಮಿ ಹಾಗೂ ಮಲ್ಲಿಕಾರ್ಜುನ ಪಾರಶೇಟೆ ಉಪಸ್ಥಿತರಿದ್ದರು.

ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಜಾನುವಾರು ಸಾಗಾಣಿಕೆಯಲ್ಲಿ ಎಚ್ಚರತೆ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

nazeer ahamad

Recent Posts

ಗದಗದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ದೂರು; ಎಫ್‌ಐಆರ್ ವಿಳಂಬ ಆರೋಪ

ಗದಗ ಜಿಲ್ಲೆಯ ಡಿವೈಎಸ್ಪಿ ಮುರ್ತುಜಾ ಖಾದ್ರಿ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಗಡದ ವಿರುದ್ಧ ಗದಗ ಜೆಎಂಎಫ್‌ಸಿ…

36 minutes ago

ರಾಪಿಡೋ, ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆ ನಿಷೇಧಕ್ಕೆ ಆಗ್ರಹ; ಜಿಲ್ಲಾಧಿಕಾರಿಗೆ ಶಿರಸಿ ಆಟೋ ಚಾಲಕರ ಸಂಘ ಮನವಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓಲಾ, ಉಬರ್ ಹಾಗೂ ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿ…

38 minutes ago

ಶಿರಸಿ ಬಸ್ ನಿಲ್ದಾಣದಲ್ಲಿ 1.59 ಲಕ್ಷ ರೂ. ಚಿನ್ನಾಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು; ಬೆಂಗಳೂರು ಮೂಲದ ಮಹಿಳೆ ಬಂಧನ

ಶಿರಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಶಿರಸಿ ನಗರ…

40 minutes ago

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

19 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

24 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

24 hours ago