Latest

ಅವ್ಯವಸ್ಥೆಗೆ ಗುರಿಯಾದ ಬಾಲಕರ ವಸತಿ ನಿಲಯ; ಕಂಡರೂ ಕಾಣದಂತಿರುವ ನಾಲಾಯಕ್ ಅಧಿಕಾರಿಗಳು!

ಸಿಂದಗಿ ತಾಲೂಕಿನ ಶ್ರೀ ಡಿ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸಿಂದಗಿ ಟೌನ್ ಇದರ ಪರಿಸ್ಥಿತಿ ನೋಡಿದರೆ ಎದೆ ಜಲ್ ಎನ್ನುವ ರೀತಿ ಇದೆ.

ಇಲ್ಲಿಯ ವಿದ್ಯಾರ್ಥಿ ನಿಲಯದಲ್ಲಿ ಎಲ್ಲಿ ನೋಡಿದರೂ ಸೋರುತ್ತಿರುವ ಕೋಣೆಗಳು, ಶಿಥಿಲ ವ್ಯವಸ್ಥೆಯಿಂದ ಕೂಡಿದೆ. ಅಲ್ಲದೆ ಇಲ್ಲಿಯ ವಸತಿ ನಿಲಯಕ್ಕೆ ವಾರ್ಡನ್ ಆಗಿ ಕೆಲಸ ನಿರ್ವಹಿಸುವರು ಮಠಪತಿ ಎಂಬವರು ವಸತಿ ನಿಲಯಕ್ಕೆ ಬರುವುದು ತಿಂಗಳಿಗೆ ಒಮ್ಮೆ ಮಾತ್ರ. ಇಲ್ಲಿಯ ವಸತಿ ನಿಲಯಗಳ ಮೇಲಾಧಿಕಾರಿಯಾಗಿ ಶ್ರೀಮತಿ ಶಿವಲೀಲಾ ಕಣ್ಣೂರು ಅವರಿಗೆ ಇಲ್ಲಿಯ ಸಮಸ್ಯೆ ಬಗ್ಗೆ ಎಷ್ಟೇ ಬಾರಿ ದೂರು ನೀಡಿದರು ಕೂಡ ನಮಗೆ ಸಂಬಂಧವೇ ಇಲ್ಲ ಎಂಬಂತೆ ಕುಳಿತಿದ್ದಾರೆ.

ಸಾರ್ವಜನಿಕರು ಕರೆ ಮಾಡಿದರೆ ಶಿವಲೀಲಾ ಕಲ್ಲೂರ್ ರವರು ಕರೆಗೆ ಉತ್ತರಿಸುವುದೇ ಇಲ್ಲ ಸೋಂಬೇರಿ ವಾರ್ಡನ್ ಜೊತೆಗೆ ದಂಡಪಿಂಡ ರೀತಿ ಕೆಲಸ ಮಾಡುವ ಮೇಲಾಧಿಕಾರಿಗಳಿಗೆ ಯಾವ ಶಬ್ದದಿಂದ ಮಾತನಾಡಬೇಕು ಎಂಬುದು ತಿಳಿಯದಾಗಿದೆ.

ಇಲ್ಲಿಯ ವಿದ್ಯಾರ್ಥಿಗಳ ಪರಿಸ್ಥಿತಿ ಕೇಳಿದರೆ ಯಾವ ಒಬ್ಬ ಪಾಲಕರು ತಮ್ಮ ಮಕ್ಕಳಿಗೆ ಹಾಸ್ಟೆಲ್ನಲ್ಲಿ ಇರುವುದಕ್ಕೆ ಬಿಡುವುದಿಲ್ಲ ಏಕೆಂದರೆ ಇಲ್ಲಿಯ ಶೌಚಾಲಯಕ್ಕೆ ಹೋದರೆ ವಾಂತಿ ಬೇಧಿ ಬರುವುದು ಗ್ಯಾರಂಟಿ ಮತ್ತು ಅಡುಗೆ ಕೆಲಸದವರು ಇದ್ದರೂ ಕೂಡ ಅಲ್ಲಿಯ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಾರೆ ಮತ್ತು ಶೌಚಾಲಯ ಸ್ವಚ್ಛಗೊಳಿಸಲು ಮಕ್ಕಳೇ ಸ್ವಚ್ಛಗೊಳಿಸಬೇಕು ಪ್ರತಿದಿನ ಸರದಿಯಂತೆ ರೂಮಿಗೆ ಒಬ್ಬರು ಶೌಚಾಲಯ ಸ್ವಚ್ಛಗೊಳಿಸಬೇಕು ಇಲ್ಲಿಯ ಮಕ್ಕಳ ನರಕ ಯಾತನೆ ಹೇಳತಿರದು.

ವಸತಿ ನಿಲಯದಲ್ಲಿ ಇರುವ ಮಕ್ಕಳು ಹೇಳುವಂತೆ ಮಳೆ ಬಂದರೆ ಎಲ್ಲಿ ನೋಡಿದರೂ ಸೋರುವ ಕೋಣೆಗಳು ಕೆಲವೊಂದು ಸಲ ನಿಂತ ನೀರಿನಲ್ಲಿ ಮಲಗುವ ಸನ್ನಿವೇಶವೂ ಕೂಡ ಬಂದು ಒದಗಿದೆ ಎಂದು ಹೇಳಿದರು.

ಅಲ್ಲೇ ಇದ್ದ ಒಬ್ಬ ವಿದ್ಯಾರ್ಥಿ ಒಂದು ದಿನ ಕರೆಂಟ್ ಸ್ವಿಚ್ ಬೋರ್ಡ್ ಆನ್ ಮಾಡಲು ಹೋಗಿ ಕರೆಂಟ್ ತಾಗಿ ಸ್ವಲ್ಪದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಇದಕ್ಕೆ ಕಾರಣ ಮುರಿದಿರುವ ಬೋರ್ಡು ಹಾಗೂ ಮುರಿದಿರುವ ಫ್ಯಾನುಗಳು.

ಇದರ ಬಗ್ಗೆ ವಾರ್ಡನ್ಗೆ ಹೇಳಿದರೆ ಇರುವುದಾದರೆ ಇರಿ ಇಲ್ಲವೇ ಇಲ್ಲಿಂದ ಹೊರಟು ಹೋಗಿ ಎಂದು ಹೇಳುತ್ತಾರಂತೆ. ಬಡತನದಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಸಂಕಟವನ್ನು ಯಾರ ಹತ್ತಿರ ಹೇಳಬೇಕು?

ಅಲ್ಲೇ ಕೆಲಸ ನಿರ್ವಹಿಸುವ ಅಡುಗೆ ಸಹಾಯಕರು ಮಕ್ಕಳ ಮೇಲೆ ಗದರಿ ಹೊಡೆಯಲು ಹೋಗುತ್ತಾರಂತೆ. ಇದರಿಂದ ಹೆದರಿದ ಮಕ್ಕಳು ಬಂದ ಎಲ್ಲ ಕಷ್ಟ ವನ್ನು ಸುಮ್ಮನೇ ನುಂಗಿ ಕುಳಿತಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶಿವಲೀಲಾ ಕಣ್ಣೂರು ರವರೆ ನಿಮಗಿದು ಕಾಣುತ್ತಿಲ್ಲವೇ? ಇಲ್ಲಿನ ಅವ್ಯವಸ್ಥೆಗೆ ಕೊನೆಯೆಂದು? ಮಕ್ಕಳು ದೇವರ ಸಮಾನರು ಎನ್ನುತ್ತಾರೆ ಅಂತಹ ಮಕ್ಕಳನ್ನೇ ಇಂತಹ ಸಮಸ್ಯೆಗೆ ತಳ್ಳುತ್ತಿದ್ದಾರೆ ಎಂದರೆ ಇವರೆಂಥ ನಾಚಿಕೆ ಬಿಟ್ಟ ಭ್ರಷ್ಟ ಅಧಿಕಾರಿಗಳಿರಬೇಕು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅಂತಹ ನಮ್ಮ ದೇಶದ ಪ್ರಜೆಗಳು ಮುಂದೆ ದೇಶವನ್ನು ಹಾಗೂ ಅದರ ವ್ಯವಸ್ಥೆಯನ್ನು ಗೌರವಿಸ ಬೇಕೆ ಹೊರತು ಅದರ ಹವ್ಯವಸ್ಥೆಯಲ್ಲಿ ನೊಂದು, ಬೆಂದು ಸಮಾಜದ ವಿರೋಧಿಗಳಾಗಬಾರದು.
ಈ ವಿಚಾರದ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮಕ್ಕಳ ಕಷ್ಟಕ್ಕೆ ನೆರವಾಗಬೇಕು ಮತ್ತು ಬಾಲಕರ ವಸತಿ ನಿಲಯದ ಅವ್ಯವಸ್ಥೆಗೆ ಕಾರಣರಾದ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂಬುದು ಪತ್ರಿಕೆಯ ಆಗ್ರಹವಾಗಿದೆ.

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

11 hours ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

11 hours ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

11 hours ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

11 hours ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

12 hours ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

12 hours ago