ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ‍್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ಮಹಿಳೆಯ ಮೇಲೆ ಹಲ್ಲೆಯ ಘಟನೆ ಇದೀಗ ಬೆಳಕಿಗೆ ಬಂದಿದೆ.

ಈ ಘಟನೆ ಜೂನ್ 14ರಂದು ಬೆಂಗಳೂರಿನ ಜಯನಗರದ ಬಾಟಾ ಶೋರೂಂ ಬಳಿ ನಡೆದಿದೆ. ನಗರದಲ್ಲಿ ಬೈಕ್ ಟ್ಯಾಕ್ಸಿಗಳ ನಿಯಮ ಉಲ್ಲಂಘನೆ ಬಗ್ಗೆ ಜನರಲ್ಲಿ ಅಸಮಾಧಾನ ಮೂಡುತ್ತಿರುವಂತೆಯೇ, ರ‍್ಯಾಪಿಡೋ ಚಾಲಕ ಸುಹಾಸ್ ಎಂಬಾತ ತನ್ನ ಅಕ್ರಮ ಚಾಲನೆಯು ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಪ್ರಾಥಮಿಕ ಮಾಹಿತಿಯಂತೆ, ಬುದ್ಧಿವಂತಿಕೆಯಿಂದ ಚಾಲಕನ ರ್‍ಯಾಶ್ ಡ್ರೈವಿಂಗ್ ಕುರಿತು ಪ್ರಶ್ನೆ ಮಾಡಿದ ಮಹಿಳೆಗೆ, ಚಾಲಕನು ಉಗ್ರವಾಗಿ ಪ್ರತಿಕ್ರಿಯಿಸಿದ್ದು, ಮಾತಿಗೆ ಮಾತು ಬಿಸಿ ಆಗಿ ಆಕ್ರೋಶಕ್ಕೆ ತಿರುಗಿ ಹಲ್ಲೆಯಾಗಿ ಅಂತ್ಯವಾಗಿದೆ.

ಈ ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದ್ದು, ಸಂತ್ರಸ್ತ ಮಹಿಳೆ ಸುರಕ್ಷಿತವಾಗಿದ್ದಾಳೆ. ಘಟನೆಯ ನಂತರ ಆರೋಪಿತ ಚಾಲಕ ಸ್ಥಳದಿಂದ ಪರಾರಿಯಾದ ಕಾರಣ, ಈಗಾಗಲೇ ಪೊಲೀಸರು ಅವನಿಗಾಗಿ ಶೋಧ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಸೇವೆ ಬಗ್ಗೆ ಈಗಾಗಲೇ ಹಲವಾರು ಪ್ರಶ್ನೆಗಳು ಎದ್ದು ಬಂದಿರುವಾಗ, ಈ ಘಟನೆ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕರು ಈ ಪ್ರಕರಣದ ಪರಿ ಗಂಭೀರವಾಗಿ ಪರಿಗಣಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

 

Related News

error: Content is protected !!