
ಬೆಂಗಳೂರು: ಆರ್ಬಿಐನಿಂದ ತಿರಸ್ಕರಿಸಲಾದ ಕರೆನ್ಸಿ ನೋಟುಗಳನ್ನು ಕಡಿತ ದರದಲ್ಲಿ ಮಾರುವ ಭರವಸೆ ನೀಡಿ ನಿವೃತ್ತ ಬ್ಯಾಂಕ್ ಅಧಿಕಾರಿಗೆ 15 ಲಕ್ಷ ರೂ. ವಂಚನೆ ಮಾಡಿದ ಆರೋಪದ ಹಿನ್ನೆಲೆ, ಪೀಣ್ಯ ಠಾಣಾ ಪೊಲೀಸರು ಹೈರರ್ೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ನಾಗರಾಜ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು ವಿಷಯ ತಿಳಿದು ಬಂದಿದೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ರಾಧಾ ಕೃಷ್ಣನಾಯಕ್ ಅವರು ನೀಡಿದ ದೂರುದೋಷದ ಮೇರೆಗೆ, ಹಿರಿಯೂರು ಠಾಣೆಯ ಹೆಡ್ ಕಾನ್ಸ್ಟೇಬಲ್ ನಾಗರಾಜ್ ಮತ್ತು ಅವನ ಸಹೋದ್ಯೋಗಿಗಳು ಕಿರಣ್ ಕುಮಾರ್, ಗಜೇಂದ್ರ ಮತ್ತು ಪ್ರಭು ಅವರನ್ನು ಪೀಣ್ಯ ಪೊಲೀಸ್ ವಲಯದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ನಿವಾಸಿಗಳು ಎಂದು ತಿಳಿದುಬಂದಿದ್ದು, ಪ್ರಕರಣದ ಸಂಬಂಧಿ ವಿಚಾರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.